ದಾಸ ಪುರಂದರ ಧಾರವಾಹಿಯಲ್ಲಿ ಶ್ರೀನಿವಾಸನಾಯಕ ಎನ್ನುವ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಲನಟ ನಿಜಕ್ಕೂ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಸಿನಿಮಾಗಳಿಗೆ ಸರಿಸಮನಾಗಿ ಕಿರುತೆರೆ ಕ್ಷೇತ್ರದ ಧಾರವಾಹಿಗಳು ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡುತ್ತಿವೆ. ಕೇವಲ ದಾರವಾಹಿಗಳು ಮಾತ್ರವಲ್ಲದೆ ಧಾರವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದರಿಗೂ ಕೂಡ ಜನಮನ್ನಣೆ ಹೆಚ್ಚಾಗಿ ದೊರೆಯುತ್ತದೆ.

ನಮ್ಮ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಹಲವಾರು ಧಾರವಾಹಿಗಳು ಕಾಣಸಿಗುತ್ತವೆ. ಒಂದಲ್ಲ ಒಂದು ಕಾರಣದಿಂದಾಗಿ ಪ್ರೇಕ್ಷಕರ ಮನವನ್ನು ಗೆದ್ದು ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಕೂಡ ಹೊಂದಿರುತ್ತದೆ. ಇಂದು ಅದೇ ರೀತಿಯ ದಾರವಾಹಿ ಒಂದರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಹೌದು ನಾವು ಮಾತನಾಡುತ್ತಿರುವುದು ಜನಪ್ರಿಯ ಧಾರವಾಹಿ ಆಗಿರುವ ದಾಸ ಪುರಂದರ ಧಾರವಾಹಿ ಕುರಿತಂತೆ. ಇತ್ತೀಚಿನ ದಿನಗಳಲ್ಲಿ ಜನಪ್ರಿಯ ಧಾರಾವಾಹಿಗಳಲ್ಲಿ ಇದು ಕೂಡ ಒಂದಾಗಿದೆ.

ದಾಸ ಪುರಂದರ ಧಾರವಾಹಿಯಲ್ಲಿ ಶ್ರೀನಿವಾಸನಾಯಕ ಎನ್ನುವ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಲನಟ ನಿಜಕ್ಕೂ ಯಾರು ಗೊತ್ತಾ?? 4

ಇನ್ನು ಈ ಧಾರವಾಹಿಯಲ್ಲಿ ಬಹುತೇಕ ಎಲ್ಲಾ ಪಾತ್ರದಾರಿಗಳು ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ವೀಕ್ಷಕರ ಮನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಧಾರವಾಹಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಶ್ರೀನಿವಾಸನಾಯಕ ಎನ್ನುವ ಪುಟ್ಟ ಬಾಲಕನ ಪಾತ್ರವನ್ನು ನಿರ್ವಹಿಸಿರುವ ಹುಡುಗನ ಕುರಿತಂತೆ. ಈ ಪಾತ್ರದ ಮೂಲಕ ಬಾಲನಟಿಯಾಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡು ಕಿರುತೆರೆ ಕ್ಷೇತ್ರದಲ್ಲಿ ಮಿಂಚುತ್ತಿದ್ದಾನೆ. ಈತನ ಕುರಿತಂತೆ ಈತನ ಹಿನ್ನೆಲೆಯೇನು ಎಂಬುದನ್ನು ತಿಳಿಯಲು ಪ್ರೇಕ್ಷಕರು ಕೂಡ ಕಾತರರಾಗಿದ್ದಾರೆ.

ಹೀಗಾಗಿ ಇಂದಿನ ಲೇಖನಿಯಲ್ಲಿ ಆ ಹುಡುಗನ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಹೌದು ಗೆಳೆಯರೆ ಶ್ರೀನಿವಾಸನಾಯಕ ಅಥವಾ ಶ್ರೀನಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಹುಡುಗ ಕೇವಲ ಬಾಲನಟ ಮಾತ್ರವಲ್ಲದೆ ವಾಯ್ಸ್ ಓವರ್ ಆರ್ಟಿಸ್ಟ್ ಕೂಡ ಆಗಿದ್ದಾರೆ. ಇನ್ನು ಇವರ ಬೇರೆ ಪ್ರಾಜೆಕ್ಟ್ಗಳ ಕುರಿತಂತೆ ಮಾತನಾಡುವುದಾದರೆ ಅತ್ಯಂತ ಜನಪ್ರಿಯ ಧಾರವಾಹಿ ಆಗಿರುವ ಜೀ ಕನ್ನಡ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ಜೂನಿಯರ್ ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇವರೇ.

ದಾಸ ಪುರಂದರ ಧಾರವಾಹಿಯಲ್ಲಿ ಶ್ರೀನಿವಾಸನಾಯಕ ಎನ್ನುವ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಲನಟ ನಿಜಕ್ಕೂ ಯಾರು ಗೊತ್ತಾ?? 5

ಪಾತ್ರ ಚಿಕ್ಕದಾಗಿದ್ದರೂ ಕೂಡ ಕೊಟ್ಟಂತಹ ಅವಕಾಶದಲ್ಲಿ ಚಿಕ್ಕ ಪಾತ್ರದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಮಿಂಚಿರುವ ಖ್ಯಾತಿ ಇವರಿಗೆ ಸಲ್ಲುತ್ತದೆ. ಇವರ ನಿಜವಾದ ಹೆಸರು ಅನುರಾಗ್ ಆಗಿದೆ. ಹಿಟ್ಲರ್ ಕಲ್ಯಾಣ ಗಣೇಶ ಹಬ್ಬದ ಸಂದರ್ಭದಲ್ಲಿ ಕೂಡ ಇವರ ಬಂದು ಪರ್ಫಾರ್ಮೆನ್ಸ್ ನೀಡಿದ್ದರು. ಇನ್ನು ಲಾಕ್ಡೌನ್ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದ ಹಿಂದಿ ಡಬ್ಬಿಂಗ್ ಬಾಬಾಸಾಹೇಬ್ ಅಂಬೇಡ್ಕರ್ ಧಾರವಾಹಿಯಲ್ಲಿ ಕೂಡ ಬಾಲ್ಯ ಅಂಬೇಡ್ಕರ್ರವರ ಪಾತ್ರಕ್ಕೆ ಕನ್ನಡದ ವಾಯ್ಸ್ಓವರ್ ನೀಡಿದ್ದು ಇವರೇ.

ಮಿನ್ನಲ್ ಮುರಳಿ ಎನ್ನುವ ಇತ್ತೀಚಿಗಷ್ಟೇ ಸೆನ್ಸೇಷನಲ್ ಸೃಷ್ಟಿಸಿದ್ದ ಮಲಯಾಳಂ ಚಿತ್ರಕ್ಕೆ ಲೀಡಿಂಗ್ ಹುಡುಗನ ಪಾತ್ರಕ್ಕೆ ಧ್ವನಿ ನೀಡಿದ್ದು ಕೂಡ ಇವರೇ. ಅನುರಾಗ್ ಡ್ರಾಮಾ ಜೂನಿಯರ್ಸ್ ಸೀಸನ್ 3 ರಲ್ಲಿ ಕೂಡ ಕಾಣಿಸಿಕೊಂಡಿದ್ದು ಅಲ್ಲಿಂದಲೇ ಜನಪ್ರಿಯತೆಯನ್ನು ಪಡೆದುಕೊಂಡು ಬಂದಿದ್ದಾರೆ. ಇನ್ನು ಇವರು ಹುಟ್ಟಿದ ಇಸವಿ ಯಾವುದು ಎಂಬುದು ಸರಿಯಾಗಿ ತಿಳಿದಿಲ್ಲ ನವೆಂಬರ್ 10ರಂದು ಜನಿಸಿದ್ದಾರೆ.

ದಾಸ ಪುರಂದರ ಧಾರವಾಹಿಯಲ್ಲಿ ಶ್ರೀನಿವಾಸನಾಯಕ ಎನ್ನುವ ಪಾತ್ರದಲ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಬಾಲನಟ ನಿಜಕ್ಕೂ ಯಾರು ಗೊತ್ತಾ?? 6

ಅನುರಾಗ್ ರವರ ತಾಯಿಯ ಹೆಸರು ಕಲಾವತಿ ಗಂಗಾಧರಯ್ಯ. ಕೇವಲ ಧಾರವಾಹಿಗಳಲ್ಲಿ ನಟನೆ ಮತ್ತು ವಾಯ್ಸ್ಓವರ್ ಮಾತ್ರವಲ್ಲದೆ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದು ಕೆಲವೊಂದು ಸಿನಿಮಾಗಳು ಈಗಾಗಲೇ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ನೀವು ಕೂಡ ದಾಸ ಪುರಂದರ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದಾರೆ ಆ ಧಾರವಾಹಿಯಲ್ಲಿ ಅನುರಾಗ್ ನಿರ್ವಹಿಸುತ್ತಿರುವ ಶ್ರೀನಿವಾಸ ನಾಯಕ ಪಾತ್ರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.