ನಾಗ ಚೈತನ್ಯಗೆ ಮತ್ತೊಂದು ಶಾಕ್ ನೀಡಿದ ಸಮಂತಾ, ನಾಗಾರ್ಜುನ ಕುಟುಂಬಕ್ಕಾಗಿಯೂ ಕ್ಯಾರೇ ಎನ್ನದೆ ತೆಗೆದುಕೊಂಡ ನಿರ್ಧಾರ ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಏ ಮಾಯ ಚೇಸಾವೆ ಚಿತ್ರದಲ್ಲಿ ನಾಯಕ, ನಾಯಕಿಯರಾಗಿ ನಟಿಸಿದ್ದ ಸಮಂತಾ ಹಾಗೂ ನಾಗಚೈತನ್ಯ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದು ಗೊತ್ತೇ ಇದೆ. ಕೆಲ ಸಮಯ ಪ್ರೀತಿಸಿದ್ದ ಜೋಡಿ ಕೊನೆಗೂ ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ಆದರೆ ಅಕ್ಟೋಬರ್ 2021 ರಲ್ಲಿ ಈ ಜೋಡಿ ಬೇರೆಯಾಗುತ್ತಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದಾಗ ಎಲ್ಲರೂ ಆಘಾತಕ್ಕೊಳಗಾದರು. ಅವರು ತೆಗೆದುಕೊಂಡ ಈ ನಿರ್ಧಾರ ಅಭಿಮಾನಿಗಳಿಗೆ ಇನ್ನೂ ನೋವುಂಟು ಮಾಡಿತ್ತು.

ಅಕ್ಕಿನೇನಿ ನಾಗಚೈತನ್ಯ ಮತ್ತು ಸಮಂತಾ ಇಬ್ಬರೂ ಪ್ರೀತಿಸಿ ಮದುವೆಯಾದ್ರೂ ಕೂಡ ವಯಕ್ತಿಕ ಕಾರಣಕ್ಕೆ ದೂರವಾಗಿದ್ದಾರೆ. ಸದ್ಯ ಇಬ್ಬರೂ ತಮ್ಮ ತಮ್ಮ ವಯಕ್ತಿಕ ಲೈಫ್ ನಲ್ಲಿ ಬ್ಯುಸಿಯಾಗಿದ್ದು, ತಮ್ಮ ವಯಕ್ತಿಕ ನಿರ್ಧಾರವನ್ನು ಗೌರವಿಸುವಂತೆಯೂ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದರು. ಮೋಸ್ಟ್ ಲವಬಲ್ ಪೇರ್ ಎಂದೇ ಖ್ಯಾತರಾಗಿರುವ ಅಕ್ಕಿನೇನಿ ನಾಗ ಚೈತನ್ಯ, ಅಭಿಮಾನಿಗಳ ಜೊತೆಯಲ್ಲಿ ಸಮಂತಾ ತಮ್ಮ ಮದುವೆಗೆ ದಿಢೀರ್ ವಿದಾಯ ಹೇಳಿದ್ದಾರೆ ಎಂದು ಘೋಷಿಸಿ ಎಲ್ಲರಿಗೂ ಶಾಕ್ ನೀಡಿದ್ದರು.

ನಾಗ ಚೈತನ್ಯಗೆ ಮತ್ತೊಂದು ಶಾಕ್ ನೀಡಿದ ಸಮಂತಾ, ನಾಗಾರ್ಜುನ ಕುಟುಂಬಕ್ಕಾಗಿಯೂ ಕ್ಯಾರೇ ಎನ್ನದೆ ತೆಗೆದುಕೊಂಡ ನಿರ್ಧಾರ ಏನು ಗೊತ್ತೇ? 2

ಆದಾಗ್ಯೂ, ನಾಗ ಚೈತನ್ಯದಿಂದ ವಿಚ್ಛೇದನದ ನಂತರ “ಅತ್ಯಂತ ಭಯಾನಕ ಪರಿಸ್ಥಿತಿಯನ್ನು ಎದುರಿಸಿದೆ” ಎಂದು ಸಮಂತಾ ಇತ್ತೀಚೆಗೆ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದೊಂದಾಗಿ ಗಂಡನ ನೆನಪುಗಳನ್ನು ಅಳಿಸುಹಾಕುತ್ತಿದ್ದಾರೆ. ಇದೀಗ ಸಮಂತಾ ಬಗ್ಗೆ ಇನ್ನೊಂದು ಸುದ್ದಿ ಹರಡಿದೆ. ಇತ್ತೀಚೆಗಷ್ಟೇ ಚೈತೂ ಕೊಟ್ಟಿದ್ದ ಬೆಲೆಬಾಳುವ ಉಡುಗೊರೆಯನ್ನು ವಾಪಸ್ ನೀಡಿದ್ದು, ಇದೀಗ ಮದುವೆಯಲ್ಲಿ ಉಟ್ಟಿದ್ದ ಸೀರೆಯನ್ನೂ ವಾಪಸ್ ಕಳುಹಿಸಿದ್ದಾರೆ ಸಮಂತಾ. ಸಮಂತಾ ತನ್ನ ಮದುವೆಯಲ್ಲಿ ಅಜ್ಜಿಯ ಸೀರೆಯನ್ನು ಉಟ್ಟುಕೊಂಡಿದ್ದು ಆಗ ದೊಡ್ಡ ಚರ್ಚೆಯ ವಿಷಯವಾಗಿತ್ತು. ವಿಚ್ಛೇದನದ ನಂತರ, ಸಮಂತಾ ಅಕ್ಕಿನೇನಿ ಕುಟುಂಬದ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.