ಚಪ್ಪಾಳೆ ಪಡೆದ ಪ್ರಶಾಂತ್ ಸಂಭರ್ಗಿ ಕಣ್ಣೀರು, ಮನೆಯಿಂದ ಅಚ್ಚರಿಯ ಎಲಿಮಿನೇಷನ್, ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇನ್ನೇನು ಕೇವಲ 15 ದಿನಗಳ ಹೊತ್ತಿಗೆ ಈ ಬಾರಿಯ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಮುಗಿದು ಹೋಗಿರುತ್ತದೆ, ಇಷ್ಟು ಬೆಗಾನ ಅನ್ಕೋಬೇಡಿ, ಮನೆಯಲ್ಲಿ ಸ್ಪರ್ದಿಗಳ ಸಂಖ್ಯೆ ಜಾಸ್ತಿ ಇದ್ದರೂ ಕೂಡ ಮನೆಯಲ್ಲಿ ಎಲಿಮಿನೇಷನ್ ನಡೆದು ಮನೆಯಿಂದ ಐದು ಸ್ಪರ್ದಿಗಳು ಮಾತ್ರ ಉಳಿದುಕೊಳ್ಳುವಂತೆ ಮಾಡಿ ಮನೆಯಲ್ಲಿ ಕಾರ್ಯಕ್ರಮಕ್ಕೆ ಮುಕ್ತಾಯ ಮಾಡುವ ಸಮಯ ಹತ್ತಿರ ಬರುತ್ತಿದೆ. ಹೀಗಿರುವಾಗ ಈ ವಾರ ಒಂದಿಬ್ಬರನ್ನು ಎಲಿಮಿನೇಟ್ ಮಾಡಿದ್ದರೇ ಚೆನ್ನಾಗಿ ಇರುತ್ತಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.

ಹೌದು ಸ್ನೇಹಿತರೇ ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಎಲ್ಲಾ ಸ್ಪರ್ಧಿಗಳನ್ನು ನಗೆಯ ಕಡಲಿನಲ್ಲಿ ತೇಲಿಸಿದ ಕಿಚ್ಚ ಸುದೀಪ್ ರವರು ಈ ಸಮಯದಲ್ಲಿ ಸಾಕಷ್ಟು ನಿರ್ಧಾರಗಳನ್ನು ಕೂಡ ತೆಗೆದು ಕೊಂಡರು ಹಾಗೂ ಮನೆಯ ಮಂದಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಸುರಿಸಿ ಅದರ ಜೊತೆಗೆ ಹಲವಾರು ಸ್ಪರ್ಧಿಗಳಿಗೆ ಸಾಕಷ್ಟು ಸಲಹೆಗಳನ್ನು ಕೂಡ ನೀಡಿದರು, ಅದರಲ್ಲಿಯೂ ಪ್ರಶಾಂತ್ ರವರನ್ನು ಟಾರ್ಗೆಟ್ ಮಾಡುತ್ತಿದ್ದ ಹಾಗೂ ಅವರನ್ನು ಕಳೆದ ವಾರ ಕಳಪೆ ಎಂದು ತಿಳಿಸಿದ ಎಲ್ಲರಿಗೂ ಒಮ್ಮೆಲೆ ಶಾಕ್ ನೀಡಿದ ಸುದೀಪ್ ರವರು ವಾರದ ಕಿಚ್ಚನ ಚಪ್ಪಾಳೆಯನ್ನು ಕೂಡ ಪ್ರಶಾಂತ್ ರವರಿಗೆ ನೀಡಿಬಿಟ್ಟರು.

ಇನ್ನು ಈ ವಾರದಲ್ಲಿ ಸಾಕಷ್ಟು ಕುತೂಹಲಕಾರಿ ವಿಷಯಗಳನ್ನು ತಿಳಿಸಿದ ಕಿಚ್ಚ ಸುದೀಪ್ ಅವರು ಬಹಳ ಅದ್ಭುತವಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಹಾಗೂ ಇದೇ ಸಮಯದಲ್ಲಿ ಎಲಿಮಿನೇಟ್ ಮಾಡುವ ಸಮಯ ಬಂದಾಗ, ಇಂದು ಯಾವುದೇ ಎಲಿಮಿನೇಷನ್ ಇರುವುದಿಲ್ಲ ಹಾಗೂ ವಾರದ ಮಧ್ಯದಲ್ಲಿ ಒಬ್ಬರು ಖಂಡಿತವಾಗಲೂ ಮನೆಯಿಂದ ಹೊರ ಹೋಗುತ್ತಾರೆ ವೇದಿಕೆಯಲ್ಲಿ ನೀನು ನಾನು ನಿನಗೆ ಸಿಗುವುದಿಲ್ಲ ಚೆನ್ನಾಗಿ ಆಟವಾಡಿ ಉಳಿದಿರುವುದು ಕೆಲವೇ ದಿನ ಎಂದು ಎಲ್ಲರಿಗೂ ಧನ್ಯವಾದ ಹೇಳಿ ಕಾರ್ಯಕ್ರಮ ಮುಗಿಸಿ ಬಿಟ್ಟರು. ವಾರದಲ್ಲಿ ಕಡೆಯಿಂದ ಕಣ್ಣೀರು ಹಾಕಿದ್ದ ಪ್ರಶಾಂತ್ ರವರು ಒಂದೆಡೆ ಕಿಚ್ಚನ ಚಪ್ಪಾಳೆಯಿಂದ ನಕ್ಕರೆ ಎಲಿಮಿನೇಷನ್ ಮಧ್ಯದ ವಾರದ ಇರುವುದಿಂದ ಎಲ್ಲರಿಗೂ ಅಚ್ಚರಿ ಮೂಡಿಸಿದೆ.