ಮತ್ತೊಮ್ಮೆ ಯಾರೂ ಊಹಿಸದ ರೀತಿಯಲ್ಲಿ ಸುದೀಪ್ ಅವರು ಮತ್ತೊಮ್ಮೆ ಸ್ಪರ್ಧಿಗಳಿಗೆ ಚಾಟಿ ಬೀಸಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಪ್ರಖ್ಯಾತ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಈ ಬಾರಿ ಯಾರೂ ಊಹಿಸದ ರೀತಿಯಲ್ಲಿ ಕೆಲವೊಂದು ಘಟನೆಗಳು ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಒಂದು ರೀತಿಯಲ್ಲಿ ಒಳ್ಳೆಯ ಘಟನೆಗಳು ಅಂದರೆ ಪ್ರೇಕ್ಷಕರಿಗೆ ಮನರಂಜನೆ ನೀಡುವ ಘಟನೆಗಳು ಕೂಡ ನಡೆಯುತ್ತಿವೆ ಆದರೆ ಮತ್ತೊಂದೆಡೆ ಕೆಲವೊಂದು ಕಹಿ ಘಟನೆಗಳು ಕೂಡ ನಡೆಯುತ್ತಿವೆ.

ಮನರಂಜನೆ ವಿಷಯಗಳ ಕುರಿತು ನೀವು ಬಿಗ್ ಬಾಸ್ ನೋಡುತ್ತಿದ್ದರೆ ನಿಮಗೆ ತಿಳಿಯುತ್ತದೆ ಇನ್ನು ಕಹಿ ಘಟನೆ ಕುರಿತು ಮಾತನಾಡುವುದಾದರೆ ಕಿಚ್ಚ ಸುದೀಪ್ ರವರು ಪ್ರತಿ ವಾರವೂ ಮನೆಯಲ್ಲಿ ನಡೆಯುತ್ತಿದ್ದ ವಿಚಾರಗಳನ್ನು ಚರ್ಚೆ ಮಾಡಿ ಪಂಚಾಯತಿ ನಡೆಸುವ ಮೂಲಕ ಸ್ಪರ್ಧಿಗಳನ್ನು ಸರಿ ಹಾದಿಯಲ್ಲಿ ನಡೆಯುವಂತೆ ಮಾಡುತ್ತಿದ್ದರು ಹಾಗೂ ಬೇರೆ ಹಾದಿಯಲ್ಲಿ ನಡೆಯುತ್ತಿದ್ದ ಸ್ಪರ್ಧಿಗಳಿಗೆ ಸರಿಯಾದ ಮಾರ್ಗ ತೋರಿಸಿ ತಕ್ಕ ರೀತಿಯಲ್ಲಿ ಉತ್ತರ ನೀಡುತ್ತಿದ್ದರು.

ಆದರೆ ಕಳೆದ ಮೂರು ವಾರದಿಂದ ಕಿಚ್ಚ ಸುದೀಪ್ ರವರು ಇಲ್ಲದೆ ಬಿಗ್ ಬಾಸ್ ಅಷ್ಟಾಗಿ ಮನರಂಜನೆ ನೀಡುತ್ತಿಲ್ಲ ಎಂದು ಪ್ರೇಕ್ಷಕರು ಹೇಳುತ್ತಿದ್ದರು. ಅದೇ ಸಮಯದಲ್ಲಿ ಮನೆಯ ಮುಂದೆ ಕೂಡ ಕ್ರೀಡಾಸ್ಪೂರ್ತಿ ಮರೆತು ಹಾಡುತ್ತಿದ್ದರು, ಅದೇ ಕಾರಣಕ್ಕಾಗಿ ಯಾರು ಊಹಿಸದ ರೀತಿಯಲ್ಲಿ ವಾಯ್ಸ್ ನೋಟ್ ಮೂಲಕ ಪ್ರತಿಯೊಬ್ಬರು ಸ್ಪರ್ಧಿಗಳಿಗೂ ಕಿವಿ ಮಾತು ಹೇಳುವ ಮೂಲಕ ಬಿಗ್ ಬಾಸ್ ಮನೆಯಲ್ಲಿ ಹಾದಿ ತಪ್ಪಿರುವ ಸ್ಪರ್ಧಿಗಳನ್ನು ಸರಿ ಹಾದಿಗೆ ತರುವ ಪ್ರಯತ್ನ ಮಾಡಿದ್ದಾರೆ. ಹಾಗೂ ಕೆಲವೊಂದು ಸ್ಪರ್ದಿಗಳಿಗೆ ನೇರವಾಗಿ ಹಾಗೂ ಕೆಲವರಿಗೆ ಪರೋಕ್ಷವಾಗಿ ಅವರ ತಪ್ಪಿನ ಕುರಿತು ಅರಿವಾಗುವಂತೆ ಮಾಡಿದ್ದಾರೆ.