Kannada News: ಡಿ ಬಾಸ್ ರವರ ಬಹು ನಿರೀಕ್ಷಿತ ಚಿತ್ರಕ್ಕೆ ಅಡ್ಡಗಾಲು ಹಾಕಿದ ನಿರ್ಮಾಪಕ ಉಮಾಪತಿ: ಡಿ ಬಾಸ್ ಗೆ ಶಾಕ್. ಉಮಾಪತಿ ಮಾಡಿದ್ದೇನು ಗೊತ್ತೇ??

Kannada News: ನಿರ್ಮಾಪಕ ಉಮಾಪತಿ (Umapathy Srinivas) ನಿರ್ಮಿಸುತ್ತಿರುವ ಐತಿಹಾಸಿಕ ಚಿತ್ರ ಸಿಂಧೂರ ಲಕ್ಷ್ಮಣ (Sindhura Lakshmana) ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರೀಕರಣ ಆರಂಭವಾಗುವ ಮೊದಲೇ ಈ ಚಿತ್ರ ಸಾಕಷ್ಟು ತಿಂಗಳುಗಳಿಂದ ದೊಡ್ಡಮಟ್ಟದ ಸಂಚಲನ ಸೃಷ್ಟಿಸಿದೆ. ಇಂತಹದೊಂದು ಚಿತ್ರ ನಿರ್ಮಿಸುವುದಾಗಿ ಉಮಾಪತಿ ಘೋಷಿಸಿದ ದಿನದಿಂದಲೂ ಇವತ್ತಿನವರೆಗೂ ಬೇರೆ ಬೇರೆ ಕಾರಣಗಳಿಗೆ ಸಿಂಧೂರ ಲಕ್ಷ್ಮಣ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಈ ಚಿತ್ರದ ನಾಯಕರಾಗಿ ಯಾರು ಅಭಿನಯಿಸಲಿದ್ದಾರೆ ಎನ್ನುವುದರ ಕುರಿತು ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯಾಗಿತ್ತು. ಕೊನೆಗೆ ಈ ಚಿತ್ರದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯಿಸಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿತ್ತು. ಆದರೆ ಇದೀಗ ನಿರ್ಮಾಪಕ ಉಮಾಪತಿ ಬೇರೆಯದೇ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.

ಉತ್ತರ ಕರ್ನಾಟಕದ ಸಾಹಸಿ ವೀರನೊಬ್ಬನ ಕಥೆ ಸಿಂಧೂರ ಲಕ್ಷ್ಮಣ. ಸಿಂಧೂರ ಲಕ್ಷ್ಮಣನ ಕುರಿತಾದ ನಾಟಕಗಳು ಕರ್ನಾಟಕದಾದ್ಯಂತ ಪ್ರಸಿದ್ಧವಾಗಿವೆ. ಇದೀಗ ಅದೇ ಕಥೆಯನ್ನು ಆಧರಿಸಿ ಚಿತ್ರ ತಯಾರಿಸಲಾಗುತ್ತಿದೆ. ಮೊದಲು ಈ ಚಿತ್ರದಲ್ಲಿ ನಾಯಕ ನಟನಾಗಿ ಯಾರು ಅಭಿನಯಿಸಲಿದ್ದಾರೆ ಎನ್ನುವುದರ ಕುರಿತು ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿತ್ತು. ಆನಂತರ ದರ್ಶನ್ ರವರು ಚಿತ್ರದಲ್ಲಿ ಸಿಂಧೂರ ಲಕ್ಷ್ಮಣನಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಬಹುತೇಕ ಫೈನಲ್ ಆಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಉಮಾಪತಿ ಮತ್ತು ದರ್ಶನ ರವರ ನಡುವಿನ ಬಾಂಧವ್ಯ ಅಷ್ಟಾಗಿ ಮೊದಲಿನಂತೆ ಚೆನ್ನಾಗಿಲ್ಲ. ಹೀಗಿರುವಾಗ ದರ್ಶನ್ ರವರನ್ನು ಈ ಸಿನಿಮಾದಲ್ಲಿ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ತೆಗೆದುಕೊಳ್ಳಲು ಉಮಾಪತಿ ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚಿಗಷ್ಟೇ ಮಾಧ್ಯಮದವರ ಜೊತೆಗೆ ಮಾತನಾಡಿರುವ ಉಮಾಪತಿ ಸಿಂಧೂರ ಲಕ್ಷ್ಮಣ ಚಿತ್ರದ ಕುರಿತು ಅಪ್ಡೇಟ್ಸ್ ನೀಡಿದ್ದಾರೆ. ಇದನ್ನು ಓದಿ.. Kannada Astrology: ವೃಷಭ ರಾಶಿ ಪ್ರವೇಶ ಮಾಡಿ ದೂಳೆಬ್ಬಿಸಿದ ಮಂಗಳ ದೇವ: ಇದರಿಂದ ಯಾವ ರಾಶಿಗಳಿಗೆ ಶುಭ ಗೊತ್ತೇ? ಈ ರಾಶಿಗಳ ಕಷ್ಟವೆಲ್ಲ ಮುಗಿಯಿತು.

Kannada News: ಡಿ ಬಾಸ್ ರವರ ಬಹು ನಿರೀಕ್ಷಿತ ಚಿತ್ರಕ್ಕೆ ಅಡ್ಡಗಾಲು ಹಾಕಿದ ನಿರ್ಮಾಪಕ ಉಮಾಪತಿ: ಡಿ ಬಾಸ್ ಗೆ ಶಾಕ್. ಉಮಾಪತಿ ಮಾಡಿದ್ದೇನು ಗೊತ್ತೇ?? 2

ಈ ಚಿತ್ರದ ನಾಯಕನಾಗಿ ಯಾರು ಅಭಿನಯಿಸಲಿದ್ದಾರೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ “ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ ಯಾರು ಸೂಕ್ತ ನಟ ಎನ್ನುವುದು ನನ್ನ ಮನಸ್ಸಿನಲ್ಲಿದೆ. ಅವರ ಜೊತೆಗೆ ಮಾತನಾಡಿ, ಅಂತಿಮಗೊಂಡು ಅಡ್ವಾನ್ಸ್ ನೀಡಿದ ಬಳಿಕವೇ ನಾನು ಅದನ್ನು ರಿವೀಲ್ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ. ಈ ಮೂಲಕ ದರ್ಶನ್ ರವರು ಸಿಂಧೂರ ಲಕ್ಷ್ಮಣದಲ್ಲಿ ನಟಿಸುತ್ತಿಲ್ಲ ಎನ್ನುವ ಅಂಶವನ್ನು ಪರೋಕ್ಷವಾಗಿ ಹೇಳಿದ್ದಾರೆ. ಇದಲ್ಲದೆ ಡಾಲಿ ಧನಂಜಯ್ ಸಿಂಧೂರ ಲಕ್ಷ್ಮಣ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈಗಾಗಲೇ ಧನಂಜಯ (Dhananjay) ಅವರೊಂದಿಗೆ ಮಾತನಾಡಲಾಗಿದ್ದು, ಸಿಂಧೂರ ಲಕ್ಷ್ಮಣದ ಪಾತ್ರಕ್ಕೆ ಅವರು ಈಗಾಗಲೇ ತಯಾರಿ ನಡೆಸಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿವೆ. ಸಿಂಧೂರ ಲಕ್ಷ್ಮಣ ಚಿತ್ರವು ಮುಂದಿನ ವರ್ಷ ಫೆಬ್ರವರಿಯಲ್ಲಿ ಸೆಟ್ಟೇರಲಿದೆ. ಇದನ್ನು ಓದಿ.. Cricket News: ವಿಶ್ವಕಪ್ ನಲ್ಲಿ ಸಂಪೂರ್ಣ ವಿಫಲರಾಗಿದ್ದ ದಿನೇಶ್ ಕಾರ್ತಿಕ್ ಭವಿಷ್ಯದ ಬಗ್ಗೆ ಮಾಹಿತಿ ಕೊಟ್ಟ ಆಯ್ಕೆ ಸಮಿತಿ ಸದಸ್ಯ. ಹೇಳಿದ್ದೇನು ಗೊತ್ತೆ?? ಮತ್ತೆ ಬರುತ್ತಾರೆಯೇ?