ಇದು ದಿನಕ್ಕೆ ಒಂದು ಗ್ಲಾಸ್ ಕುಡಿದರೆ ಸಾಕು ನಿಮ್ಮ ದೇಹದಲ್ಲಿರುವ ಕಾಯಿಲೆಗಳೆಲ್ಲ ದೂರವಾಗುತ್ತದೆ??

ನಮಸ್ಕಾರ ಸ್ನೇಹಿತರೇ ಇಂದಿನ ದುನಿಯಾದಲ್ಲಿ ಹಣ ಗಳಿಸುವುದು ಸುಲಭ ಆದರೆ ಉತ್ತಮವಾದ ಆರೋಗ್ಯವನ್ನು ಹೊಂದಿರುವುದು ಬಹಳನೇ ಕಷ್ಟ. ಜನ ದುಡ್ಡಿನ ಹಿಂದೆ ಓಡುತ್ತಾ ಕೆಲಸಮಾಡುತ್ತಾ ಸರಿಯಾದ ಸಮಯದಲ್ಲಿ ಊಟ ಮಾಡದೆ ಸರಿಯಾಗಿ ನಿದ್ರೆ ತೆಗೆದುಕೊಳ್ಳದೆ ತಮ್ಮ ಆರೋಗ್ಯವನ್ನು ತಮ್ಮ ಕೈಯಾರೆ ತಾವೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಇದಕ್ಕೋಸ್ಕರವೇ ಆಸ್ಪತ್ರೆಗೆ ಹೋಗಿ ಮದ್ದು ಮಾಡಿಕೊಳ್ಳುವಷ್ಟು ಟೈಮು ಕೆಲವರಿಗೆ ಇರುವುದಿಲ್ಲ ಇನ್ನು ಕೆಲವರಿಗೆ ಹಣದ ಅಭಾವದಿಂದ ಆಸ್ಪತ್ರೆಗೆ ಹೋಗಲು ಸಾಧ್ಯವಾಗುವುದಿಲ್ಲ.

ಸ್ನೇಹಿತರೆ ಬನ್ನಿ ಇಂದು ನಾವು ಒಂದು ಪಾನೀಯದ ಕುರಿತಂತೆ ಹೇಳುತ್ತಿದ್ದೇವೆ. ನೀವು ಇದನ್ನು ಕುಡಿದರೆ ಆರೋಗ್ಯದಲ್ಲಿ ಇರುವ ಅದೆಷ್ಟು ಕೆಟ್ಟ ರೋಗಗಳನ್ನು ಹೊಗಲಾಡಿಸಿಕೊಳ್ಳಬಹುದು ಗೊತ್ತೇನು ನಿಮಗೆ. ಬನ್ನಿ ವಿವರವಾಗಿ ಹೇಳುತ್ತೇನೆ. ಹೌದು ಸ್ನೇಹಿತರೆ ಈಗ ಈ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ ಆದರೂ ಡಯಾಬಿಟಿಸ್ ರೋಗಿ ಸಿಕ್ಕೆ ಸಿಗುತ್ತಾನೆ. ಸರಿಯಾದ ಸಮಯದಲ್ಲಿ ಊಟ ಮಾಡದೆ ಹಾಗೂ ಇನ್ನಿತರ ದೇಹದ ಒಳಗಿನ ಪೋಷಕಾಂಶಗಳಿಗೆ ಸರಿಯಾದ ಅಗತ್ಯ ಆಹಾರಕ್ರಮಗಳು ಸಿಗದೆ ಇದ್ದಾಗ ಮಧುಮೇಹದ ಕಾಯಿಲೆ ಪ್ರಾರಂಭವಾಗುತ್ತದೆ.

ಇನ್ನು ಇದರೊಂದಿಗೆ ಕಿಡ್ನಿಯಲ್ಲಿರುವ ಸಮಸ್ಯೆ ಹೃದಯದ ಕೊಲೆಸ್ಟ್ರಾಲ್ ಸಮಸ್ಯೆ ಚರ್ಮದ ಸಮಸ್ಯೆ ಜೀರ್ಣಕ್ರಿಯೆಯ ಅಭಾವ ಹೀಗೆ ಹಲವಾರು ಸಮಸ್ಯೆಗಳು ನಮ್ಮ ಪ್ರತಿ ನಿತ್ಯ ಜೀವನದಲ್ಲಿ ಒಂದಲ್ಲ ಒಂದು ಕೊರತೆಯಿಂದ ಸಂದರ್ಭದಲ್ಲಿ ಮೂಡಿಕೊಂಡು ಬರುತ್ತದೆ. ಎಲ್ಲ ಸಮಸ್ಯೆಗಳಿಗೆ ಬೇರೆ ಬೇರೆ ಇಂಗ್ಲಿಷ್ ಪದ್ಧತಿಯಲ್ಲಿ ಮದ್ದು ಮಾಡುವ ಬದಲು ಮನೆಯಲ್ಲೇ ಒಂದು ಸಮಗ್ರ ವಾಗಿರುವ ಮನೆಮದ್ದನ್ನು ತೆಗೆದುಕೊಳ್ಳಿ ಖಂಡಿತವಾಗಿ ನಿಮ್ಮ ಜೀವನದಲ್ಲಿ ಒಂದು ಒಳ್ಳೆಯ ಸಕಾರಾತ್ಮಕ ಬದಲಾವಣೆ ಬರುವುದರಲ್ಲಿ ಖಂಡಿತ ಅನುಮಾನವಿಲ್ಲ.

ಹೌದು ಇಂದು ನಾವು ಹೇಳುತ್ತಿರುವ ಮನೆಮದ್ದನ್ನು ತಪ್ಪದೇ ನೀವು ಕೂಡ ಮನೆಯಲ್ಲಿ ಉಪಯೋಗಿಸಿ ಹಾಗೂ ಇದರಿಂದ ನಿಮಗೆ ಒಳ್ಳೆಯ ಫಲಿತಾಂಶ ಬಂದರೆ ನಿಮ್ಮ ನೆಚ್ಚಿನ ಸ್ನೇಹಿತರು ಹಾಗೂ ಮನೆಯವರಿಗೆ ಹಾಗೂ ಸಂಬಂಧಿಗಳಿಗೆ ತಪ್ಪದೆ ಬಳಸಲು ಸಲಹೆ ನೀಡಿ. ಈ ಮನೆಮದ್ದು ಹೇಗೆ ತಯಾರಿಸಬೇಕೆಂಬ ವಿಧಾನವನ್ನು ಒಂದೊಂದು ಹಂತವಾಗಿ ನಿಮಗೆ ಹೇಳುತ್ತೇವೆ ಬನ್ನಿ. ಮೊದಲಿಗೆ ನೀರನ್ನು ಕಾಯಿಸಲು ಇಡಿ, ನೀರು ಕಾದ ನಂತರ ಅದಕ್ಕೆ ಒಂದು ಟೀ ಸ್ಪೂನ್ ನಷ್ಟು ಮೆಂತ್ಯೆ ಕಾಳನ್ನು ಹಾಕಿ. ಮೆಂತೆ ದೇಹದಲ್ಲಿ ಮಧುಮೇಹದ ಅಂಶವನ್ನು ಸರಿಯಾದ ಅಂಶದಲ್ಲಿ ನಿಯಂತ್ರಣ ಮಾಡಲು ಸಹಕಾರಿಯಾಗುತ್ತದೆ.

ಇನ್ನು ಇದಕ್ಕೆ ಸ್ವಲ್ಪ ಕರಿಬೇವನ್ನು ಸೇರಿಸಿ ಕಾಯಿಸಿ. ಕರಿಬೇವು ಆರೋಗ್ಯಕ್ಕೆ ಉತ್ತಮವಾಗಿದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಇದು ಕೂಡ ಮಧುಮೇಹದ ನಿಯಂತ್ರಣಕ್ಕೆ ರಾಮಬಾಣವಾಗಿದೆ. ಇನ್ನೊಂದು ಮುಖ್ಯ ವಿಚಾರ ಡಯಾಬಿಟಿಸ್ ವಿಚಾರಕ್ಕೆ ಬಂದರೆ ಕರಿಬೇವಿನ ಸೇವನೆ ಖಂಡಿತವಾಗಿ ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ. ಹಾಗಾಗಿ ತಪ್ಪದೆ ನಿಮ್ಮ ಪ್ರತಿಯೊಂದು ಸೇವನೆಯಲ್ಲಿ ಕರಿಬೇವಿನ ಆದ್ಯತೆ ಇಟ್ಟುಕೊಳ್ಳಿ ನಿಮಗೆ ಒಳ್ಳೆಯ ಲಾಭವಾಗುತ್ತದೆ.

ಇನ್ನು ಈ ಮಿಶ್ರಣಕ್ಕೆ ಹಸಿಶುಂಠಿಯನ್ನು ಸ್ವಲ್ಪ ಪ್ರಮಾಣದಲ್ಲಿ ಜಜ್ಜಿ ಹಾಕಿ ಕೊಳ್ಳಬೇಕು. ಈ ಹಸಿಶುಂಠಿ ಜಜ್ಜಿ ಹಾಕುವುದರಿಂದ ಕೇವಲ ಡಯಾಬಿಟಿಸ್ ಗೆ ಮಾತ್ರವಲ್ಲದೆ ನಿಮ್ಮ ದೇಹದ ಜೀರ್ಣಕ್ರಿಯೆಗೆ ಕೂಡಾ ಇದು ಸಹಕಾರಿ. ಇನ್ನು ಇದಕ್ಕೆ ನಾವು ಬಿರಿಯಾನಿ ಗೆ ಬಳಸುವ ದಾಲ್ಚಿನ್ನಿ ಚಕ್ಕೆ ಭಾಗಮಾಡಿ ಹಾಕಿಕೊಳ್ಳಬೇಕು. ನಂತರ ಇದನ್ನು ತೀವ್ರ ಪ್ರಮಾಣದಲ್ಲಿ ಕುದಿಸಬೇಕು. ಇದಾದ ನಂತರ ಗ್ಲಾಸಿಗೆ ಹಾಕಿ ಉಗುರು ಬೆಚ್ಚಗೆ ಆಗುವವರೆಗೂ ಅದನ್ನು ತಣಿಯಲು ಬಿಡಬೇಕು. ಇದಾದ ನಂತರ ಇದನ್ನು ಬೆಳಗ್ಗೆ ಹಲ್ಲುಜ್ಜಿದ ನಂತರ ಇದನ್ನು ಕುಡಿಯಬೇಕು. ಇದು ಕುಡಿದ ನಂತರ ಅರ್ಧ ಗಂಟೆಯವರೆಗೂ ಏನನ್ನು ಸೇವಿಸಬಾರದು. ಅದಾದ ನಂತರ ಬೇಕಾದರೆ ನೀವು ನಿಮ್ಮ ತಿಂಡಿಯನ್ನು ಸೇವಿಸಬಹುದು.

ಸ್ನೇಹಿತರ ಇತರ ಸೇವನೆಯಿಂದಾಗಿ ನಿಮಗೆ ಕೊಲೆಸ್ಟ್ರಾಲ್ ಮಲಬದ್ಧತೆ ಕೀಲುನೋವು ರೋಗನಿರೋಧಕ ಶಕ್ತಿ ಹೆಚ್ಚಾಗುವಿಕೆ ಹಾಗೂ ಡಯಾಬಿಟಿಸ್ ಅನ್ನು ನಿಯಂತ್ರಣದಲ್ಲಿಡುತ್ತದೆ. ನೋಡಿದ್ರೆ ಸ್ನೇಹಿತರೆ ಕೇವಲ ಒಂದು ಮನೆಮದ್ದು ಸರಳವಾಗಿ ಎಷ್ಟೆಲ್ಲ ದೊಡ್ಡ ದೊಡ್ಡ ರೋಗಗಳನ್ನು ನಿರ್ಮೂಲನೆ ಮಾಡಲು ಸಾಧ್ಯವೆಂದು. ನೀವು ಕೂಡ ತಪ್ಪದೇ ಇದನ್ನು ಸೇವಿಸಿ ಹಾಗೂ ಜೀವನದಲ್ಲಿ ಆರೋಗ್ಯಕರ ಕ್ಷಣಗಳನ್ನು ಕಳೆಯಿರಿ. ಈ ಕುರಿತಂತೆ ನಿಮ್ಮ ನೆಚ್ಚಿನ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೆ ಹಂಚಿಕೊಳ್ಳಿ.

Comments are closed.