ಎಂದು ಶಂಕರ್ ನಾಗ್ ರವರ ಬಗ್ಗೆ ಮಾತನಾಡದ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಾತನಾಡಿ ಹೇಳಿದ್ದೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಎಂಬತ್ತರ ದಶಕ ವನ್ನು ನಿಜವಾಗಿಯೂ ಕೂಡ ಕನ್ನಡ ಚಿತ್ರರಂಗದ ಸುವರ್ಣಕಾಲ ಎಂದು ಹೇಳಿದರೆ ತಪ್ಪಾಗಲಾರದು. ಆ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ತೆರೆಯಮೇಲೆ ಅಣ್ಣಾವ್ರು ದಾದಾ ವಿಷ್ಣುವರ್ಧನ್ ರೆಬಲ್ ಸ್ಟಾರ್ ಅಂಬರೀಶ್ ಹಾಗೂ ಶಂಕರ್ ನಾಗ್ ರವರು ರಾರಾಜಿಸುತ್ತಿದ್ದರು. ಎಲ್ಲರಿಗಿಂತ ವಿಭಿನ್ನವಾಗಿ ಶಂಕರನಾಗ ರವರು ಕೇವಲ ನಟನಾಗಿ ಮಾತ್ರವಲ್ಲದೆ ಚಿತ್ರರಂಗವನ್ನು ಬೇರೆಯವರಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ಸಾಕಷ್ಟು ಯೋಚನೆ ಮಾಡಿದ್ದರು.ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಮುನ್ನವೆ ಅತ್ಯಂತ ಚಿಕ್ಕ ವಯಸ್ಸಿಗೆ ಯಾರು ಮಾಡಲಾಗದಂತಹ ದೊಡ್ಡ ಹೆಸರನ್ನು ಸಂಪರ್ಕಿಸಿ ನಮ್ಮನ್ನೆಲ್ಲಾ ಅಕಾಲಿಕವಾಗಿ ಆಗಲಿದ್ದಾರೆ. ವಿಚಾರಕ್ಕಾಗಿ ಯಾರು ಕೂಡ ಆ ದೇವರನ್ನು ಕ್ಷಮಿಸಲಾರರು.

ಕನ್ನಡ ಚಿತ್ರರಂಗದ ದಿಗ್ಗಜ ರಾಗಿರುವ ರಾಜ್ ಕುಮಾರ್ ರವರು ಹಾಗೂ ವಿಷ್ಣುವರ್ಧನ್ ರವರು ಮತ್ತು ಅಂಬರೀಶ್ ಅವರು ಕೂಡ ಶಂಕರನಾಗ ರವರನ್ನು ಅತಿವೇಗವಾಗಿ ಕಳೆದುಕೊಂಡಿದ್ದಕ್ಕೆ ದುಃಖವನ್ನು ವ್ಯಕ್ತಪಡಿಸುತ್ತಾ ಆತ ಇನ್ನೂ ಇರಬೇಕಿತ್ತು ಎಂಬುದಾಗಿ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದರು. ಇನ್ನು ಈಗ ಶಂಕರ್ ನಾಗ್ ಅವರ ಕುರಿತಂತೆ ಶಿವಣ್ಣ ಕೂಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಾತನಾಡಿದ್ದಾರೆ.

ಎಂದು ಶಂಕರ್ ನಾಗ್ ರವರ ಬಗ್ಗೆ ಮಾತನಾಡದ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಾತನಾಡಿ ಹೇಳಿದ್ದೇನು ಗೊತ್ತೇ? 4

ಅಪ್ಪು ಅವರನ್ನು ಕಳೆದುಕೊಂಡ ನಂತರ ಶಿವಣ್ಣನವರು ಆ ದುಃಖವನ್ನು ಮರೆಯಲು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಂತಹ ಹಲವಾರು ಕಾರ್ಯಕ್ರಮಗಳಲ್ಲಿ ಹೋಗುವಂತಹ ಅಭ್ಯಾಸವನ್ನು ರೂಢಿ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಶಿವಣ್ಣ ತೀರ್ಪುಗಾರರಾಗಿ ತೀರ್ಪನ್ನು ನೀಡುವ ಶೈಲಿ ಎಲ್ಲರಿಗೂ ಇಷ್ಟವಾಗುತ್ತದೆ. ಸ್ಪರ್ಧಿಗಳ ಜೊತೆಗೆ ಶಿವಣ್ಣ ಬರೆಯುವ ರೀತಿ ಹಾಗೂ ಎಲ್ಲರೊಂದಿಗೆ ಕುಣಿಯುವ ರೀತಿ ನಿಜಕ್ಕೂ ಕೂಡ ಶಿವಣ್ಣನವರ ಕುರಿತಂತೆ ಪ್ರೀತಿ ಗೌರವಗಳು ಎಲ್ಲರಲ್ಲಿ ಹೆಚ್ಚಾಗುವಂತೆ ಮಾಡಿದೆ.

ಎಂದು ಶಂಕರ್ ನಾಗ್ ರವರ ಬಗ್ಗೆ ಮಾತನಾಡದ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಾತನಾಡಿ ಹೇಳಿದ್ದೇನು ಗೊತ್ತೇ? 5

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೇಲೆ ಇವರ ಇಬ್ಬರು ಮಕ್ಕಳು ಶಂಕ್ರಣ್ಣ ನವರ ಹಾಗೆ ಡ್ಯಾನ್ಸ್ ಮಾಡುವ ಮೂಲಕ ಶಂಕ್ರಣ್ಣನನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಕರೆತರುವಂತೆ ಮಾಡಿದ್ದರು. ಈ ಸಂದರ್ಭದಲ್ಲಿ ಶಿವಣ್ಣನವರು ಕೂಡ ಶಂಕರ್ ಅಣ್ಣನವರ ಒಡನಾಟದ ಕುರಿತಂತೆ ಕೆಲವೊಂದು ಮಾತುಗಳನ್ನಾಡಿದ್ದಾರೆ. ಶಂಕ್ರಣ್ಣ ರಾಜಣ್ಣ ಅವರ ಜೊತೆ ಸೇರಿಕೊಂಡು ಮಾಡಿರುವಂತಹ ಚಿತ್ರವೆಂದರೆ ಅದು ಒಂದು ಮುತ್ತಿನ ಕಥೆ. ಈ ಸಿನಿಮಾವನ್ನು ನಿರ್ಮಿಸಿದ್ದು ಕೂಡ ಶಿವಣ್ಣನವರ ತಾಯಿ ಪಾರ್ವತಮ್ಮನವರೇ.

ಒಂದು ಮುತ್ತಿನ ಕಥೆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಂಕರನಾಗ್ ರವರ ಜೊತೆಗೆ ದಿನ ಕಳೆಯುವಂತಹ ಅವಕಾಶ ನನಗೆ ದೊರಕಿತ್ತು ಎಂಬುದಾಗಿ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ ಮೇಲೆ ಹೇಳಿಕೊಂಡಿದ್ದಾರೆ. ಹೌದು ಗೆಳೆಯರೇ ಕಾರವಾರದಲ್ಲಿ ನಡೆಯುತ್ತಿದ್ದ ಒಂದು ಮುತ್ತಿನ ಕಥೆಯ ಚಿತ್ರೀಕರಣದ ಸಂದರ್ಭದಲ್ಲಿ 20 ದಿನಗಳ ವರೆಗೆ ಶಿವಣ್ಣ ಶಂಕರನಾಗ್ ರವರ ಜೊತೆಗೆ ಕಾಲ ಕಳೆದಿದ್ದರು. ಶಂಕರ್ ನಾಗ್ ರವರ ಕುರಿತಂತೆ ಮಾತನಾಡುತ್ತ ಶಿವಣ್ಣ ನೀವು ನನ್ನನ್ನು ಎನರ್ಜಿಗೆ ಹೋಲಿಸುತ್ತೀರಿ. ಆದರೆ ಅವರ ಎನರ್ಜಿಯ ಮುಂದೆ ನನ್ನದೇನು ಅಲ್ಲ ನನಗಿಂತ ಮೂರುಪಟ್ಟು ಎನರ್ಜಿ ಅವರಲ್ಲಿತ್ತು ಹಾಗೂ ಅವರ ಬುದ್ಧಿವಂತಿಕೆ ಕೂಡ ಯಾರಲ್ಲಿ ಕೂಡ ಕಾಣಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.

ಎಂದು ಶಂಕರ್ ನಾಗ್ ರವರ ಬಗ್ಗೆ ಮಾತನಾಡದ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಮಾತನಾಡಿ ಹೇಳಿದ್ದೇನು ಗೊತ್ತೇ? 6

24 ಗಂಟೆ ಕೆಲಸ ಮಾಡಿ ಅಂದ್ರು ಕೂಡ ಶಂಕ್ರಣ್ಣ ಯಾವುದೇ ಹಿಂಜರಿಕೆಯಿಲ್ಲದೆ ಮಾಡಿಬಿಡು ಉತ್ಸಾಹ ಅವರಲ್ಲಿತ್ತು ಅವರಷ್ಟು ಅಭಿವ್ಯಕ್ತಿ ಚಟುವಟಿಕೆಯಲ್ಲಿರುವ ವ್ಯಕ್ತಿಯನ್ನು ನನ್ನ ಜೀವನದಲ್ಲಿ ಇದುವರೆಗೂ ನಾನು ನೋಡಿಲ್ಲ. 20 ದಿನಗಳಲ್ಲಿ ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಖಂಡಿತವಾಗಿ ನಾನು ಜೀವನದ ಕೊನೆತನಕವೂ ಕೂಡ ಅದನ್ನು ನನ್ನಲ್ಲಿ ಇರಿಸಿಕೊಳ್ಳುತ್ತೇನೆ. ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ನಿರ್ದೇಶಕ ತಂತ್ರಜ್ಞಾನ ಎಂಬುದಾಗಿ ಎದ್ದುನಿಂತು ಸಲಾಂ ಮಾಡಿದ್ದಾರೆ ಶಿವಣ್ಣ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.