ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಪುಟ್ಟ ಮಗು ಹಾಗೂ ಅಮ್ಮ, ಮಗುವಿನ ಜೊತೆ ಬಂದ ತಾಯಿ ಹೇಳಿದ್ದೇನು ಗೊತ್ತೇ?? ಆ ಮಗು ಯಾರದ್ದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ರವರು ತಾವು ಇದ್ದಷ್ಟು ದಿನ ತಾನು ಮಾಡಿದಂತಹ ಯಾವುದೇ ಸಮಾಜ ಸೇವೆಗಳ ಕುರಿತಂತೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಈಗ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಅವರ ಕುರಿತಂತೆ ಒಂದೊಂದು ವಿಚಾರಗಳು ಈಗ ಹೊರಗಡೆ ಬರುತ್ತಾ ಇವೆ. ಅವರು ಮಾಡಿದಂತಹ ಸಹಾಯಗಳು ಜನ ಸೇವೆಗಳು ಈಗ ಕರ್ನಾಟಕದ ಪ್ರತಿಯೊಬ್ಬರಿಗೂ ಕೂಡ ಮನದಟ್ಟಾಗಿದೆ. ನಿಮಗೆಲ್ಲ ತಿಳಿದಿರುವಂತೆ ಹಳ್ಳಿ ಹೈದ ಪ್ಯಾಟೆಗ್ ಬಂದ ಎಂಬ ಕಾರ್ಯಕ್ರಮದಲ್ಲಿ ರಾಜೇಶ್ ಎಂಬ ಒಬ್ಬ ಹುಡುಗ ಬಂದಿದ್ದ. ಈತ ಆ ರಿಯಾಲಿಟಿ ಶೋ ಅನ್ನು ಕೂಡ ಗೆದ್ದಿದ್ದ.

ಇನ್ನು ಫಿನಾಲೆ ಯ ಸಂದರ್ಭದಲ್ಲಿ ಪುನೀತ್ ರಾಜಕುಮಾರ್ ಅವರು ಆತನ ಕೊರಳಿಗೆ ಚಿನ್ನದ ಸರವನ್ನು ಕೂಡ ಹಾಕಿದ್ದರು. ಇನ್ನು ಆತನ ದುರದೃಷ್ಟವೋ ಏನೋ ರಿಯಾಲಿಟಿ ಶೋನಲ್ಲಿ ಗೆದ್ದನೇ ವಿನಹ ನಿಜಜೀವನದಲ್ಲಿ ಆತ ಸಂಪೂರ್ಣವಾಗಿ ಸೋತು ತನ್ನ ಜೀವನವನ್ನು ಮುಗಿಸಿಕೊಂಡಿದ್ದ. ಇನ್ನು ಇತ್ತೀಚಿಗಷ್ಟೇ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಒಬ್ಬ ಹೆಂಗಸು ತನ್ನ ಮಗುವಿನೊಂದಿಗೆ ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಆಶೀರ್ವಾದ ಪಡೆಯಲು ಬಂದಿದ್ದಳು.

punith rajesh | ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಪುಟ್ಟ ಮಗು ಹಾಗೂ ಅಮ್ಮ, ಮಗುವಿನ ಜೊತೆ ಬಂದ ತಾಯಿ ಹೇಳಿದ್ದೇನು ಗೊತ್ತೇ?? ಆ ಮಗು ಯಾರದ್ದು ಗೊತ್ತೇ??
ಅಪ್ಪು ಸಮಾಧಿಗೆ ಭೇಟಿ ಕೊಟ್ಟ ಪುಟ್ಟ ಮಗು ಹಾಗೂ ಅಮ್ಮ, ಮಗುವಿನ ಜೊತೆ ಬಂದ ತಾಯಿ ಹೇಳಿದ್ದೇನು ಗೊತ್ತೇ?? ಆ ಮಗು ಯಾರದ್ದು ಗೊತ್ತೇ?? 2

ಅವಳ ಕುರಿತಂತ ಕೇಳಿ ತಿಳಿದಾಗ ಆಕೆ ಹಳ್ಳಿ ಹೈದ ಖ್ಯಾತಿಯ ರಾಜೇಶನ ತಂಗಿಯನ್ನು ತಿಳಿದುಬಂದಿರುತ್ತದೆ. ಆತನಿಗೆ ಕೊಟ್ಟಿದ್ದ ಚಿನ್ನದ ಸರವನ್ನು ಆ ಮಗುವಿನ ಕುತ್ತಿಗೆಗೆ ಹಾಕಲಾಗಿತ್ತು. ನಂತರ ಆಕೆ ಅಂದರೆ ರಾಜೇಶನ ತಂಗಿ ಮಂಜುಳಾ ತನ್ನ ತಂದೆಗೆ ಹುಷಾರಿಲ್ಲ ಎಂದು ಚಿನ್ನದ ಸರವನ್ನು ಅಡವಿಟ್ಟು ಚಿಕಿತ್ಸೆ ನೀಡುತ್ತಾಳೆ. ನಂತರ ಆ ಚಿನ್ನದ ಸರವನ್ನು ಆಕೆಯ ಗ್ರಾಮದ ಮುಖ್ಯಸ್ಥರು ಆಕೆಗೆ ಬಿಡಿಸಿಕೊಳ್ಳಲು ಸಹಾಯ ಮಾಡುತ್ತಾರೆ. ಆದರೆ ಅದಾದ ಮೂರೇ ದಿನದಲ್ಲಿ ಪುನೀತ್ ರಾಜಕುಮಾರ್ ಅವರು ಇಹಲೋಕವನ್ನು ತ್ಯಜಿಸಿ ರುತ್ತಾರೆ. ಇದರ ಕುರಿತಂತೆ ಸಮಾಧಿಯ ಬಳಿ ಆಶೀರ್ವಾದ ಪಡೆಯಲು ಬಂದಾಗ ಆಕೆ ಎಲ್ಲರ ಬಳಿ ತಿಳಿಸುತ್ತಾಳೆ. ಇಷ್ಟು ಮಾತ್ರವಲ್ಲದೆ ಪುನೀತ್ ರಾಜಕುಮಾರ್ ಅವರು ಹಳ್ಳಿ ಹೈದ ರಾಜೇಶನ ನಿಧನದ ಸಂದರ್ಭದಲ್ಲಿಯೂ ಕೂಡ ಕುಟುಂಬಸ್ಥರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದನ್ನು ಅವರು ಇಲ್ಲಿ ನೆನಪಿಸಿಕೊಳ್ಳುತ್ತಾರೆ.

Comments are closed.