ಬಿಗ್ ಬಾಸ್ ನೀಡಿದರು ಮತ್ತೊಂದು ಬಿಗ್ ಟ್ವಿಸ್ಟ್, ಮನೆಯಿಂದ ಹೊರ ಹೋಗಲು ಸಿದ್ದವಾದ ಮೂರು ಸ್ಪರ್ದಿಗಳು, ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ನ ಕಲರವ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯದಾದ್ಯಂತ ವೀಕ್ಷಕರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇನ್ನು ವೀಕ್ಷಕರ ಸಂಖ್ಯೆ ಜಾಸ್ತಿ ಆಗುವುದಕ್ಕೆ ತುಂಬಾ ಕಾರಣವಿದೆ ಅದರಲ್ಲಿ ಮೇಲ್ಮೈ ಮೂಲಕ ಹೇಳುವುದಾದರೆ ವಾರದಿಂದ ವಾರಕ್ಕೆ ಬಿಗ್ ಬಾಸ್ ನೀಡುತ್ತಿರುವ ಟ್ವಿಸ್ಟ್.

ಹೌದು ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಲಾಕ್ ಡೌನ್ ನಡುವೆಯೇ ಪ್ರಾರಂಭವಾಗಿ ನಂತರ ದಿನಗಳಲ್ಲಿ ನಿಯಮಗಳಿಂದಾಗಿ ಅರ್ಧಕ್ಕೆ ನಿಂತು ಮತ್ತೆ ಪುನಹ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಎಂಬ ಹೆಸರಿನ ಮೂಲಕ ಪ್ರಾರಂಭವಾಗಿತ್ತು. ಎಂದಿನಂತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಿರೂಪಣಾ ಶೈಲಿ ಮತ್ತೊಮ್ಮೆ ಅಪ್ಪ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ಪ್ರಯಾಣ ಪ್ರಾರಂಭವಾಗಿತ್ತು. ಮನೆಯಲ್ಲಿ ಕೆಲವೊಮ್ಮೆ ಆಗಿದೆ ಜಗಳ ನಡೆಯುತ್ತಿದ್ದರೆ ಅದನ್ನು ವಾರಂತ್ಯದಲ್ಲಿ ಕಿಚ್ಚ ಸುದೀಪ ರವರು ಶಮನ ಮಾಡಲು ಪ್ರಯತ್ನಿಸುತ್ತಿದ್ದರು. ಈಗಾಗಲೇ ನಿಧಿಸುಬ್ಬಯ್ಯ ರಘು ಗೌಡ ಪ್ರಿಯಾಂಕಾ ಹಾಗೂ ಮೊನ್ನೆ ಮಧ್ಯರಾತ್ರಿಯಷ್ಟೇ ಚಕ್ರವರ್ತಿ ಚಂದ್ರಚುಡ್ ರವರನ್ನು ಕೂಡ ಎಲಿಮಿನೇಟ್ ಮಾಡಿ ಹೊರಗೆ ಕಳಿಸಲಾಗಿತ್ತು.

ಆದರೆ ಈಗ ಬಿಗ್ ಬಾಸ್ ಎಂದು ಹೊಸ ಶಾಕ್ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಂದೊದಗಿದೆ. ಹೌದು ಸ್ನೇಹಿತರೆ ಕೇವಲ 98 ದಿನಕ್ಕೆ ಮುಗಿಯಬೇಕಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಈಗ ಇನ್ನೆರಡು ವಾರಗಳಿಗೆ ವಿಸ್ತರಣ ವಾಗಿದೆ. ಈ ಕಾರಣದಿಂದಾಗಿಯೇ ಫೈನಲಿಗೆ ಅಭ್ಯರ್ಥಿಗಳನ್ನು ಮಾತ್ರ ಉಳಿಸಿಕೊಳ್ಳಲು ಬಿಗ್ ಬಾಸ್ ತಂಡ ನಿರ್ಧರಿಸಿದೆ. ಹೀಗಾಗಿ ಇರುವ ಅಭ್ಯರ್ಥಿಗಳಲ್ಲಿ ಮೂರು ಜನರನ್ನು ಮನೆಯಿಂದ ಹೊರಗೆ ಎಲಿಮಿನೇಟ್ ಮಾಡಿ ಕಳಿಸಲು ಬಿಗ್ ಬಾಸ್ ತಂಡ ನಿರ್ಧರಿಸಿದೆ. ಹೀಗಾಗಿ ಬಿಗ್ ಬಾಸ್ ಫಿನಾಲೆ ಗೂ ಮುನ್ನ ಬಿಗ್ ಬಾಸ್ ಮನೆಯಿಂದ ಮೂರು ಮಂದಿ ಹೊರಗಡೆ ಹೋಗೋದು ನಿಶ್ಚಿತವಾಗಿದೆ. ಈ ಸಮಯದಲ್ಲಿ ಶಮಂತ್, ದಿವ್ಯ ಸುರೇಶ್ ಹಾಗೂ ಶುಭ ಪೂಂಜಾ ಹೊರ ಹೋಗಬಹುದು ಎಂದು ಅಭಿಪ್ರಾಯಗಳು ಕೇಳಿ ಬಂದಿವೆ. ಇನ್ನು ಈ ಬಾರಿಯ ಬಿಗ್ ಬಾಸ್ ಫಿನಾಲೆಗೆ ಆಯ್ಕೆಯಾಗುವ ಐದು ಮಂದಿ ಅಭ್ಯರ್ಥಿಗಳು ಯಾರೆಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.

Comments are closed.