ಪುನೀತ್ ಮಾಡಿದ ಕೆಲಸ ನೋಡಿ ಸುಮ್ಮನೆ ಹೊಗಳಿ ಕುಳಿತಿಲ್ಲ ಈ ಅಭಿಮಾನಿ. ಟಿವಿ ಅಲ್ಲಿ ನೋಡಿ ಕೈ ಮುಗಿದ ಜನರ ನಡುವೆ ಈತ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಲಾವಿದನಿಗೆ ಕೊನೆಯಿಲ್ಲ, ಆತ ಇದ್ದಾಗಲೂ ಜನರನ್ನ ಮನರಂಜಿಸುತ್ತಾ, ಸಮಾಜಕ್ಕೊಂದು ಸಂದೇಶ ನೀಡುತ್ತಿರುತ್ತಾನೆ. ಹೋದ ಮೇಲೂ ಜನ ಅವನನ್ನ ನೋಡುತ್ತಲೇ ತಮ್ಮ ನೋವುಗಳನ್ನ ಮರೆಯುತ್ತಾರೆ. ಅಪ್ಪು ಅಲಿಯಾಸ್ ಪುನೀತ್ ರಾಜ್ ಕುಮಾರ್ ಇದಕ್ಕೊಂದು ದಂತಕತೆಯಿದ್ದಂತೆ. ಹೋದ ನಂತರವೂ ಅಪ್ಪು ತಮ್ಮ ಕಣ್ಣುಗಳನ್ನ ದಾನ ಮಾಡಿದ್ದರು. ಅಪ್ಪುರವರ ಎರಡು ಕಣ್ಣುಗಳಿಂದ ಒಟ್ಟು ನಾಲ್ಕು ಜನರಿಗೆ ದೃಪ್ಠಿಭಾಗ್ಯ ದೊರೆತಿತ್ತು.

ಅಪ್ಪುರವರ ನೇತ್ರದಾನದ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ,ಬಹಳಷ್ಟು ಜನ ನಾ ಮುಂದು, ತಾ ಮುಂದು ಎಂಬಂತೆ ಒಬ್ಬರ ನಂತರ ಒಬ್ಬರು ತಮ್ಮ ಕಾಲಾನಂತರ ದೇಹದಾನ ಹಾಗೂ ನೇತ್ರದಾನ ಮಾಡಲು ಮುಂದೆ ಬಂದರು ಅಪ್ಪು ಅಭಿಮಾನಿಗಳ ಸಂಘದಿಂದ ಅನ್ನದಾನ, ರಕ್ತದಾನ, ಆರೋಗ್ಯ ತಪಾಸಣೆಯಂತಹ ಶಿಬಿರಗಳು ಬಹಳಷ್ಟು ನಡೆಯುತ್ತಿವೆ. ಇಂದಿಗೂ ಕಂಠೀರವ ಸ್ಟುಡಿಯೋ ಬಳಿ ಅಪ್ಪು ನೋಡಲು ಜನಸಾಗರವೇ ಹರಿದು ಬರುತ್ತಿದೆ.

ಪುನೀತ್ ಮಾಡಿದ ಕೆಲಸ ನೋಡಿ ಸುಮ್ಮನೆ ಹೊಗಳಿ ಕುಳಿತಿಲ್ಲ ಈ ಅಭಿಮಾನಿ. ಟಿವಿ ಅಲ್ಲಿ ನೋಡಿ ಕೈ ಮುಗಿದ ಜನರ ನಡುವೆ ಈತ ಮಾಡಿದ್ದೇನು ಗೊತ್ತೇ?? 2

ಈಗ ಹಾದಿಯಲ್ಲಿ ಅಪ್ಪು ಅಭಿಮಾನಿಯೊಬ್ಬರು ಸಾಗುತ್ತಿದ್ದಾರೆ. ಅಪ್ಪು ಅಭಿಮಾನಿಯಾಗಿರುವ ಮೌಂಟೇನ್ ಗುರುಪ್ರಕಾಶ್ ಗೌಡ ಎಂಬುವವರು ಕರ್ನಾಟಕದಿಂದ ಹಿಮಾಲಯಕ್ಕೆ ಸೈಕಲ್ ಯಾತ್ರೆಯನ್ನು ಇದೇ ಡಿಸೆಂಬರ್ 17 ರಿಂದ ಕೈಗೊಳ್ಳಲಿದ್ದಾರಂತೆ. ಕರ್ನಾಟಕದಿಂದ ಶುರುವಾಗುವ ಈ ಯಾತ್ರೆ ಹಿಮಾಲಯಕ್ಕೆ ತಲುಪಿ ಪುನಃ ಅಲ್ಲಿಂದ ಶುರುವಾಗಿ ಕಂಠೀರವ ಸ್ಟುಡಿಯೋದಲ್ಲಿ ಕೊನೆಗೊಳ್ಳುತ್ತದೆಯಂತೆ. ಅದಲ್ಲದೇ ಮಾರ್ಗದುದ್ದಕ್ಕೂ ಅಪ್ಪು ಜೀವನದ ಪ್ರಮುಖ ಘಟನಾವಳಿಗಳು ಹಾಗೂ ಕಾಲಾನಂತರ ನೇತ್ರದಾನದ ಬಗ್ಗೆ ಅರಿವು ಮೂಡಿಸುತ್ತಾರಂತೆ. ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿರುವ ಇವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ನಿಮ್ಮ ಸೈಕಲ್ ಯಾತ್ರೆ ಶುಭವಾಗಲಿ ಎಂದು ಹಾರೈಸೋಣ. ಅಪ್ಪು ಅಭಾಮಾನಿ ಕೈಗೊಂಡಿರುವ ಈ ಸೈಕಲ್ ಯಾತ್ರೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.