ಮತ್ತೆ ಸಿನಿಮಾ ಜಗತ್ತಿಗೆ ಎಂಟ್ರಿ ಕೊಟ್ಟ ದಳಪತಿ, ಮೊದಲ ಸಿನೆಮಾಗೆ ಟಾಪ್ ನಾಯಕ ಮತ್ತು ನಾಯಕಿ ಫಿಕ್ಸ್, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ನಿರ್ಮಾಣ ಮಾಡುತ್ತಿರುವ ಚಿತ್ರವೊಂದಕ್ಕೆ ಎಸ್ ನಾರಾಯಣ ನಿರ್ದೇಶನ ಮಾಡುತ್ತಿರುವುದು ಈಗಾಗಲೇ ಸುದ್ದಿಯಾಗಿದೆ. ಹೆಚ್ ಡಿ ಕುಮಾರಸ್ವಾಮಿಯವರ ನಿರ್ಮಾಣದಲ್ಲಿ ಮೂಡಿಬಂದಿರುವ ‘ಚಂದ್ರಚಕೋರಿ’, ‘ಸೂರ್ಯವಂಶ’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್ ನ್ನು ತಕ್ಕಮಟ್ಟಿಗೆ ಕೊಳ್ಳೆಹೊಡೆದಿತ್ತು ಎನ್ನಬಹುದು. ಕುಮಾರಸ್ವಾಮಿ ಇದೀಗ ಮತ್ತೆ ತಮ್ಮ ಇಷ್ಟದ ನಿರ್ದೇಶಕರಾಗಿರುವ ಕಲಾ ಸಾಮ್ರಾಟ ಎಸ್ ನಾರಾಯಣ ಅವರೊಂದಿಗೆ ಚಿತ್ರ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಸಂಬಂಧ ಮೊದಲ ಹಂತದ ಮಾತುಕತೆಯನ್ನು ಮುಗಿಸಿದ್ದಾರಂತೆ.

ಇನ್ನು ಬಹಳ ವರ್ಷಗಳ ಬಳಿಕ ಕುಮಾರ ಸ್ವಾಮಿ ಹಾಗೂ ಎಸ್, ನಾರಾಯಣ ಅವರು ಸೇರಿ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಾರೆ ಎಂದರೆ ಪ್ರೇಕ್ಷಕರಲ್ಲಿ ಕುತೂಹಲ ಮನೆ ಮಾಡಿದೆ, ನಿರೀಕ್ಷೆಯೂ ಬೆಟ್ಟದಷ್ಟಿದೆ. ಇನ್ನು ಈ ಚಿತ್ರಕ್ಕೆ ಕಮಲಾ ಹಾಸನ್ ನಾಯಕರಾಗಿ ಹಾಗೂ ಐಶ್ಚರ್ಯಾ ರೈ ಬಚ್ಚನ್ ನಾಯಕಿಯಾಗಿ ನಟಿಸುತ್ತಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಈ ಚಿತ್ರ ಇರ್ಮಾಣದ ಬಗ್ಗೆ ಸಂದರ್ಶನ ವೊಂದರಲ್ಲಿ ಮಾತನಾಡಿದ ಸ್ ನಾರಾಯಣ್, ’ನಾನು ಹಾಗೂ ಕುಮಾರಸ್ವಾಮಿಯವರು 2004-05 ರಲ್ಲೇ ಚಿತ್ರ ನಿರ್ಮಾಣದ ಬಗ್ಗೆ ಮಾತನಾಡಿದ್ವಿ. ಆದರೆ ಅವರು ಮುಖ್ಯಮಂತ್ರಿಯಾದ ನಂತರ ನಾವು ಯಾವುದೇ ರೀತಿಯಲ್ಲಿ ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮುಂದುವರೆಯಲು ಆಗಲಿಲ್ಲ. ಇದೀಗ ಮತ್ತೆ ಸಿನಿಮಾ ನಿರ್ಮಾಣ ಮಾಡಲು ಪ್ಲಾನ್ ಮಾಡುತ್ತಿದ್ದೇವೆ’ ಎಂದಿದ್ದಾರೆ. ಇನ್ನು ಇದಕ್ಕೆ ನಾಯಕನಾಗಿ ಕಮಲಾ ಹಾಸನ್ ಅವರನ್ನು ಆಯ್ಕೆ ಮಾಡಿ ಅವರೊಂದಿಗೆ ಮಾತನಾಡಲು ನಿರ್ಧರಿಸಿದ್ದೇವು. ಈ ಚಿತ್ರ ವ್ಯಾಸರಾಯ ಬಲ್ಲಾಳ ರ ಕಾದಂಬರಿ ಆಧಾರಿತ ಚಿತ್ರ ಎಂದು ಚಿತ್ರದ ಬಗ್ಗೆ ಸಣ್ಣ ಹಿಂಟ್ ಕೊಟ್ಟಿದ್ದಾರೆ ಎಸ್. ನಾರಾಯಣ್.

ಕುಮಾರಸ್ವಾಮಿಯವರ ನಿರ್ಮಾಣ ಎಂದರೆ ಬಂದವಾಳವೂ ದೊಡ್ಡ ಮಟ್ತದಲ್ಲಿಯೇ ಇರುತ್ತದೆ ಎಂದಿದ್ದಾರೆ ನಿರ್ದೇಶಕ ಎಸ್. ನಾರಾಯಣ್. ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯವರ ಮೊದಲ ಚಿತ್ರ ಜಾಗ್ವಾರ್ ಗೆ ಬಹು ದೊಡ್ಡ ಮೊತ್ತದ ಬಂಡವಾಳ ಹೂಡಿದ್ದರು, ನಿರ್ಮಾಪಕ ಕುಮಾರಸ್ವಾಮಿ.