ಸುಖಾ ಸುಮ್ಮನೆ ಪ್ರಥಮ್ ಹೆಸರು ಎಳೆದು ತಂಡ ಅಮೂಲ್ಯ ಗೌಡ: ಮೊದಲ ವಾರವೇ ನಿಮ್ಮನ್ನು ಹೊರಕಳುಹಿಸುತ್ತೇವೆ ಎಂದ ಫ್ಯಾನ್ಸ್. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಬಿಗ್ ಬಾಸ್ ಕನ್ನಡ ಸೀಸನ್ 9 ಈಗಾಗಲೇ ಪ್ರಾರಂಭವಾಗಿದ್ದು ನಿರೀಕ್ಷೆಯಂತೆ ಮೊದಲ ದಿನದಿಂದಲೇ ಆರೋಪ ಪ್ರತ್ಯಾರೋಪಗಳು ಸ್ಪರ್ಧಿಗಳ ನಡುವೆ ಪ್ರಾರಂಭವಾಗಿದೆ. ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ ಪ್ರಥಮ್ ಅವರ ಹೆಸರನ್ನು ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಎತ್ತಿದ್ದಾರೆ.

ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಕಾರ್ಯಕ್ರಮದ ನಿರೂಪಕ ಆಗಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಳಿ ಮನೆಯ ಒಳಗೆ ನನ್ನದೇ ಆದ ಸ್ಪೇಸ್ ಬೇಕು, ಕೆಲವೊಂದು ವಿಚಾರಗಳು ನನಗೆ ಆಗಿಬರುವುದಿಲ್ಲ ಎಂಬುದಾಗಿ ಹೇಳಿದ್ದಾರೆ. ಪರಸ್ಪರ ಮನೆ ಒಳಗೆ ಗೌರವವನ್ನು ಕೊಟ್ಟು ಮಾತನಾಡಬೇಕು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಬಿಗ್ ಬಾಸ್ ಅನ್ನು ನೋಡಿದ್ದೀರಾ ಎಂಬುದಾಗಿ ಕಿಚ್ಚ ಸುದೀಪ್ ಅವರು ಕೇಳಿದ ಪ್ರಶ್ನೆಗೆ ಹೌದು ನಾನು ನೋಡುತ್ತಿದ್ದೆ ಒಂದು ಸಮಯದಲ್ಲಿ ಬಿಗ್ ಬಾಸ್ ನಲ್ಲಿ ಪ್ರಥಮ್ ಅವರು ಎಲ್ಲರಿಗೆ ತೊಂದರೆ ಕೊಡುತ್ತಿದ್ದು ನನಗೆ ಇಷ್ಟ ಆಗುತ್ತಿರಲಿಲ್ಲ ಎಂಬುದಾಗಿ ಹೇಳಿದ್ದಾರೆ. ಆಗ ಕಿಚ್ಚ ಇದಕ್ಕೆ ನೀವು ಮನೆಯಲ್ಲಿದ್ದೆ ಹಾಗೆ ಅನಿಸಿತು ನಾನು ಇಲ್ಲೇ ಇದ್ದೆ ಎಂಬುದಾಗಿ ಹಾಸ್ಯಾಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ.

ಸುಖಾ ಸುಮ್ಮನೆ ಪ್ರಥಮ್ ಹೆಸರು ಎಳೆದು ತಂಡ ಅಮೂಲ್ಯ ಗೌಡ: ಮೊದಲ ವಾರವೇ ನಿಮ್ಮನ್ನು ಹೊರಕಳುಹಿಸುತ್ತೇವೆ ಎಂದ ಫ್ಯಾನ್ಸ್. ಯಾಕೆ ಗೊತ್ತೇ? 2

ಅಮೂಲ್ಯ ಗೌಡ ಅವರು ಯಾವುದೇ ಕಾರಣವಿಲ್ಲದೆ ಸುಖಾ ಸುಮ್ಮನೆ ಪ್ರಥಮ್ ಅವರ ಹೆಸರನ್ನು ಬಿಗ್ ಬಾಸ್ ವೇದಿಕೆ ಮೇಲೆ ಎಳೆದು ತಂದಿದ್ದು ಪ್ರಥಮ್ ಅವರ ಅಭಿಮಾನಿಗಳಿಗೆ ಅಸಮಾಧಾನವನ್ನು ಮೂಡಿಸಿದೆ. ಇದಕ್ಕಾಗಿ ಅಮೂಲ್ಯ ಗೌಡ ಅವರನ್ನು ಪ್ರಥಮ್ ಅಭಿಮಾನಿಗಳು ಮೊದಲ ವಾರವೇ ನಿಮ್ಮನ್ನು ಹೊರ ಕಳಿಸುತ್ತೇವೆ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಮೂಲಕ ಬರೆದುಕೊಂಡಿದ್ದಾರೆ.