ಬಿಗ್ ಬಾಸ್ ನಲ್ಲಿ ಪ್ರೇಮ ಪಕ್ಷಿಗಳಂತೆ ಹಾರಾಟ ಮಾಡಿದ್ದ ದಿವ್ಯ ಹಾಗೂ ಅರವಿಂದ್ ಮದುವೆ ಬಗ್ಗೆ ಕೇಳಿದ್ದಾಕೆ ಏನು ಹೇಳಿದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಕಾರಣಗಳಿಗಾಗಿ ಜನಪ್ರಿಯವಾಗಿದೆ. ಅದರಲ್ಲಿ ಒಂದು ವಿಷಯ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಬಗ್ಗೆ ಆದರೆ ಇನ್ನೊಂದು ಅರವಿಂದ್ ಕೆಪಿ ಹಾಗೂ ದಿವ್ಯ ಉರುಡುಗ ಕುರಿತಂತೆ. ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಸೀಸನ್ ಟಿಆರ್ಪಿ ವಿಷಯದಲ್ಲಿ ಕೂಡ ಗಗನ ಮಟ್ಟವನ್ನು ತಲುಪಲು ಕೂಡ ದಿವ್ಯ ಹಾಗೂ ಅರವಿಂದ್ ರವರ ಜೋಡಿಗೆ ಕಾರಣ ಎಂದು ಹೇಳಲಾಗುತ್ತಿದೆ. ಇವರಿಬ್ಬರ ಪ್ರೀತಿಯ ಕಹಾನಿ ಬಂದಾಗಲೆಲ್ಲ ಜನರ ಮನವನ್ನು ಗೆದ್ದಿದೆ ಎಂಬುದಾಗಿ ವಾಹಿನಿಯ ಸಂಬಂಧಿತ ವ್ಯಕ್ತಿಗಳು ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯ ಒಳಗೆ ಕೂಡ ಅರವಿಂದ್ ಹಾಗೂ ದಿವ್ಯ ರವರು ಒಬ್ಬರನ್ನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಮತ್ತು ಅರವಿಂದ್ ರವರ ಬೆರಳಿಗೆ ತಮ್ಮ ತಂದೆಯವರ ಉಂಗುರವನ್ನು ದಿವ್ಯ ರವರು ತೊಡಿಸಿದ್ದರು. ಹೀಗಾಗಿ ಅವರ ಅಭಿಮಾನಿಗಳು ಇವರಿಬ್ಬರು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮದುವೆಯಾಗುತ್ತಾರೆ ಎಂಬುದಾಗಿ ಅಂದುಕೊಂಡಿದ್ದರು. ಆದರೆ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಕೂಡ ಇವರಿಬ್ಬರು ಮದುವೆ ಕುರಿತಂತೆ ಸಂಪೂರ್ಣವಾಗಿ ಎಲ್ಲಿಯೂ ಕೂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ಇವರಿಬ್ಬರ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಿರುವ ಸೂಚನೆ ಎದ್ದುಕಾಣುತ್ತಿದೆ.

ಹೌದು ಸ್ನೇಹಿತರೆ ಅರವಿಂದ ಹಾಗೂ ದಿವ್ಯ ರವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿರ ಬೇಕಾದರೆ ಈ ಕುರಿತಂತೆ ಸಂದರ್ಶಕರು ಪ್ರಶ್ನೆಯನ್ನು ಕೇಳುತ್ತಾರೆ. ಆಗ ದಿವ್ಯ ಹಾಗೂ ಅರವಿಂದ್ ಇಬ್ಬರೂ ಕೂಡ ನಗುತ್ತಾ ಮನೆಯಲ್ಲಿ ಪಾಸಿಟಿವ್ ವೈಬ್ಸ್ ತುಂಬಾನೇ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ಒಳ್ಳೆಯ ಸಮಾಚಾರ ಕೇಳಲು ಸಿಕ್ಕರೂ ಸಿಗಬಹುದು ಎಂಬುದಾಗಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದರೂ ಕೂಡ ಮುಂದಿನ ದಿನಗಳಲ್ಲಿ ಮದುವೆ ಆದರೂ ಆಗಬಹುದು ಎಂಬ ಸುಳಿವನ್ನು ಕೂಡ ನೀಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನು ಸ್ನೇಹಿತರೆ ಇವರಿಬ್ಬರು ಮುಂದಿನ ದಿನಗಳಲ್ಲಿ ಮದುವೆಯಾಗುತ್ತಾರಾ ಇಲ್ಲವಾ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.