ಅಪರೂಪದ ಜೋಡಿಯ ಮದುವೆ ಏನೋ ಆಯಿತು: ಆದರೆ ಮದುವೆ ಆದ ಎರಡೇ ದಿನಕ್ಕೆ ಏನಾಗಿದೆ ಹೋಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೇ ತಿರುಪತಿಯಲ್ಲಿ ತಮಿಳು ಚಿತ್ರರಂಗದ ಹಾಗೂ ಕಿರುತೆರೆಯ ಖ್ಯಾತ ನಟಿ ಹಾಗೂ ನಿರೂಪಕಿಯಾಗಿರುವ ಮಹಾಲಕ್ಷ್ಮಿ ಹಾಗೂ ಚಿತ್ರರಂಗದ ಖ್ಯಾತ ನಿರ್ಮಾಪಕ ಆಗಿರುವ ರವೀಂದ್ರ ಚಂದ್ರಶೇಖರ್ ರವರು ಮದುವೆಯಾಗಿದ್ದರು. ಇವರಿಬ್ಬರ ಮದುವೆ ಎನ್ನುವುದು ತಿರುಪತಿಯಲ್ಲಿ ಸರಳವಾಗಿ ನಡೆದಿದ್ದರೂ ಕೂಡ ರಿಸೆಪ್ಶನ್ ಚೆನ್ನೈನಲ್ಲಿ ಅದ್ದೂರಿ ಆಗಿಯೇ ನಡೆದಿದೆ. ರವೀಂದ್ರನ್ ಚಂದ್ರಶೇಖರ್ ಅವರು ನಿರ್ಮಾಣ ಮಾಡಿರುವ ಸಿನಿಮಾದಲ್ಲಿಯೇ ಮಹಾಲಕ್ಷ್ಮಿಯವರು ನಟಿಸಿದ್ದಾರೆ. ಎಲ್ಲಿಂದ ಪ್ರಾರಂಭವಾದ ಇವರಿಬ್ಬರ ಸ್ನೇಹ ಎನ್ನುವುದು ಪ್ರೀತಿಗೆ ತಿರುಗಿ ಈಗ ಇಬ್ಬರೂ ಕೂಡ ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿದ್ದಾರೆ.

ಮದುವೆಯಾದ ಸಂದರ್ಭದಲ್ಲಿ ಎಲ್ಲರೂ ಕೂಡ ಇವರಿಬ್ಬರ ಮದುವೆ ಯಾವುದೋ ಸಿನಿಮಾದ ಚಿತ್ರೀಕರಣದ ದೃಶ್ಯ ಎಂಬುದಾಗಿ ಸುಳ್ಳೆಂದು ಎಂದು ಭಾವಿಸಿದ್ದರು. ಆದರೆ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಮದುವೆ ಆಗಿರುವ ಫೋಟೋಗಳನ್ನು ವಿಶೇಷ ಕ್ಯಾಪ್ಶನ್ ಜೊತೆಗೆ ಹಂಚಿಕೊಳ್ಳುವ ಮೂಲಕ ದೃಢೀಕರಿಸಿದ್ದಾರೆ. ಇವರಿಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದ್ದು ಮಹಾಲಕ್ಷ್ಮಿ ಅವರು ಇದಕ್ಕೂ ಮುನ್ನ ಅನಿಲ್ ಎನ್ನುವ ವ್ಯಕ್ತಿಯನ್ನು ಮದುವೆಯಾಗಿ ಒಬ್ಬ ಗಂಡು ಮಗನನ್ನು ಕೂಡ ಪಡೆದುಕೊಂಡಿದ್ದಾರೆ. ಇನ್ನು ಮದುವೆಯಾಗಿ ಕೆಲವೇ ದಿನಗಳಾಗಿದ್ದು ಇವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋಗಳನ್ನು ರೋಮ್ಯಾಂಟಿಕ್ ಬರಹಗಳೊಂದಿಗೆ ಪೋಸ್ಟ್ ಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿದ್ದಾರೆ.

ಅಪರೂಪದ ಜೋಡಿಯ ಮದುವೆ ಏನೋ ಆಯಿತು: ಆದರೆ ಮದುವೆ ಆದ ಎರಡೇ ದಿನಕ್ಕೆ ಏನಾಗಿದೆ ಹೋಗಿದೆ ಗೊತ್ತೇ?? 2

ಪ್ರೀತಿಯು ಪರಿಪೂರ್ಣವಾಗ ಬೇಕಾಗಿಲ್ಲ ಅದು ನಿಜವಾದರೆ ಸಾಕು ನಮ್ಮದು ನಿಜವಾದ ಪ್ರೀತಿ ಎಂಬುದಾಗಿ ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಹಾಲಕ್ಷ್ಮಿ, ನೀವು ನನ್ನ ಹೃದಯವನ್ನು ಕದಿದ್ದೀರಿ ಪ್ರೀತಿಯ ಸಂದೇಶವನ್ನು ಉಳಿಸಿಕೊಳ್ಳುತ್ತೇನೆ ಎಂಬುದಾಗಿ ಕಾಮೆಂಟ್ ಮಾಡಿದರೆ, ರವೀಂದ್ರನ್ ಚಂದ್ರಶೇಖರ್ ಅವರು ನೀನು ಮರೆತಿದ್ದೀಯಾ ಎಂದು ಕಾಣುತ್ತೆ ನನ್ನದು ಎಂದು ಬದಲಾಯಿಸಿಕೊಂಡೆ ಸ್ಪೀಡ್ ಚೆಕ್ ಮಾಡು ಎಂಬುದಾಗಿ ರೋಮ್ಯಾಂಟಿಕ್ ಆಗಿ ಬರೆದುಕೊಂಡಿದ್ದಾರೆ. ಇಲ್ಲಿ ನೆಟ್ಟಿಗರ ರಿಯಾಕ್ಷನ್ ಕೂಡ ಸಾಕಷ್ಟು ಮನರಂಜನೆ ನೀಡುವಂತಿದೆ ಎಂಬುದನ್ನು ಮಿಸ್ ಮಾಡುವಂತಿಲ್ಲ.