ತನ್ನ ತಾಯಿ ಬೇಗ ಸಾಯಲಿ ಎಂದು ತೆಲುಗು ನಟ ನಾಗಾರ್ಜುನ ರವರು ದೇವರಲ್ಲಿ ಪ್ರಾರ್ಥಿಸಿ ಕೊಂಡಿದ್ದು ಏಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಟಾಲಿವುಡ್ ಚಿತ್ರರಂಗದಲ್ಲಿ ವಯಸ್ಸು 60 ಆಗುತ್ತಾ ಬಂದರೂ ಕೂಡ ಹದಿಹರೆಯದ ಯುವಕನಂತೆ ಮನ್ಮಥನ ರೀತಿಯಲ್ಲಿರುವ ನಟ ಎಂದರೆ ಅದು ಖಂಡಿತವಾಗಿಯೂ ನಾಗಾರ್ಜುನ. ನಾಗಾರ್ಜುನ ರವರು ಅಂದಿನಿಂದ ಇಂದಿನವರೆಗೂ ಅದೇ ರೀತಿಯ ಅಭಿಮಾನಿ ಬಳಗ ಹಾಗೂ ನಟನಾ ಚಾತುರ್ಯ ತೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಸ್ನೇಹಿತರೆ ಎಲ್ಲರೂ ಕೂಡ ಭೂಮಿಯಲ್ಲಿ ಕಾಣುವ ದೇವರು ಎಂದರೆ ತಾಯಿ ಎನ್ನುತ್ತಾರೆ. ಎಲ್ಲರಂತೆ ನಟ ನಾಗಾರ್ಜುನ ರವರಿಗೆ ಕೂಡಾ ತಾಯಿಯೆಂದರೆ ಪ್ರಾಣ. ಆದರೆ ಅಷ್ಟೊಂದು ಪ್ರೀತಿಸುತ್ತಿದ್ದ ತಾಯಿ ಸಾಯಲಿ ಎಂದು ನಾಗಾರ್ಜುನ ರವರು ತಿರುಪತಿ ತಿಮ್ಮಪ್ಪ ನಲ್ಲಿ ಬೇಡಿಕೊಂಡಿದ್ದರು.

ತಪ್ಪು ತಿಳಿಯಬೇಡಿ ಸ್ನೇಹಿತರೇ ಇದಕ್ಕಿದ್ದಂತಹ ಕಾರಣವೇ ಬೇರೆ. ಹೌದು ಸ್ನೇಹಿತರೆ ನಾಗಾರ್ಜುನ ರವರ ತಾಯಿ ಅನ್ನಪೂರ್ಣ ರವರಿಗೆ 70ರ ವಯಸ್ಸಿನ ನಂತರ ಆರೋಗ್ಯ ಸಂಪೂರ್ಣವಾಗಿ ಕ್ಷೀಣಿಸಿತು. ಆದರೂ ಕೂಡ ನಾಗಾರ್ಜುನ ಅವರು ತಾಯಿಯನ್ನು ಮನೆಯಲ್ಲಿ ಹಾಸಿಗೆಯಮೇಲೆ ರಾಣಿಯಂತೆ ಸಾಕಲು ಆಳು ಕಾಳುಗಳನ್ನು ನೇಮಿಸಿದ್ದರು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಕೂಡ ತಪ್ಪದೆ ನೀಡುತ್ತಿದ್ದರು. ಆದರೂ ಕೂಡ ಅನ್ನಪೂರ್ಣರವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದೆ ಇನ್ನಷ್ಟು ಅವರು ನರಳಲು ಪ್ರಾರಂಭಿಸುತ್ತಾರೆ. ತಮ್ಮ ತಾಯಿಯ ಆದಂತಹ ಅನ್ನಪೂರ್ಣರವರ ನರಳುವಿಕೆ ನೋಡಲಾಗದೆ ನಾಗಾರ್ಜುನ ರವರು ಪ್ರತಿದಿನ ದುಃಖಿಸುತ್ತಿದ್ದರು. ಎಷ್ಟು ದಿನ ದೇವರಲ್ಲಿ ತಮ್ಮ ತಾಯಿ ಬೇಗ ಗುಣಮುಖರಾಗಲಿ ಎಂದು ಬೇಡುತ್ತಿದ್ದರು.

ಆದರೆ ಮೊದಲ ಬಾರಿಗೆ ನಾಗಾರ್ಜುನರ ಅವರು ತಮ್ಮ ತಾಯಿ ಬೇಗ ಸಾಯಲಿ ಈ ನೋವಿನಿಂದ ಮುಕ್ತಿ ದೊರಕಲಿ ಎಂಬುದಾಗಿ ಬಿಡಲು ಪ್ರಾರಂಭಿಸಿದರು. ಒಮ್ಮೆ ಬೆಂಗಳೂರಿಗೆ ಹೋಗಬೇಕಾದಾಗ ತಿರುಪತಿ ತಿಮ್ಮಪ್ಪನಿಗೆ ನಾನು ಬೆಂಗಳೂರಿನಲ್ಲಿ ವಿಮಾನ ನಿಲ್ದಾಣದಿಂದ ಇಳಿಯುವುದರ ಒಳಗಾಗಿ ನನ್ನ ತಾಯಿ ಸಾಯಲಿ ಎಂಬ ಪ್ರಾರ್ಥನೆಯನ್ನು ಮಾಡಿಕೊಂಡಿದ್ದರು. ಅವರ ಪ್ರಾರ್ಥನೆಯಂತೆ ಬೆಂಗಳೂರು ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ನಾಗಾರ್ಜುನ ರವರ ತಾಯಿ ಇಹಲೋಕ ತ್ಯಜಿಸಿರುವ ಸುದ್ದಿ ಅವರಿಗೆ ತಲುಪುತ್ತದೆ. ಒಂದು ಕಡೆ ತಾಯಿಯನ್ನು ಕಳೆದುಕೊಂಡ ದುಃಖ ಇದ್ದರೂ ಕೂಡ ಇನ್ನೊಮ್ಮೆ ಇಷ್ಟು ದಿನ ತಾಯಿ ಒದ್ದಾಡುತ್ತಿದ್ದ ನೋವಿನಿಂದ ಮುಕ್ತಿ ಪಡೆದು ಸ್ವರ್ಗ ಸೇರಿದ್ದಾರೆ ಅಂತ ಅವರ ಮನಸ್ಸಿನಲ್ಲಿ ಸಂತೃಪ್ತಿ ಕೂಡ ಇತ್ತು. ಹಲವಾರು ದಶಕಗಳ ಯಶಸ್ವಿ ಸಿನಿ ಜೀವನವನ್ನು ಆಚರಿಸಿ ಭಾರತೀಯ ಚಿತ್ರರಂಗದಲ್ಲಿ ದಂತಕಥೆಯಾಗಿರುವ ನಾಗಾರ್ಜುನ ರವರ ಜೀವನದಲ್ಲಿ ಈ ಘಟನೆ ಸದಾಕಾಲ ಕಪ್ಪುಚುಕ್ಕೆಯಾಗಿ ಉಳಿದಿರುವುದು ಸತ್ಯ.

Comments are closed.