ದಿವ್ಯ ಪಕ್ಕದಲ್ಲೇ ನಿಂತಿದ್ದಾಗ ಮದುವೆ ಯಾವಾಗ ಎಂದಿದ್ದಕ್ಕೆ ಅರವಿಂದ್ ನೀಡಿದ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲ ತಿಳಿದಿರುವಂತೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಸಾಕಷ್ಟು ಜನಪ್ರಿಯವಾಗಿದ್ದು ದಿವ್ಯ ಹಾಗೂ ಅರವಿಂದ್ ಕೆಪಿ ಜೋಡಿ. ಹೌದು ಸ್ನೇಹಿತರೆ ಎಷ್ಟರಮಟ್ಟಿಗೆ ಎಂದರೆ ಇವರಿಬ್ಬರ ಮದುವೆ ಯಾವಾಗ ಎಂಬ ಚಿಂತೆಯಲ್ಲಿ ಅವರ ಅಭಿಮಾನಿಗಳು ಇಂದಿಗೂ ಕೂಡ ಇದ್ದಾರೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಸಾಕಷ್ಟು ಜನಪ್ರಿಯವಾಗಲು ಅರವಿಂದ್ ಹಾಗೂ ದಿವ್ಯ ಜೋಡಿ ಕಾರಣ ಎಂದರೆ ಖಂಡಿತವಾಗಿಯೂ ತಪ್ಪಾಗಲಾರದು.

ಹೌದು ಸ್ನೇಹಿತರೆ ಅಪರಿಚಿತರಾಗಿ ಬಿಗ್ ಬಾಸ್ ಗೆ ಎಂಟ್ರಿ ನೀಡಿ ನಂತರ ಮುಂದಿನ ದಿನಗಳಲ್ಲಿ ಇಬ್ಬರು ಸ್ನೇಹಕ್ಕಿಂತಲೂ ಅತಿಯಾದ ಬಾಂಧವ್ಯವನ್ನು ಹೊಂದಿರುತ್ತಾರೆ. ಇನ್ನು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೂ ಕೂಡ ಅರವಿಂದ್ ಹಾಗೂ ದಿವ್ಯ ಜೋಡಿಗೆ ಸುದ್ದಿಮಾಧ್ಯಮಗಳು ಹಾಗೂ ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂಬುದಾಗಿ ಕೇಳುತ್ತಿದ್ದರು. ಇದಕ್ಕೆ ಕಾರಣ ಬಿಗ್ ಬಾಸ್ ಮನೆಯಲ್ಲಿ ತಮ್ಮ ತಂದೆಯ ಉಂಗುರವನ್ನು ದಿವ್ಯ ರವರು ಅರವಿಂದ್ ರವರಿಗೆ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ಈ ಕುರಿತಂತೆ ಸ್ವತಹ ಅರವಿಂದ್ ಅವರೇ ಹೇಳಿರುವುದು ಇನ್ನಷ್ಟು ಸುದ್ದಿಗೆ ಕಾರಣವಾಗಿದೆ.

ಹೌದು ಸ್ನೇಹಿತರೆ ಇದೇ ಅಕ್ಟೋಬರ್ 15 16 17 ರಂದು ಕಲರ್ಸ್ ಕನ್ನಡ ವಾಹಿನಿ ಕಿರುತೆರೆಯ ಎಲ್ಲಾ ಕಲಾವಿದರನ್ನು ಒಂದೇ ಕಾರ್ಯಕ್ರಮದಡಿಯಲ್ಲಿ ಒಂದು ಸೇರಿಸುವ ಕಾರ್ಯಕ್ರಮ ವಾಗಿರುವ ಅನುಬಂಧ ಅವಾರ್ಡ್ಸ್ ನಲ್ಲಿ ಅರವಿಂದ್ ರವರು ಕೂಡ ಬೈಕ್ ರೇಸರ್ ಆಗಿ ಪರ್ಫಾರ್ಮೆನ್ಸ್ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅರವಿಂದ್ ರವರು ದಿವ್ಯ ರವರ ಪಕ್ಕದಲ್ಲಿ ನಿಂತು ಸಂದರ್ಶಕಿ ಕೇಳಿದಂತಹ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಹೌದು ಸ್ನೇಹಿತರೆ ಈ ಪ್ರಶ್ನೆಗೆ ಉತ್ತರಿಸಿರುವ ಅರವಿಂದ ರವರು ಮಾಡುವುದಕ್ಕೆ ಇನ್ನು ತುಂಬಾ ಕೆಲಸವಿದೆ ಅತಿ ಶೀಘ್ರದಲ್ಲಿ ನಿಮಗೆ ಸಿಹಿ ಸುದ್ದಿ ಸಿಗಲಿದೆ ಎಂಬುದಾಗಿ ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳು ಏನೆಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.