13 ವರ್ಷದ ಹುಡುಗ ನನ್ನು ಬಲವಂತವಾಗಿ ಮದುವೆಯಾದಳು, ಮೊದಲ ರಾತ್ರಿ ನಂತರ ನಡೆದ್ದದೇನು ಗೊತ್ತೇ?? ಟೀಚರ್ ಆಗಿ ಈ ಕೆಲಸ ಮಾಡಬಹುದೇ ಎಂದ ನೆಟ್ಟಿಗರು.
ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ನೀವು ನಮ್ಮ ಸಮಾಜದಲ್ಲಿ ಹೆಣ್ಣುಮಕ್ಕಳ ವಿರುದ್ಧ ನಡೆಯುವಂತಹ ಕೆಟ್ಟ ಕಾರ್ಯಗಳು ಕುರಿತಂತೆ ಸುದ್ದಿ ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಕೆಲವೊಂದು ಹೆಣ್ಣುಮಕ್ಕಳ ಜೀವನದಲ್ಲಿ ಬಲವಂತವಾಗಿ ಮದುವೆಯಾಗುವುದು ಹಾಗೂ ಬೇರೆ ಕೆಟ್ಟ ವಿಚಾರಗಳನ್ನು ಅವರ ಮೇಲೆ ಎಸಗುವುದನ್ನು ಕೇಳಿರುತ್ತೀರಿ. ಆದರೆ ಇಂದು ನಾವು ಮಾತನಾಡಲು ಹೊರಟಿರುವ ವಿಚಾರವನ್ನು ಕೇಳಿದರೆ ನೀವು ಅರಗಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಹಾಗಿದ್ದರೆ ಅಷ್ಟಕ್ಕೂ ನಡೆದಿರುವುದು ಏನು ಅನ್ನುವುದನ್ನು ತಿಳಿಯೋಣ ಬನ್ನಿ.
ಈ ಕತೆಯಲ್ಲಿ ಯಾವುದೇ ಮಹಿಳೆಯ ಮೇಲೆ ಅನ್ಯಾಯ ನಡೆದಿಲ್ಲ. ಬದಲಾಗಿ ಪಂಜಾಬಿನ ಜಲಂಧರ್ ಎನ್ನುವ ಪ್ರಾಂತ್ಯದಲ್ಲಿ 13 ವರ್ಷದ ಹುಡುಗನ ಮೇಲೆ ಒಬ್ಬ ಮಹಿಳೆ ಅನ್ಯಾಯವನ್ನು ಎಸಗಿದ್ದಾಳೆ. ಹೌದು ಅಪ್ರಬುದ್ಧ ಹುಡುಗನನ್ನು ಆ ಮಹಿಳೆ ಬಲವಂತವಾಗಿ ಮದುವೆಯಾಗಿದ್ದಾಳೆ. ಈ ವಿಚಾರ ಈಗ ದೊಡ್ಡಮಟ್ಟದಲ್ಲಿ ಸದ್ದನ್ನು ಮಾಡುತ್ತಿದೆ.
ಹೌದು ಜಲಂಧರ್ ನಲ್ಲಿರುವ ಟೀಚರ್ ಒಬ್ಬಳು ತನ್ನದೇ ಸ್ಟುಡೆಂಟ್ ಆಗಿರುವ 13 ವರ್ಷದ ಅಪ್ರಬುದ್ಧ ಬಾಲಕನೊಂದಿಗೆ ಬಲವಂತವಾಗಿ ಮದುವೆಯಾಗಿದ್ದಾಳೆ ಎಂಬುದಾಗಿ ದಾಖಲಾಗಿದೆ. ಇದರ ಹಿಂದೆ ಅವೈಜ್ಞಾನಿಕ ಮೂಢನಂಬಿಕೆಗಳ ಕಾರಣ ಕೂಡ ಇದೆ ಎಂಬುದಾಗಿ ಕೇಳಿಬರುತ್ತಿದೆ. ಗುರು ಶಿಷ್ಯರ ಸಂಬಂಧ ಎಂತದ್ದು ಹಾಗೂ ಎಷ್ಟು ಪವಿತ್ರವಾದದ್ದು ಎನ್ನುವುದು ನಮಗೆಲ್ಲಾ ಗೊತ್ತಿದೆ. ಆದರೆ ಇಂತಹ ಘಟನೆಗಳನ್ನು ನೋಡಿದರೆ ನಿಜಕ್ಕೂ ಕೂಡ ವಿಷಾದನೀಯ ಎಂದು ಅನಿಸುವುದು ಸುಳ್ಳಲ್ಲ. ಅಂಧ ವಿಶ್ವಾಸದ ಕಾರಣದಿಂದಾಗಿ ಟೀಚರ್ 13 ವರ್ಷದ ಹುಡುಗ ನನ್ನು ಮದುವೆಯಾಗಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.
ವಿಚಾರಗಳ ಮೂಲಕ ಆ ಟೀಚರ್ ರವರ ಕುಂಡಲಿಯಲ್ಲಿ ವಿವಾಹದ ದೋಷ ಇದೆ ಎನ್ನುವುದಾಗಿ ತಿಳಿದುಬಂದಿದ್ದು ಅದರ ನಿವಾರಣೆಗಾಗಿ 13 ವರ್ಷದ ಬಾಲಕನನ್ನು ಮದುವೆಯಾಗಿದ್ದಾಳೆ ಎನ್ನುವುದಾಗಿ ತಿಳಿದು ಬಂದಿದೆ. ಇದರ ಕುರಿತಂತೆ ತಿಳಿಯುತ್ತಲೇ ಆ ಹುಡುಗನ ಮನೆಯವರು ಟೀಚರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಮೂಲಗಳ ಪ್ರಕಾರ ಟೀಚರ್ ಅದೇ ಹಳ್ಳಿಯಲ್ಲಿ ಇರುವಂತಹ ಶಾಲೆಯ ಟೀಚರ್ ಆಗಿದ್ದು ಆ ಶಾಲೆಗೆ ಬರುತ್ತಿದ್ದ 13 ವರ್ಷದ ಬಾಲಕನನ್ನು ಟ್ಯೂಷನ್ ಕೊಡಿಸುವ ನೆಪದಿಂದ ತನ್ನ ಮನೆಗೆ ಕರೆದುಕೊಂಡು ಹೋಗುತ್ತಾಳೆ. ನಂತರ ಆತನನ್ನು ಬರೋಬ್ಬರಿ ಆರು ದಿನಗಳ ಕಾಲ ತನ್ನ ಮನೆಯಲ್ಲಿ ಇರಿಸಿಕೊಳ್ಳುತ್ತಾಳೆ. ಈ ಸಂದರ್ಭದಲ್ಲಿ ತನ್ನ ಮಾಂಗಲಿಕ ದೋಷದ ನಿವಾರಣೆಗಾಗಿ ಆತನನ್ನು ಮದುವೆ ಕೂಡ ಆಗುತ್ತಾಳೆ.
ಮುಖ್ಯವಾಗಿ ಹೇಳುವುದಾದರೆ ಆ 13 ವರ್ಷದ ಹುಡುಗ ಬಡ ಕುಟುಂಬದಿಂದ ಬಂದಿರುವವ ನಾಗಿರುತ್ತಾನೆ. ಆತನ ಮನೆಯಲ್ಲಿ ಶಿಕ್ಷಣ ಟ್ಯೂಷನ್ ಹಾಗೂ ಉತ್ತಮ ಊಟದ ಮಾತುಗಳು ಕನಸಾಗಿರುತ್ತದೆ. ಹೀಗಾಗಿ ಆ ಹುಡುಗನ ತಂದೆ ತಾಯಿ ಬಳಿ ಆತನನ್ನು ಕೆಲದಿನಗಳ ಕಾಲ ನನ್ನ ಮನೆಯಲ್ಲೇ ಇರಿಸಿಕೊಂಡು ಚೆನ್ನಾಗಿ ಟ್ಯೂಷನ್ ನೀಡುತ್ತೇನೆ ಎಂಬುದಾಗಿ ಹೇಳಿ ಪುಸಲಾಯಿಸಿದ್ದಾರೆ. ಈ ಸಂದರ್ಭದಲ್ಲಿಯೇ ಹುಡುಗನೊಂದಿಗೆ ಮದುವೆಯ ರಿಂದ ಹಿಡಿದು ಮೊದಲ ರಾತ್ರಿ ಅವರಿಗೆ ಎಲ್ಲಾ ತಯಾರಿಗಳನ್ನು ಕೂಡ ಆಕೆ ಮಾಡಿಕೊಂಡಿದ್ದಳು.
ಮದುವೆಯಾದ ಆರು ದಿನಕ್ಕೆ ಆಕೆ ವಿಧವೆ ಕೂಡ ಆಗುತ್ತಾಳೆ. ಹೌದು ಗಂಡ ಮರಣ ಹೊಂದಿದ ನಂತರ ಎಲ್ಲಾ ಮಹಿಳೆಯರು ಮಾಡುವಂತಹ ಶೋಕಾಚರಣೆ ಯನ್ನು ಕೂಡ ಆಕೆ ತನ್ನ ಸಂಬಂಧಿಕರನ್ನು ಕರೆದು ಮಾಡುತ್ತಾಳೆ. ಈ ಸಂದರ್ಭದಲ್ಲಿ ಇರುವಂತಹ ಎಲ್ಲಾ ವಿಧಿವಿಧಾನಗಳನ್ನು ಕೂಡ ಆಯ್ಕೆ ಮಾಡುತ್ತಾಳೆ. ಮೊದಲ ರಾತ್ರಿಯ ದಿನ ಆಕೆ ಧರಿಸಿರುವ ಅಂತಹ ಬಳೆಗಳನ್ನು ಕೂಡ ಚೂರು ಚೂರು ಮಾಡುತ್ತಾಳೆ. ಇದೆಲ್ಲ ನಡೆದ ನಂತರ ಆ ಹುಡುಗನನ್ನು ಆತನ ಮನೆಗೆ ಹೋಗಲು ಹೇಳುತ್ತಾಳೆ. ಹುಡುಗ ಮನೆಗೆ ಹೋದ ನಂತರ ತನ್ನ ತಂದೆ-ತಾಯಿಗೆ ಈ ವಿಚಾರವನ್ನು ಸಂಪೂರ್ಣ ವಿವರವಾಗಿ ಹೇಳುತ್ತಾನೆ. ನಂತರವೇ ಅವನ ಮನೆಯವರು ಪೊಲೀಸ್ ಠಾಣೆಯಲ್ಲಿ ಟೀಚರ್ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.