ಇಂದಿನ ಜನರ ಅಚ್ಚು ಮೆಚ್ಚಿನ ಧಾರಾವಾಹಿಯ ನಟಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಾರಂತೆ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ನಟ-ನಟಿಯರ ಗಿಂತ ಹೆಚ್ಚಾಗಿ ಧಾರಾವಾಹಿಯ ನಟ-ನಟಿಯರ ಸಾಕಷ್ಟು ಜನಪ್ರಿಯರಾಗಿದ್ದಾರೆ. ಕಾರಣ ಸಿನಿಮಾ ಚಿತ್ರೀಕರಣ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಚಿತ್ರಗಳನ್ನು ಬಿಡುಗಡೆ ಕೂಡ ಮಾಡುತ್ತಿಲ್ಲ ಹಾಗಾಗಿ ಬಹುತೇಕ ಪ್ರೇಕ್ಷಕರು ಸಿನಿಮಾ ನಟ ಹಾಗೂ ನಟಿಯರನ್ನು ಮರೆತುಬಿಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳಲ್ಲಿ ಅತ್ಯಂತ ಹೆಚ್ಚು ಪ್ರೇಕ್ಷಕರಿಂದ ವೀಕ್ಷಿಸಲ್ಪಡುತ್ತಿರುವ ಧಾರವಾಹಿಗಳಲ್ಲಿ ಒಂದಾಗಿರುವ ಕನ್ನಡತಿ ಧಾರವಾಹಿ ನಟಿ ರಂಜನಿ ರಾಘವನ್ ಅವರ ಬಗ್ಗೆ ನಿಮಗೆಲ್ಲ ಗೊತ್ತಿದೆ. ಈ ಹಿಂದೆ ಅವರು ಕನ್ನಡ ಕಿರುತೆರೆ ಇತಿಹಾಸದ ಅತ್ಯಂತ ಯಶಸ್ವಿ ಧಾರವಾಹಿ ಯಾಗಿರುವ ಪುಟ್ಟಗೌರಿ ಮದುವೆ ಯಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮಾತ್ರವಲ್ಲದೆ ಇಷ್ಟದೇವತೆ ಎಂಬ ಧಾರಾವಾಹಿಯನ್ನು ಕೂಡ ನಿರ್ದೇಶಿಸಿ ನಿರ್ದೇಶಕಿಯಾಗಿ ಕೂಡ ಯಶಸ್ವಿಯಾಗಿದ್ದರು. ಇನ್ನು ಈಗ ಈ ಮಹಾಮಾರಿಯ ಕುರಿತಾಗಿ ಲಾಕ್ಡೌನ್ ಮತ್ತೊಮ್ಮೆ ಸೇರಿರುವುದರಿಂದ ಈ ಸಮಯದಲ್ಲಿ ನಟಿ ರಂಜನಿ ರಾಘವನ್ ಪೋಲೀಸ್ ಆಗಲು ಹೊರಟಿದ್ದಾರೆ.

ರಂಜಿನಿ ರಾಘವೇಂದ್ರ ಪೊಲೀಸ್ ಆಗೋಕೆ ಹೊರಟಿದ್ದಾರೆ ಎಂದಾಗ ನೀವು ಆಶ್ಚರ್ಯ ಪಡುತ್ತೀರಿ. ಆಶ್ಚರ್ಯ ಪಡುವ ವಿಷಯ ಏನಿಲ್ಲ ಸ್ನೇಹಿತರೆ ರಂಜನಿ ರಾಘವನ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ವಯಂ ಪ್ರೇರಿತ ಪೊಲೀಸರ ಕೆಲಸವನ್ನು ನಾವೇ ಮಾಡೋಣ ಎಂಬುದಾಗಿ ಹೇಳಿದ್ದಾರೆ. ಹಾಗೆ ಮಾಡಿದಾಗಲೇ ಹೆಚ್ಚಾಗುತ್ತಿರುವ ಈ ಮಹಾಮಾರಿಯನ್ನು ನಾವು ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರೆ ನಿಲ್ಲಿಸಲು ಸಾಧ್ಯ ಎಂಬುದಾಗಿ ಹೇಳಿಕೊಂಡಿದ್ದಾರೆ. ಎಲ್ಲಾ ನಿಯಮಗಳನ್ನು ಪಾಲಿಸಿದರೆ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಈ ಮಹಾಮಾರಿ ಸಂಪೂರ್ಣವಾಗಿ ತೊಲಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.