ಬಾಲಿವುಡ್ ನಲ್ಲಿ ರಶ್ಮಿಕಾ ಕಣ್ಣೀರು: ಖ್ಯಾತ ನಟ ರಣಬೀರ್ ಕಪೂರ್ ಮಾಡಿದ ಕೆಲಸಕ್ಕೆ ಗೊಳೋ ಎಂದು ಅತ್ತದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನ್ಯಾಷನಲ್ ಕೃಷ್ ಆಗಿರುವ ರಶ್ಮಿಕಾ ಮಂದಣ್ಣ ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನ ವಿಜಯ ಯಾತ್ರೆಯನ್ನು ಪೂರೈಸಿ ಬಾಲಿವುಡ್ ಅಂಗಳದಲ್ಲಿ ಕೂಡ ತನ್ನ ಛಾಪನ್ನು ಮೂಡಿಸಲು ಸಜ್ಜಾಗಿ.ನಿಂತಿದ್ದಾರೆ ಎಂದು ಹೇಳಬಹುದಾಗಿದೆ. ಈಗಾಗಲೇ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಚಿತ್ರರಂಗದ ದಂತಕಥೆ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ನಟನೆಯ ಗುಡ್ ಬೈ ಸಿನಿಮಾದಲ್ಲಿ ನಟಿಸಿದ್ದು ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಮಿಶ್ರ ಪ್ರತಿಕ್ರಿಯೆಯನ್ನು ಪಡೆದು ಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ಇನ್ನು ಸಿದ್ಧಾರ್ಥ್ ಮಲ್ಹೋತ್ರ ಜೊತೆಗೆ ನಟಿಸಿರುವ ಮಿಷನ್ ಮಜ್ನು ಎನ್ನುವ ಸಿನಿಮಾ ಕೂಡ ಈಗಾಗಲೇ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಇನ್ನು ಸದ್ಯಕ್ಕೆ ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಣಬೀರ್ ಕಪೂರ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಆನಿಮಲ್ ಸಿನಿಮಾದಲ್ಲಿ ಕೂಡ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಮುಂದಿನ ವರ್ಷದ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂಬುದಾಗಿ ತಿಳಿದು ಬಂದಿದೆ. ಇನ್ನು ಇತ್ತೀಚಿಗೆ ಆನಿಮಲ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ರಣಬೀರ್ ಕಪೂರ್ ಅವರ ಕಾರಣದಿಂದಾಗಿ ರಶ್ಮಿಕಾ ಮಂದಣ್ಣ ಅತ್ತಿರುವ ಬಗ್ಗೆ ಸೋಷಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಇದರ ಹಿಂದಿನ ನಿಜವಾದ ಕಾರಣಗಳನ್ನು ತಿಳಿದುಕೊಳ್ಳೋಣ ಬನ್ನಿ.

ಬಾಲಿವುಡ್ ನಲ್ಲಿ ರಶ್ಮಿಕಾ ಕಣ್ಣೀರು: ಖ್ಯಾತ ನಟ ರಣಬೀರ್ ಕಪೂರ್ ಮಾಡಿದ ಕೆಲಸಕ್ಕೆ ಗೊಳೋ ಎಂದು ಅತ್ತದ್ದು ಯಾಕೆ ಗೊತ್ತೇ?? 2

ಹೌದು, ರಶ್ಮಿಕಾ ಮಂದಣ್ಣ ಆನಿಮಲ್ ಸಿನಿಮಾದ ಚಿತ್ರೀಕರಣದ ಸೆಟ್ ನಲ್ಲಿ ಸಿಗುತ್ತಿದ್ದ ತಿನಿಸನ್ನು ಬೋರಿಂಗ್ ಎಂಬುದಾಗಿ ರಣಬೀರ್ ಕಪೂರ್ ರವರ ಬಳಿ ಹೇಳಿದ್ದರಂತೆ. ಅದಕ್ಕೆ ರಣಬೀರ್ ಕಪೂರ್ ರವರು ತಮ್ಮ ಮನೆಯಿಂದಲೇ ಬಾಣಸಿಗರಿಂದ ಉತ್ತಮ ಖಾದ್ಯಗಳನ್ನು ತಯಾರಿಸಿ ರಶ್ಮಿಕಾ ಅವರಿಗಾಗಿ ತಂದು ಕೊಟ್ಟಿದ್ದರಂತೆ. ಹೌದು ರಣಬೀರ್ ಕಪೂರ್ ರವರ ಕಾಳಜಿ ರಶ್ಮಿಕಾ ಅವರನ್ನು ಎಮೋಷನಲ್ ಮಾಡಿ ಕಣ್ಣಲ್ಲಿ ನೀರು ಬರುವಂತೆ ಮಾಡಿದೆ ಎಂಬುದಾಗಿ ರಶ್ಮಿಕಾ ಮಂದಣ್ಣ ಸೋಷಿಯಲ್ ಮೀಡಿಯಾದ ಮೂಲಕ ಹಂಚಿಕೊಂಡಿದ್ದಾರೆ. ಇನ್ನು ಈ ಕಡೆ ರಣಬೀರ್ ಕಪೂರ್ ಹಾಗೂ ಅವರ ಪತ್ನಿ ಆಲಿಯಾ ಭಟ್ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.