ಸುದೀಪ್ ಮಾತಿಗೆ ತಲೆ ಬಾಗಿ ದೊಡ್ಡ ನಿರ್ಧಾರ ತೆಗೆದುಕೊಂಡ ಪ್ರಶಾಂತ್, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ಸಂಭರ್ಗಿ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲಿಂದಲೂ ಹಲವಾರು ಬಾರಿ ಜಗಳಗಳ ಮೂಲಕ ಸದ್ದು ಮಾಡಿದ್ದಾರೆ, ಯಾರ ಜೊತೆ ನೋಡಿದರೂ ಬಹುತೇಕ ವಾದ ವಿವಾದಗಳಲ್ಲಿ ಬಾಗಿಯಾಗಿರುವ ಪ್ರಶಾಂತ್ ರವರು ಮನೆಯಲ್ಲಿ ತಮ್ಮದೇ ಆದ ಒಂದು ರೀತಿಯ ಹೊಸ ವಿವಾದಗಳನ್ನು ಸೃಷ್ಟಿ ಮಾಡುವುದರಲ್ಲಿ ಪ್ರಸಿದ್ದರು ಎಂದರೆ ತಪ್ಪಾಗಲಾರದು. ಇನ್ನು ಇದೆ ಸಮಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಶಾಂತ್ ರವರು, ಮನೆಯ ಗುಂಪುಗಾರಿಕೆಯ ವಿರುದ್ಧ ಧ್ವನಿ ಎತ್ತಿದ್ದಾರೆ ಎಂದು ಅಭಿಮಾನಿಗಳು ಕೂಡ ಇಷ್ಟ ಪಡಲು ಆರಂಭಿಸಿದ್ದಾರೆ.

ಕೆಲವೊಂದು ವಿಚಾರಗಳಲ್ಲಿ ಪ್ರಶಾಂತ್ ರವರು ನಿಜ ಹೇಳುತ್ತಿದ್ದಾರೆ ಅದೇ ಸಮಯದಲ್ಲಿ ಅವರು ಹೇಳುವ ರೀತಿ ತಪ್ಪಿದೆ ಎಂಬುದು ಪ್ರಶಾಂತ್ ರವರ ಅಭಿಮಾನಿಗಳ ವಾದ. ಆದರೆ ಅದೇ ಸಮಯದಲ್ಲಿ ಪ್ರಶಾಂತ್ ರವರ ವಿಚಾರದಲ್ಲಿ ಮನೆಯ ಮಂದಿ ನಡೆದುಕೊಳ್ಳುತ್ತಿರುವ ರೀತಿ ಕೂಡ ಸರಿಯಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಅದೇ ಕಾರಣಕ್ಕಾಗಿ ಪ್ರಶಾಂತ್ ರವರು ಎಲ್ಲರ ಮನಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಇಷ್ಟು ವಾರಗಳ ಕಾಲ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.

ಆದರೆ ಇಷ್ಟೆಲ್ಲ ಜನಪ್ರಿಯತೆಯ ನಡುವೆ ಪ್ರಶಾಂತ್ ರವರ ಅಭಿಮಾನಿಗಳು ಕೂಡ ಪ್ರಶಾಂತ್ ವಿಚಾರ ಸರಿ ಇದ್ದರೂ ಕೂಡ ಅವರು ನಡೆದುಕೊಳ್ಳುತ್ತಿರುವ ರೀತಿ ಸರಿ ಇಲ್ಲ ಎಂದು ಒಪ್ಪೋಕ್ಕೊಳ್ಳುತ್ತಿದ್ದರು, ಅದೇ ಕಾರಣಕ್ಕಾಗಿ ಇರಬೇಕು ಸುದೀಪ್ ರವರು ಕಿವಿ ಮಾತು ಹೇಳುವಾಗ ಮಾತನಾಡಿದ ಸುದೀಪ್ ರವರು, ಪ್ರಶಾಂತ್ ರವರೆ ಇದು ಒಂದು ಥರ ಕತೆ ಅಲ್ಲ, ಆದರೂ ಕೂಡ ಒಂದು ರೀತಿಯ ಕತೆ ಹಾಗೆ ಕೇಳಿಸಿಕೊಳ್ಳಿ, ಎಂದು ಮಾತನ್ನು ಆರಂಭಿಸಿ, ಮಗುವಿಗೆ ಅತ್ತರೆ ಜಾಸ್ತಿ ಹಾಲು ಸಿಗುತ್ತೆ ಎಂಬುದು ಸತ್ಯ, ಆದರೆ ಹಾಗೆಂದು ಅಳುವನ್ನು ಜಾಸ್ತಿ ಮಾಡಿದರೇ, ನೋಡುವವರಿಗೆ ಎರಡು ತಟ್ಟೋಣ ಅನ್ನಿಸಿಬಿಡತ್ತೆ ಅನ್ನೋದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದರು, ಇದಾದ ಬಳಿಕ ಇದ್ದಕ್ಕಿದ್ದಂತೆ ತಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡಿರುವ ಸುದೀಪ್ ರವರು, ಮನೆಯ ಎಲ್ಲ ಸ್ಪರ್ದಿಗಳ ಜೊತೆ ಆರಾಮಾಗಿ ಇದ್ದಾರೆ, ಹಾಗೂ ಯಾವುದೇ ವಾದಗಳ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದನ್ನು ಕಂಡ ರಘು ರವರು ಕೂಡ ಏನು ಇದು, ಅಂತೂ 10ನೇ ವಾರಕ್ಕೆ ಬದಲಾದಿರಿ. ಇಷ್ಟು ವಾರಗಳಲ್ಲಿ ಎಲ್ಲಾ ಸದಸ್ಯರನ್ನು ನೀವು ಬೆಂಬಲಿಸಿದ್ದು ಇದೇ ಮೊದಲು ಎನಿಸುತ್ತದೆ.

Comments are closed.