ಇದ್ದಕ್ಕಿದ್ದ ಹಾಗೆ ಪವಿತ್ರ ಹಾಗೂ ನರೇಶ್ ರವರ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್: ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದ ಪವಿತ್ರ ಹಾಗೂ ನರೇಶ್. ಯಾಕೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನರೇಶ್ ರವರು ನಟಿ ಪವಿತ್ರ ಲೋಕೇಶ್ ರವರನ್ನು ಮದುವೆಯಾಗಿದ್ದಾರೆ ಎನ್ನುವ ವಿಚಾರಗಳು ಹೊರಬಂದ ಮೇಲಿಂದ ಅದರ ಕುರಿತಂತೆ ಇರುವ ಸಾರ್ವಜನಿಕರ ಆಸಕ್ತಿಯನ್ನು ವುದು ಗಗನಕ್ಕೇರಿದೆ ಎಂದರೆ ತಪ್ಪಾಗಲಾರದು. ಇದು ಎಷ್ಟರ ಮಟ್ಟಿಗೆ ಸತ್ಯ ಅಥವಾ ಸುಳ್ಳು ಎಂಬುದನ್ನು ತಿಳಿದುಕೊಳ್ಳಲು ಸಾರ್ವಜನಿಕರು ಪ್ರತಿಯೊಂದು ಟಿವಿ ಮಾಧ್ಯಮಗಳನ್ನು ದಿನ ಬಿಡದಂತೆ ವೀಕ್ಷಿಸುತ್ತಿದ್ದಾರೆ.

ಇನ್ನು ಈ ಪ್ರಕರಣದಲ್ಲಿ ಕೂಡ ದಿನದಿಂದ ದಿನಕ್ಕೆ ಹೊಸ ಹೊಸ ಬೆಳವಣಿಗೆಗಳು ಕಂಡುಬರುತ್ತಿದ್ದು ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಲು ಇದುವರೆಗೂ ಕೂಡ ಸಾಧ್ಯವಾಗಿಲ್ಲ. ದಿನದಿಂದ ದಿನಕ್ಕೆ ಆಯಾಮಗಳು ಬದಲಾಗುತ್ತಲೇ ಇವೆ. ಇನ್ನು ನಿನ್ನೆಯಷ್ಟೇ ಮೈಸೂರಿನ ವಿವಿಪುರಂ ನಲ್ಲಿ ಹೋಟೆಲೊಂದರಲ್ಲಿ ತಂಗಿದ್ದ ನರೇಶ್ ಹಾಗೂ ಪವಿತ್ರಲೋಕೇಶ್ ಇಬ್ಬರು ಕೂಡ ಒಂದೇ ರೂಮಿನಲ್ಲಿ ತಂಗಿದ್ದರು. ಈ ವಿಚಾರವನ್ನು ತಿಳಿದುಕೊಂಡ ರಮ್ಯಾ ರಘುಪತಿ ರವರು ರಾತ್ರಿಯ ರೂಮ್ ಒಂದನ್ನು ಬುಕ್ ಮಾಡಿಕೊಂಡು ಬೆಳಗ್ಗೆವರೆಗೂ ಕೂಡ ಅಲ್ಲೇ ಇದ್ದರು. ಬೆಳಗ್ಗೆ ಆದ ನಂತರ ನರೇಶ್ ಹಾಗು ಪವಿತ್ರ ಲೋಕೇಶ್ ರವರ ರೂಮಿನ ಹೊರಗೆ ಬಂದ ಇವರಿಬ್ಬರೂ ಸ್ನೇಹಿತರು ಆಪ್ತರು ಎಂದು ಹೇಳುತ್ತಾರೆ.

ಇದ್ದಕ್ಕಿದ್ದ ಹಾಗೆ ಪವಿತ್ರ ಹಾಗೂ ನರೇಶ್ ರವರ ವಿಚಾರದಲ್ಲಿ ಮತ್ತೊಂದು ಟ್ವಿಸ್ಟ್: ಮತ್ತೊಮ್ಮೆ ಠಾಣೆ ಮೆಟ್ಟಿಲೇರಿದ ಪವಿತ್ರ ಹಾಗೂ ನರೇಶ್. ಯಾಕೆ ಗೊತ್ತೇ? 2

ಆದರೆ ಒಂದೇ ರೂಮಿನಲ್ಲಿ ರಾತ್ರಿಯಿಡೀ ಕಳೆದಿದ್ದಾರೆ ಇದರ ಅರ್ಥ ಏನು ಎಂಬುದಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಉದ್ವಿಗ್ನ ರಾಗಿ ಚಪ್ಪಲಿಯಿಂದ ಹೊಡೆಯಲು ಕೂಡ ಹೋಗಿದ್ದಾರೆ. ಇದಾದ ನಂತರ ಪವಿತ್ರಲೋಕೇಶ್ ಅವರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ ನಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ನಮಗೆ ಜೀವ ಬೆದ’ರಿಕೆ ರಕ್ಷಣೆ ನೀಡಿ ಎಂಬುದಾಗಿ ಕೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಸೈಬರ್ ಕ್ರೈಂ ಪೊಲೀಸ್ ವಿಭಾಗಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ವಿರುದ್ಧ ಅಪಮಾನ ಜನಕ ಹೇಳಿಕೆಗಳನ್ನು ಕೆಲವೊಂದು ನಕಲಿ ಖಾತೆಗಳು ನೀಡುತ್ತಿವೆ ಇದರ ಕುರಿತಂತೆ ಕ್ರಮ ಕೈ ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಕೂಡ ದೂರನ್ನು ಪವಿತ್ರ ಲೋಕೇಶ್ ರವರು ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.