Biggboss Kannada: ಶುರುವಾಯ್ತು ಗುರೂಜಿಯ ಆಟ: ದಿಡೀರ್ ಎಂದು ದಿವ್ಯ ಉರುಡುಗ ಮೇಲೆ ಗಂಭೀರ ಆರೋಪ ಮಾಡಿದ ಆರ್ಯವರ್ಧನ್. ಹೇಳಿದ್ದೇನು ಗೊತ್ತೇ??

Biggboss Kannada: ಬಿಗ್ ಬಾಸ್ (Bigg Show) ಶೋನ ಈ ಸೀಸನ್ ನಲ್ಲಿ ಹೆಚ್ಚಿನ ಮನರಂಜನೆ ನೀಡಿದ ಸ್ಪರ್ಧಿಗಳಲ್ಲಿ ಒಬ್ಬರು ಆರ್ಯವರ್ಧನ್ ಗುರುಜಿ. ಓಟಿಟಿ (Bigg Boss OTT) ಸೀಸನ್ ಇಂದಲೂ ತಮ್ಮದೇ ಆದ ಶೈಲಿಯಲ್ಲಿ ಆಟವಾಡುತ್ತಾ, ಟಾಸ್ಕ್ ಗಳಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಿ, ಅಗ್ರಸ್ಥಾನದಲ್ಲೇ ನಿಲ್ಲುತ್ತಿದ್ದರು ಆರ್ಯವರ್ಧನ್ (Aryavardhan). ಓಟಿಟಿ ಸೀಸನ್ ಮತ್ತು ಜನಪ್ರಿಯತೆ ಇಂದ ಟಿವಿ ಸೀಸನ್ ಗು ಬಂದ ಆರ್ಯವರ್ಧನ್ ಅವರು ಇಲ್ಲಿ ಕೂಡ ಅದೇ ರೀತಿ ಜನರಿಗೆ ಭಾರಿ ಮನರಂಜನೆ ನೀಡಿದರು.

ಗುರೂಜಿ ಅಡುಗೆ ಮಾಡುತ್ತಿದ್ದ ರೀತಿ, ಮನೆಯಲ್ಲಿದ್ದ ಬೇರೆ ಸ್ಪರ್ಧಿಗಳ ಜೊತೆಗೆ ತಮಾಷೆ ಮಾಡಿಕೊಂಡು ಇರುತ್ತಿದ್ದ ರೀತಿ ಜನದರಿಗೆ ತುಂಬಾ ಇಷ್ಟವಾಗಿತ್ತು, ಅಷ್ಟೇ ಅಲ್ಲದೆ ಗುರೂಜಿ ತಾವು ಯಾರ ಜೊತೆಗೆ, ಹೇಗೆ, ಯಾವಾಗ ಮಾತನಾಡಬೇಕು ಎನ್ನುವುದನ್ನು ಕೂಡ ಚೆನ್ನಾಗಿ ತಿಳಿದುಕೊಂಡಿದ್ದರು. ಇವರು ಖಂಡಿತವಾಗಿಯು ಫಿನಾಲೆಗೆ ಬರುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು, ಆದರೆ ಅದು ಉಲ್ಟಾ ಆಗಿದೆ, ಫಿನಾಲೆ ವರೆಗು ಬಂದಿದ್ದ ಗುರೂಜಿ, ಫಿನಾಲೆಗೆ ಬರಲಿಲ್ಲ, ಮಿಡ್ ವೀಕ್ ಎಲಿಮಿನೇಶನ್ ನಲ್ಲಿ ಎಲಿಮಿನೇಟ್ ಆದರು. ಜನರಿಗೂ ಇದು ಶಾಕ್ ಆಗಿತ್ತು.. ಇದನ್ನು ಓದಿ..Biggboss Kannada: ಅಂದು ಬಿಗ್ ಬಾಸ್ ಇಷ್ಟವಿಲ್ಲದೆ ಹೋಗಿದ್ದ ರಾಜಣ್ಣ, ಹೊರಹೋದಾಗ ಮುಲಾಜಿಲ್ಲದೆ ಪಡೆದ ಸಂಭಾವನೆ ಎಷ್ಟು ಗೊತ್ತೇ??

Biggboss Kannada: ಶುರುವಾಯ್ತು ಗುರೂಜಿಯ ಆಟ: ದಿಡೀರ್ ಎಂದು ದಿವ್ಯ ಉರುಡುಗ ಮೇಲೆ ಗಂಭೀರ ಆರೋಪ ಮಾಡಿದ ಆರ್ಯವರ್ಧನ್. ಹೇಳಿದ್ದೇನು ಗೊತ್ತೇ?? 2

ಆರ್ಯವರ್ಧನ್ ಗುರೂಜಿ ಅವರಿಗು ತಾವು ಮಿಡ್ ನೈಟ್ ಎಲಿಮಿನೇಟ್ ಆಗಿದ್ದಕ್ಕೆ ಬೇಸರವಿದೆ. ಖುದ್ದು ಆರ್ಯವರ್ಧನ್ ಅವರೇ ಇದರ ಬಗ್ಗೆ ಮಾತನಾಡಿ, ನಾನು ಎಲ್ಲರಿಗೂ ಇಷ್ಟವಾಗಿದ್ದೇ, ಜನರಿಗೆ ಮನರಂಜನೆ ಕೊಡುತ್ತಿದ್ದೇ ಮಧ್ಯರಾತ್ರಿ ಹೇಗೆ ಎಲಿಮಿನನೇಟ್ ಆದೇ ಎಂದು ಗೊತ್ತಾಗುತ್ತಿಲ್ಲ ಎಂದು ಬೇಸರ ಮಾಡಿಕೊಂಡಿರುವ ಗುರೂಜಿ, ದಿವ್ಯ ಉರುಡುಗ (Divya Uruduga) ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಿವ್ಯ ಉರುಡುಗಗಿಂತ ಕಳಪೆ ಆಗಿ ನಾನು ಆಡಿದ್ದೀನಾ, ಅವರು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಪಡಿದಿಲ್ಲ, ಉತ್ತಮವನ್ನು ಪಡೆದಿಲ್ಲ, ಆ ಹುಡುಗಿ ಫೈನಲ್ಸ್ ತಲುಪಿತು, ನಾನು ಎಲಿಮಿನೇಟ್ ಆದೆ ಎಂದು ಗುರೂಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ.. Kannada News: ಎಲ್ಲವನ್ನು ತಾಳ್ಮೆಯಿಂದ ನೋಡುತ್ತಲೇ ರಶ್ಮಿಕಾ ಗೆ ಬಿಗ್ ಶಾಕ್ ಕೊಟ್ಟ ಅಲ್ಲೂ ಅರ್ಜುನ್: ಮೆರೆಯುತ್ತಿದ್ದ ರಶ್ಮಿಕಾ ನೇರವಾಗಿ ಪಾತಾಳಕ್ಕೆ. ಏನಾಗಿದೆ ಗೊತ್ತೆ??