ಮತ್ತೊಮ್ಮೆ ಕೊಟ್ಟ ಮಾತನ್ನು ಉಳಿಸಿಕೊಂಡ ದರ್ಶನ್ ಬುಲೆಟ್ ಪ್ರಕಾಶ್ ಮಗನ ಕೈ ಹಿಡಿದು ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೇವಲ ನಟರು ನಟಿಯರು ಮಾತ್ರವಲ್ಲದೆ ಎಲ್ಲ ವರ್ಗದ ಜನರೂ ಕೂಡ ಹಾಗೂ ತಂತ್ರಜ್ಞರು ಕೂಡ ತಮ್ಮ ಒಳ್ಳೆಯ ಕೆಲಸಕ್ಕೆ ಕನ್ನಡ ಪ್ರೇಕ್ಷಕರಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದ್ದಾರೆ. ಪ್ರತಿಭೆಯಿಂದ ಕಡೆ ಕನ್ನಡಿಗರು ಪ್ರೋತ್ಸಾಹ ನೀಡುವುದು ಯಾವತ್ತು ನಿಲ್ಲಿಸಿಲ್ಲ. ಹೀಗೆ ಚಿತ್ರರಂಗದಲ್ಲಿ ಈ ಹಿಂದೆ ಆಳಿಹೋದ ಹಾಸ್ಯ ಕಲಾವಿದರ ಒಬ್ಬರ ಬಗ್ಗೆ ನಾವು ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ನಾವು ಏನು ಮಾತನಾಡುತ್ತಿರುವುದು ಕನ್ನಡ ಚಿತ್ರರಂಗದಲ್ಲಿ 350 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಹಾಸ್ಯ ಕಲಾವಿದರಾಗಿ ಕಾಣಿಸಿಕೊಂಡಿರುವ ಕನ್ನಡಿಗರ ನೆಚ್ಚಿನ ಹಾಸ್ಯ ಕಲಾವಿದರಲ್ಲಿ ಒಬ್ಬರಾದ ಬುಲೆಟ್ ಪ್ರಕಾಶ್ ಅವರ ಬಗ್ಗೆ. ಹೌದು ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೆ ಸ್ಕ್ರೀನ್ ಹಂಚಿಕೊಂಡಿರುವ ಕೆಲವೇಕೆಲವು ಸ್ಟಾರ್ ಹಾಸ್ಯ ಕಲಾವಿದರಲ್ಲಿ ನಮ್ಮ ಬುಲೆಟ್ ಪ್ರಕಾಶ್ ಕೂಡ ಒಬ್ಬರು. ತಮ್ಮ ಧಡೂತಿ ದೇಹ ದಿಂದ ಎಷ್ಟೇ ಕಷ್ಟವನ್ನು ಅನುಭವಿಸಿದರು ಸಹ ತಮ್ಮ ಹಾವಭಾವ ಹಾಗೂ ನಟನೆಯ ಮೂಲಕ ಕನ್ನಡಿಗರನ್ನು ತಮ್ಮ ಕೊನೆಯ ದಿನದವರೆಗೂ ಕೂಡ ಮುಗಿಸಿಕೊಂಡು ಬಂದಿದ್ದಾರೆ.

ಬೇರೆ ಕಲಾವಿದರು ನಾಟ್ಯ ಮಾಡಿ ನಟನೆ ಮಾಡಿ ವೀಕ್ಷಕರನ್ನು ನಗಿಸುತ್ತಿದ್ದರೆ ಬುಲೆಟ್ ಪ್ರಕಾಶ್ ರವರು ಕೇವಲ ತಮ್ಮ ಅಸ್ತಿತ್ವ ದಿಂದಲೇ ಪ್ರೇಕ್ಷಕರಿಂದ ಚಪ್ಪಾಳೆ ಹಾಗೂ ಮನರಂಜನೆಯ ಶಹಬ್ಬಾಸ್ ಗಿರಿಯನ್ನು ಪಡೆಯುತ್ತಿದ್ದ ಅಂತಹ ನಟ. ಆದರೆ ಅವರು ದಡೂತಿ ದೇಹದ ಆರೋಗ್ಯ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡಿ ಚಿತ್ರರಂಗದಿಂದ ದೂರ ಉಳಿಯುವಂತೆ ಮಾಡಿತು. ಇದರಿಂದಾಗಿ ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಹಾಸ್ಯ ನಟರಾಗಿ ಗುರುತಿಸಿಕೊಂಡಿರುವ ಬುಲೆಟ್ ಪ್ರಕಾಶ್ ರವರು,

ನಂತರದ ದಿನಗಳಲ್ಲಿ ಅವಕಾಶಕ್ಕಾಗಿ ಪರದಾಡುವಂತೆ ಆಯಿತು. ಆದರೆ ಮತ್ತೊಮ್ಮೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಎಂಬ ಹೊತ್ತಿನಲ್ಲಿ ಅವರು ಅನಾರೋಗ್ಯದ ಸಮಸ್ಯೆಯಿಂದಾಗಿ ಮತ್ತೊಮ್ಮೆ ಆಸ್ಪತ್ರೆ ಸೇರಿದವರು ಜೀವಂತವಾಗಿ ಬರಲೇ ಇಲ್ಲ. ಆದರೆ ಅವರಿಗೆ ಒಂದು ಆಸೆ ಇತ್ತು. ತನ್ನ ಮಗನನ್ನು ಸಿನಿರಂಗದಲ್ಲಿ ಒಂದು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುವುದು ಹಾಗೂ ತನ್ನ ಮಗಳಿಗೆ ಒಂದು ಒಳ್ಳೆ ಮನೆಯನ್ನು ನೋಡಿ ಮದುವೆ ಮಾಡಿಸುವುದು. ಆದರೆ ಇವೆರಡು ಕಾರ್ಯಗಳನ್ನು ಅಪೂರ್ಣವಾಗಿ ಮಾಡಿ ಅವರನ್ನೆಲ್ಲ ಬಿಟ್ಟು ಹೋದರು ಬುಲೆಟ್ ಪ್ರಕಾಶ್.

ಆದರೆ ಬುಲೆಟ್ ಪ್ರಕಾಶ್ ರವರು ನಮ್ಮನ್ನೆಲ್ಲ ಬಿಟ್ಟು ಹೋದ ಸಂದರ್ಭದಲ್ಲಿ ಅವರ ಪ್ರೀತಿಯ ನಟನಾಗುವ ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬುಲೆಟ್ ಪ್ರಕಾಶ್ ಅವರ ಮಕ್ಕಳ ಜವಾಬ್ದಾರಿ ನನ್ನದು ಎಂಬ ಭರವಸೆಯನ್ನು ನೀಡಿದ್ದಾರೆ. ಈಗ ಆ ಮಾತುಗಳು ನಿಜವಾಗುವ ಕಾಲ ಸನ್ನಿಹಿತವಾಗುತ್ತಿದೆ. ಹೌದು ಅದು ಹೇಗೆ ಎಂಬುದನ್ನು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗಾಗಲೇ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ರವರನ್ನು ಶರಣ್ ಹಾಗೂ ತರುಣ್ ಸುಧೀರ್ ನಿರ್ಮಾಣದಲ್ಲಿ ಜಡೇಶ್ ಕೆ ಹಂಪಿ ರವರ ನಿರ್ದೇಶನದಲ್ಲಿ ಹಾಗೂ ಸ್ವತಹ ಸರಂಡರ್ ಅವರು ನಟಿಸುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ಗುರು-ಶಿಷ್ಯರ ಚಿತ್ರದಲ್ಲಿ ನಟಿಸುವಂತೆ ಶಿಫಾರಸು ಮಾಡಿ ಈಗ ರಕ್ಷಕರ ಅವರು ಈ ಚಿತ್ರದಲ್ಲಿ ಒಂದು ಪಾತ್ರವನ್ನು ಕೂಡ ನಿರ್ವಹಿಸುತ್ತಿದ್ದಾರೆ.

ಚಿತ್ರದ ಮೊದಲ ಶೆಡ್ಯೂಲ್ ಮುಗಿದಿದ್ದು ರಕ್ಷಕ್ ರವರ ಕೆಲ ಭಾಗದ ಶೂಟಿಂಗ್ ಗಳು ಮುಗಿದಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮತ್ತೊಮ್ಮೆ ತಾವು ಹೇಳಿದ ಮಾತಿಗೆ ನಡೆದುಕೊಳ್ಳುವವನು ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲದೆ ಬುಲೆಟ್ ಪ್ರಕಾಶ್ ಅವರೊಂದಿಗೆ ಇದ್ದಂತಹ ಸ್ನೇಹವನ್ನು ಕೂಡ ಇಲ್ಲಿ ಬಿಂಬಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.