Kannada Story: ಸಲೀಸಾಗಿ ಅಮಾಯಕಳಂತೆ ಇದ್ದು, ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತೇ? ಈಕೆಯ ಸ್ಟೋರಿ ಕಂಡು ಬೆಚ್ಚಿ ಬಿದ್ದ ಕರ್ನಾಟಕ. ಏನಾಗಿದೆ ಗೊತ್ತೇ?

Kannada Story: ಈಗಿನ ಕಾಲದಲ್ಲಿ ತಂದೆ ತಾಯಿ ನೋಡಿ ಮದುವೆ ಮಾಡುವುದಕ್ಕಿಂತ ಲವ್ ಮ್ಯಾರೇಜ್ ಗಳು ಹೆಚ್ಚಾಗಿದೆ. ಆದರೆ ಲವ್ ಮ್ಯಾರೇಜ್ ಮಾಡಿಕೊಂಡ ಎಲ್ಲರೂ ಕೂಡ ಸಂತೋಷವಾಗಿಲ್ಲ. ಇದರಲ್ಲೂ ಅನೇಕ ಜನರು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ, ಗಂಡ ಹೆಂಡತಿ ನಡುವೆ ವೈಮನಸ್ಸು ಶುರುವಾಗಿ ಅದರಿಂದ ಹೆಚ್ಚಿನ ತೊಂದರೆಗಳೇ ಉಂಟಾಗಿದೆ. ಇದೀಗ ಇಂಥದ್ದೇ ಒಂದು ಘಟನೆ ನಮ್ಮ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.

Kannada Story: ಸಲೀಸಾಗಿ ಅಮಾಯಕಳಂತೆ ಇದ್ದು, ಅತ್ತೆಯನ್ನು ಏನು ಮಾಡಿದ್ದಾಳೆ ಗೊತ್ತೇ? ಈಕೆಯ ಸ್ಟೋರಿ ಕಂಡು ಬೆಚ್ಚಿ ಬಿದ್ದ ಕರ್ನಾಟಕ. ಏನಾಗಿದೆ ಗೊತ್ತೇ? 2

ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು, ಈಕೆಯ ಹೆಸದು ಮೆಹರುನ್ನಿ ಗಂಡನ ಹೆಸರು ಸುಭಾನ್. ಪ್ರೀತಿ ಮಾಡಿ ಮನೆಯವರನ್ನು ಹೇಗೋ ಮಾಡಿ ಒಪ್ಪಿಸಿ ಮದುವೆಯು ಆದರು. ಆದರೆ ಇಬ್ಬರ ದಾಂಪತ್ಯ ಹೆಚ್ಚು ದಿನಗಳ ಕಾಲ ಚೆನ್ನಾಗಿ ನಡೆಯಲಿಲ್ಲ. ಕೆಲ ಸಮಯದಲ್ಲಿ ಗಂಡನ ಜೊತೆಗೆ ಮೆಹರುನ್ನಿ ಜಗಳ ಆಡಲು ಶುರು ಮಾಡಿದಳು. ತಾವಿಬ್ಬರು ಬೇರೆ ಬೇರೆಯಾಗಿ ವಾಸ ಮಾಡಬೇಕು ಎಂದು ಒತ್ತಡ ಹಾಕಲು ಶುರು ಮಾಡಿದಳು. ಇದನ್ನು ಓದಿ..News: ಅಕ್ಕನನ್ನು ಪ್ರೀತಿಸು ಪ್ರೀತಿಸು ಎಂದು ಹಿಂದೆ ಬಿದ್ದ – ಆಕೆ ಒಪ್ಪಿಕೊಂಡಿಲ್ಲ ಎಂದು ಆಕೆಯ ತಮ್ಮನ್ನು ಏನು ಮಾಡಿದ್ದಾನೆ ಗೊತ್ತೇ? ಇಂತವರು ಇರ್ತಾರ?

ಸುಭಾನ್ ತನ್ನ ತಾಯಿಯನ್ನು ಬಿಟ್ಟು ಬೇರೆಯಾಗಿ ಬರುವುದಿಲ್ಲ ಎಂದು ಹೇಳಿದ. ಇದರಿಂದ ಮೆಹರುನ್ನಿಗೆ ಅತ್ತೆಯ ಮೇಲೆ ದ್ವೇಷ ಶುರುವಾಯಿತು. ಇದರಿಂದ ಗಂಡ ಮತ್ತು ಅತ್ತೆಗೆ ಏನಾದರೂ ಗತಿ ಕಾಣಿಸಬೇಕು ಎಂದು ಒಂದು ಪ್ಲಾನ್ ಹಾಕಿದಳು. ಮೇ 22ರಂದು ತನ್ನ ಸಹೋದರನನ್ನು ಮನೆಗೆ ಕರೆಸಿದಳು. ಆಗಲು ಗಂಡನ ಜೊತೆಗೆ ಜಗಳವಾಯಿತು.ಇಬ್ಬರ ನಡುವೆ ಮಾತಿನ ಚಕಾಮಕಿ ಶುರುವಾಯಿತು.

ಮೆಹರುನ್ನಿ ಮತ್ತು ಆಕೆಯ ಸಹೋದರ ಇಬ್ಬರು ಸೇರಿ ಸುಭಾನ್ ಮತ್ತು ಅವನ ತಾಯಿಯ ಮೇಲೆ ಹಲ್ಲೆ ನಡೆಸಿದರು. ಇದರಿಂದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅಕ್ಕಪಕ್ಕದವರು ಅಮ್ಮ ಮಗನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಚಿಕಿತ್ಸೆ ಕೊಟ್ಟ ನಂತರ ಸುಭಾನ್ ಚೇತರಿಸಿಕೊಂಡಿದ್ದು, ಆತನ ತಾಯಿ ಕೆಲ ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿ ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಪೊಲೀಸರು ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Business Idea: ರಿಸ್ಕ್ ಇಲ್ಲದೆ ಇರುವ ಹಾಗೆ ಈ ಉದ್ಯಮ ಮಾಡಿ, ತಿಂಗಳಿಗೆ ಕನಿಷ್ಠ 50 ಸಾವಿರ ನಿಮ್ಮ ಜೇಬಿಗೆ ಲಾಭ. ಏನು ಮಾಡಬೇಕು ಗೊತ್ತೇ?