ನಮಸ್ಕಾರ ಸ್ನೇಹಿತರೇ ಈಗಾಗಲೇ ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಪಂಚಭಾಷಾ ಚಿತ್ರ ಪುಷ್ಪ ಚಿತ್ರದ ಟ್ರೈಲರ್ ಕನ್ನಡದಲ್ಲಿ ಕೂಡ ಬಿಡುಗಡೆ ಯಾಗಿರುವುದು ನಿಮಗೆಲ್ಲ ಗೊತ್ತೇ ಇದೆ. ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಪುಷ್ಪಾ ಚಿತ್ರ ರ’ಕ್ತಚಂದನದ ಕಳ್ಳಸಾಗಾಣಿಕೆ ಮಾಡುವವರ ಸುತ್ತ ನಡೆದಿರುವಂತಹ ಕಥೆಯಾಗಿದೆ. ಇನ್ನು ಈ ಚಿತ್ರದಲ್ಲಿ ಮೊದಲ ಬಾರಿಗೆ ಅಲ್ಲುಅರ್ಜುನ್ ರವರು ರಗಡ್ ಆಗಿ ಹಳ್ಳಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ.
ಬೇರೆ ಎಲ್ಲಾ ಸಿನಿಮಾಗಳಲ್ಲಿ ಸ್ಟೈಲಿಶ್ ಆಗಿ ಕಾಣುತ್ತಿದ್ದ ಅಲ್ಲುಅರ್ಜುನ್ ರವರು ಮೊದಲ ಬಾರಿಗೆ ಮೈತುಂಬ ಧೂಳನ್ನು ಮೆತ್ತಿಕೊಂಡಿದ್ದಾರೆ. ಇನ್ನು ಪುಷ್ಪ ಚಿತ್ರದಲ್ಲಿ ಕನ್ನಡಮೂಲದ ನಟರಾಗಿರುವ ರಶ್ಮಿಕ ಮಂದಣ್ಣ ಹಾಗೂ ಡಾಲಿ ಧನಂಜಯ್ ಇಬ್ಬರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್ ಈಗಾಗಲೇ ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಕೆಲವೇ ದಿನಗಳಲ್ಲಿ ಪಡೆದುಕೊಂಡು ಬಿಡುಗಡೆಗೂ ಮುನ್ನವೇ ಪಂಚ ಭಾಷೆಗಳನ್ನು ಕೂಡ ದೊಡ್ಡಮಟ್ಟದಲ್ಲಿ ಹವಾ ಸೃಷ್ಟಿಸುವ ಪ್ರಯತ್ನವನ್ನು ಮಾಡಿದೆ. ಆದರೆ ಈಗ ಪುಷ್ಪ ಚಿತ್ರ ಎನ್ನುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಇನ್ನು ಕನ್ನಡಿಗರ ಕೆಂಗಣ್ಣಿಗೆ ಪುಷ್ಪ ಚಿತ್ರದ ಟ್ರೈಲರ್ ಗುರಿಯಾಗಿರುವುದಕ್ಕೆ ಮುಖ್ಯ ಕಾರಣ ರಶ್ಮಿಕ ಮಂದಣ್ಣ ನವರು ಎಂದು ಹೇಳಬಹುದಾಗಿದೆ. ಯಾಕೆಂದರೆ ಕನ್ನಡದ ಮೂಲದವರಾಗಿದ್ದರೂ ಕೂಡ ರಶ್ಮಿಕ ಮಂದಣ್ಣ ನವರು ಕನ್ನಡದ ಡಬ್ಬಿಂಗ್ ಮಾಡಿಲ್ಲ ಎಂಬುದಾಗಿ ಎಲ್ಲರಿಗೂ ಕೂಡ ಬೇಸರವಾಗಿದೆ. ಇದರಿಂದಾಗಿ ಡಿಸೆಂಬರ್ 17 ರಂದು ಬಿಡುಗಡೆಯಾಗಲಿರುವ ಪುಷ್ಪಾ ಚಿತ್ರಕ್ಕೆ ಕನ್ನಡಿಗರು ಸೇರಿ ಬುದ್ಧಿ ಕಲಿಸೋಣ ಎಂಬುದಾಗಿ ಯೋಜನೆ ಹಾಕಿಕೊಂಡಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.