ವಿವಾದಲ್ಲಿ ಸುಳಿಯಲ್ಲಿ ಸಿಲಿಕಿರುವಾಗಲು ಕೂಡ ಯಶ್ ರವರನ್ನು ಮರೆಯದ ಅಜಯ್ ರಾವ್. ಸಂದರ್ಶನದಲ್ಲಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೂ ವಿವಾದಗಳಿಗೂ ಹೊಸತೇನಿಲ್ಲ. ಪ್ರತಿ ತಿಂಗಳಿಗೊಮ್ಮೆ ವಿವಾದ ಕೇಳಿ ಬರುತ್ತಲೇ ಇರುತ್ತದೆ. ಈಗ ಎದ್ದಿರುವ ವಿವಾದವೆಂದರೇ ಅದು ಲವ್ ಯೂ ರಚ್ಚು ಸಿನಿಮಾದ ವಿವಾದ. ನಿರ್ಮಾಪಕ ಗುರು ದೇಶ್ ಪಾಂಡೆಯವರಿಗೂ ಹಾಗೂ ನಾಯಕ ಅಜಯ್ ರಾವ್ ನಡುವಿನ ಮನಸ್ತಾಪ ಸುದ್ದಿಯಾಗುತ್ತಿದೆ. ಚಿತ್ರ ಇದೇ ಡಿಸೆಂಬರ್ 31 ರಂದು ಬಿಡುಗಡೆಯಾಗುತ್ತಿದ್ದು, ರಚಿತಾ ರಾಮ್ ಮತ್ತೊಮ್ಮೆ ಹಾಟ್ ದೃಶ್ಯಗಳಲ್ಲಿ ಅಭಿನಯಿಸಿದ ಕಾರಣ ಸಿನಿಮಾ ಸಖತ್ ಸೌಂಡ್ ಮಾಡುತ್ತಿದೆ.

ಈ ನಡುವೆ ಚಿತ್ರದ ನಿರ್ದೇಶನದ ವಿಷಯಕ್ಕೆ ನಟ ಅಜಯ್ ರಾವ್ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ನಡುವಿನ ಮನಸ್ತಾಪದ ಕಾರಣ ಚಿತ್ರದ ಪ್ರಮೋಶನ್ ಗೆ ಗೈರು ಹಾಜರಾಗಿದ್ದರು‌. ಇದಕ್ಕೆ ಪ್ರತಿಕ್ರಿಯಿಸಿದ ಗುರು ದೇಶಪಾಂಡೆ, ಅಜಯ್ ಸಿನಿಮಾಗಳು ಹಿಟ್ ಆಗಿರೋದು ಕಡಿಮೆ, ಈ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಹಾಗಾಗಿ ನಿರ್ದೇಶನದ ಕ್ರೇಡಿಟ್ ಸಹ ತನಗೆ ಬೇಕೆಂದು ಕೂತಿದ್ದಾರೆ. ಒಂದು ವೇಳೆ ಈ ಘಟನೆಯಿಂದ ನನ್ನ ಸಿನಿಮಾ ಸೋತರೇ ನಾನು ಅಜಯ್ ರನ್ನ ಸುಮ್ಮನೇ ಬಿಡುವುದಿಲ್ಲ ಎಂದು ಹೇಳಿದ್ದರು.

ವಿವಾದಲ್ಲಿ ಸುಳಿಯಲ್ಲಿ ಸಿಲಿಕಿರುವಾಗಲು ಕೂಡ ಯಶ್ ರವರನ್ನು ಮರೆಯದ ಅಜಯ್ ರಾವ್. ಸಂದರ್ಶನದಲ್ಲಿ ಹೇಳಿದ್ದೇನು ಗೊತ್ತೇ?? 2

ಈಗ ಅದಕ್ಕೆ ಪ್ರತಿಕ್ರಿಯಿಸಿರುವ ನಟ ಅಜಯ್ ರಾವ್, ಚಿತ್ರ ಸೋಲಿಸುವುದು, ಬಿಡುವುದು ಪ್ರೇಕ್ಷಕರ ಕೈಲಿದೆ. ಎಲ್ಲರೂ ಗೆಲ್ಲಬೇಕು ಎಂದೇ ಸಿನಿಮಾ ಮಾಡುವುದು. ನಾನು ಸೋತಾಗ ನಟ ಯಶ್ ನನಗೆ ಬಹಳ ಧೈರ್ಯ ತುಂಬಿದ್ದಾರೆ. ನಾನು ಅವರು ಬಹಳ ವರ್ಷಗಳಿಂದ ಸ್ನೇಹಿತರು. ಅವರಂತೆಯೇ ಎಲ್ಲಾ ಕನ್ನಡದ ಸಿನಿಮಾ ನಟರು ಗೆಲ್ಲಬೇಕೆಂದೇ ನಟಿಸುವುದು. ಆದರೇ ಕೆಲವೊಮ್ಮೆ ಸಣ್ಣ ತಪ್ಪುಗಳಿಂದ ಚಿತ್ರ ಸೋಲುತ್ತದೆ. ನಾವು ಒಂದು ಸಣ್ಣ ತಪ್ಪು ಮಾಡದಂತೆ ನಮ್ಮ ಸಿನಿಮಾ ಇರಬೇಕು ಎಂದು ಹೇಳಿದ್ದಾರೆ. ಈ ವೇಳೆ ಯಶ್ ಬಗ್ಗೆ ಮಾತನಾಡುತ್ತಾ ನಟ ಅಜಯ್ ರಾವ್ ಭಾವುಕರಾದ ಪ್ರಸಂಗ ಸಹ ನಡೆಯಿತು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.