ಕೋರೋನ ಸಮಯದಲ್ಲಿಯೂ ನಿಟ್ಟುಸಿರು ಬಿಟ್ಟ ರಶ್ಮಿಕಾ ಫ್ಯಾನ್ಸ್, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದಲ್ಲ ಒಂದು ಕಾರಣದಿಂದಾಗಿ ರಶ್ಮಿಕ ಮಂದಣ್ಣ ನವರು ಸೋಶಿಯಲ್ ಮೀಡಿಯಾ ಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಒಳ್ಳೆ ಕಾರಣಕ್ಕಾಗಿ ಸುದ್ದಿಯಾದರೆ ಇನ್ನು ಕೆಲವೊಮ್ಮೆ ಅವರನ್ನು ಟೀಕೆಗೆ ಒಳಪಡಿಸುವ ಕಾರಣದಿಂದಾಗಿ ಸುದ್ದಿಯಾಗುತ್ತಾರೆ. ಒಟ್ಟಾರೆಯಾಗಿ ಈಗ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರು ಸುದ್ದಿಯಲ್ಲಿರುವುದು ಸತ್ಯ.

ಈಗಾಗಲೇ ಅಲ್ಲು ಅರ್ಜುನ್ ರವರೊಂದಿಗೆ ನಟಿಸಿರುವ ಪಂಚಭಾಷಾ ಚಿತ್ರವಾಗಿರುವ ಪುಷ್ಪ ಚಿತ್ರದ ಯಶಸ್ಸಿನಿಂದಾಗಿ ರಶ್ಮಿಕ ಮಂದಣ್ಣ ಅವರ ಬೇಡಿಕೆಯನ್ನುವುದು ಇಡೀ ಭಾರತೀಯ ಚಿತ್ರರಂಗದಲ್ಲಿ ಹೆಚ್ಚಾಗಿದೆ. ಈಗ ಪರಿಸ್ಥಿತಿಯ ಕುರಿತಂತೆ ಹೇಳುವುದಾದರೆ ಸದ್ಯಕ್ಕೆ ಯಾವುದೇ ಸಿನಿಮಾಗಳು ಕೂಡ ಮಹಾಮಾರಿಯ ಕಾರಣದಿಂದಾಗಿ ಬಿಡುಗಡೆ ಆಗುತ್ತಾ ಇಲ್ಲ ಎನ್ನುವುದು ಕೂಡ ನಿಮಗೆ ಗೊತ್ತಿದೆ. ಸಾಕಷ್ಟು ದೊಡ್ಡ ಬಜೆಟ್ ನ ಸಿನಿಮಾಗಳು ಮಹಾಮಾರಿ ಕಾರಣದಿಂದಾಗಿ ಸಿನಿಮಾಗಳ ದಿನಾಂಕವನ್ನು ಮುಂದೂಡಿವೆ. ಆದರೆ ಸದ್ಯದ ಪರಿಸ್ಥಿತಿ ತಿಳಿಯಾಗುತ್ತಾ ಬಂದಿದೆ. ಈ ಕಾರಣದಿಂದಾಗಿ ಕೆಲವು ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಘೋಷಿಸಿವೆ.

ಕೋರೋನ ಸಮಯದಲ್ಲಿಯೂ ನಿಟ್ಟುಸಿರು ಬಿಟ್ಟ ರಶ್ಮಿಕಾ ಫ್ಯಾನ್ಸ್, ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಏನು ಗೊತ್ತೇ?? 2

ಈ ಹಿನ್ನೆಲೆಯಲ್ಲಿ ರಶ್ಮಿಕ ಮಂದಣ್ಣ ನವರ ಅಭಿಮಾನಿಗಳಿಗೂ ಕೂಡ ನಿಟ್ಟಿಸಿರು ಬಿಡುವಂತಹ ಪರಿಸ್ಥಿತಿ ಬಂದಿದೆ. ಅದಕ್ಕೆ ಒಂದು ಕಾರಣವೂ ಕೂಡ ಇದೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ. ರಶ್ಮಿಕ ಮಂದಣ್ಣ ಹಾಗೂ ಶರ್ವಾನಂದ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಆಡವಾಳ್ಳು ಮೀಕು ಜೋಹಾರ್ಲು ಎಂಬ ಚಿತ್ರ ಇದೇ ಫೆಬ್ರವರಿ 25ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಇದು ಖಂಡಿತವಾಗಿಯೂ ರಶ್ಮಿಕ ಮಂದಣ್ಣ ನವರ ಅಭಿಮಾನಿಗಳಿಗೆ ಸಾಕಷ್ಟು ಸಂತೋಷದ ಸುದ್ದಿಯಾಗಿದ್ದು ಚಿತ್ರದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಈಗಾಗಲೇ ಬಹುಬೇಡಿಕೆಯ ನಾಯಕಿಯಾಗಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ನವರು ತಮ್ಮ ಪಾತ್ರಗಳನ್ನು ಜಾಗೃತೆಯಾಗಿ ಆಯ್ಕೆ ಮಾಡುತ್ತಿದ್ದು ಈ ಸಿನಿಮಾ ಕೂಡ ಪ್ರೇಕ್ಷಕರಿಗೆ 100% ತೃಪ್ತಿಯನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸುದ್ದಿಗಳು ಕೇಳಿಬರುತ್ತಿವೆ.