ನಮಸ್ಕಾರ ಸ್ನೇಹಿತರೇ ತೆರೆಯ ಮೇಲೆ ಮಿಂಚುವ ಜೋಡಿಗಳೇ ತೆರೆಯಾಚೆ ಸಹ ಒಂದಾಗಿ ಜೀವನ ಮಾಡಬೇಕು ಎಂದು ಹಲವಾರು ಅಭಿಮಾನಿಗಳು ಆಸೆ ವ್ಯಕ್ತಪಡಿಸುತ್ತಾರೆ. ಆದರೇ ಕೆಲವೇ ಕೆಲವು ಜೋಡಿಗಳಷ್ಟೆ ತೆರೆಯ ಮೇಲಿನ ತೆರೆಯಾಚೆಗೂ ವೈವಾಹಿಕ ಸಂಭಂಧಕ್ಕೆ ಬಂಧನವಾಗಿ ಸುಖ ಜೀವನ ನಡೆಸುತ್ತಾರೆ. ಆದರೇ ಕೆಲವು ತಾರಾ ಜೋಡಿಗಳು ಮೂರು ನಾಲ್ಕು ವರ್ಷದ ನಂತರ ವಿಚ್ಛೇದನಕ್ಕೆ ಮೊರೆ ಹಾಗುತ್ತಾರೆ. ಅಂತಹದೇ ತಾರಾ ಜೋಡಿ ಸಮಂತಾ ಹಾಗೂ ಅಕ್ಕಿನೇನಿ ಕುಟುಂಬದ ಕುಡಿ ನಾಗಚೈತನ್ಯ ಕಳೆದ ತಿಂಗಳು ಸಂಭಂದವನ್ನು ಮುರಿದುಕೊಂಡಿತು.
ಇದಕ್ಕೆ ಮಾಧ್ಯಮಗಳು ಹಲವಾರು ಕಾರಣ ನೀಡಿದವು. ಆದರೇ ಅಸಲಿ ಕಾರಣ ಈಗ ಹೊರ ಬಂದಿದೆ. ನಾಗಚೈತನ್ಯ ನಟಿ ಸಮಂತಾ ಜೊತೆ ಪ್ರೇಮಪಾಶಕ್ಕೆ ಬೀಳುವ ಮುನ್ನ ನಟಿ ಶೃತಿ ಹಾಸನ್ ಜೊತೆ ಪ್ರೇಮಾಂಕುರಕ್ಕೆ ಒಳಗಾಗಿದ್ದರಂತೆ. ನಂತರ ಶೃತಿ ಹಾಸನ್ ಹಾಗೂ ನಾಗಚೈತನ್ಯ ಪರಸ್ಪರ ವಿವಾಹವಾಗುತ್ತಾರೆಂದೇ ಹೇಳಲಾಗಿತ್ತು. ಆದರೇ ಅವರಿಬ್ಬರ ಸಂಭಂದದಲ್ಲಿ ಬಿರುಕು ಬಂದ ನಂತರ ಸಮಂತಾ ಹಾಗೂ ನಾಗಚೈತನ್ಯರವರ ಪ್ರೇಮ್ ಕಹಾನಿ ಶುರುವಾಯಿತಂತೆ.
ಅಷ್ಟಕ್ಕೂ ಶೃತಿ ಹಾಸನ್ ಹಾಗೂ ನಾಗಚೈತನ್ಯರವರ ಪ್ರೇಮದಲ್ಲಿ ಹುಳಿ ಹಿಂಡಿದ್ದು ಬೇರಾರೂ ಅಲ್ಲ, ಶೃತಿರವರ ಅಕ್ಕ ಅಕ್ಷರಾ ಹಾಸನ್ ಅಂತೆ. ಅವಾರ್ಡ್ ಫಂಕ್ಷನ್ ನಲ್ಲಿ ಒಮ್ಮೆ ನಾಗಚೈತನ್ಯ ಅಕ್ಷರಾ ಹಾಸನ್ ಗೆ ಸರಿಯಾಗಿ ಗೌರವ ನೀಡಲಿಲ್ಲವಂತೆ. ಆ ನಂತರವೇ ಅಕ್ಷರಾ, ತಂಗಿಯ ಬಾಳಿನಲ್ಲಿ ಬಿರುಗಾಳಿಯಾದರು. ಒಮ್ಮೆ ನಾಗಚೈತನ್ಯ ಹಾಗೂ ಶೃತಿ ಹಾಸನ್ ಮದುವೆಯಾಗಿದ್ದರೇ, ಅವರು ವಿಚ್ಛೇಧನಕ್ಕೆ ಹೋಗುತ್ತಿರಲಿಲ್ಲ. ನಾಗಚೈತನ್ಯ ಸಮಂತಾ ಜೊತೆ ಮದುವೆಯಾದ ಕಾರಣ ವಿಚ್ಛೇಧನವಾಯಿತು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.