ಸಂಗ್ರಹವಾಗಿರುವ ದುಡ್ಡು ಕೊಟ್ಟರೂ ಕೂಡ ಬೇಡ ಎಂದ ವಿಜಯಲಕ್ಷ್ಮಿ, ಇದೀಗ ಮತ್ತೊಂದು ರಾಗ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚೆಗೆ ವಿಜಯಲಕ್ಷ್ಮಿಯವರ ಕುರಿತಂತೆ ನಡೆಯುತ್ತಿರುವ ಸುದ್ದಿಗಳು ಯಾವುದೇ ಸಿನಿಮಾ ಹಾಗೂ ಧಾರಾವಾಹಿಗಳಿಗಿಂತ ಕಡಿಮೆಯಿಲ್ಲದಂತೆ ಮನೋರಂಜನೆಯನ್ನು ಹಾಗೂ ಟ್ವಿಸ್ಟ್ ಗಳನ್ನು ನೀಡುತ್ತಿವೆ. ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ನಟಿ ವಿಜಯಲಕ್ಷ್ಮಿ ಅವರು ತಮ್ಮ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನಸ್ನೇಹಿ ಯೋಗೇಶ್ ಅವರು ನನ್ನ ದುಡ್ಡು ಹೊಡೆಯಲು ಪ್ಲಾನ್ ಮಾಡುತ್ತಿದ್ದಾರೆ ಎಂಬುದಾಗಿ ಅರ್ಥ ಮಾಡುವಂತೆ ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

ಹೌದು ಸ್ನೇಹಿತರೆ ವಿಜಯಲಕ್ಷ್ಮಿಯವರ ತಾಯಿಯವರು ಅವರನ್ನು ಬಿಟ್ಟು ಹೋಗಿದ್ದಾಗ ಮೊದಲಿಗೆ ಸಂಬಂಧಿಕರೊಬ್ಬರ ಖಾತೆಯ ಡೀಟೇಲ್ಸ್ ನೀಡಿ ಸಹಾಯ ಮಾಡುವಂತೆ ಕೇಳಿದ್ದರು ನಂತರ ಜನಸ್ನೇಹಿ ಯೋಗೇಶ್ವರವರ ಖಾತೆಯ ಡೀಟೇಲ್ಸ್ ಅನ್ನು ನೀಡಿ ಅದಕ್ಕೆ ಹಣ ಹಾಕುವಂತೆ ಕೇಳಿದರು. ನಂತರ ವಿಡಿಯೋ ಮೂಲಕ ಜನಸ್ನೇಹಿ ಯೋಗೇಶ್ ರವರ ಅಕೌಂಟ್ಗೆ ಹಣ ಹಾಕಿದರೆ ನನಗೆ ಸೇರುವುದಿಲ್ಲ ಎಂಬುದಾಗಿ ಅವರ ಮೇಲೆ ಅಪವಾದ ಹೊರಿಸುತ್ತಾರೆ.

ಇದಕ್ಕೆ ಮನನೊಂದು ಅಂತಹ ಜನಸ್ನೇಹಿ ಯೋಗೇಶ್ ರವರು ತಮ್ಮ ಅಕೌಂಟ್ ನಲ್ಲಿ ವೋಟ್ ಆದಂತಹ ಮೂರು ಲಕ್ಷ ರೂಪಾಯಿ ಹಣವನ್ನು ವಾಣಿಜ್ಯ ಮಂಡಳಿಗೆ ಬಂದು ವಿಜಯಲಕ್ಷ್ಮಿಯವರಿಗೆ ನೀಡುವಂತೆ ಹೇಳಿದ್ದಾರೆ. ಮೊದಲಿಗೆ ಅವರು ನೀಡುವ ದುಡ್ಡು ನನಗೆ ಬೇಡ ಎಂದು ಹೇಳುತ್ತಿದ್ದ ವಿಜಯಲಕ್ಷ್ಮಿ ಅವರು ವಾಣಿಜ್ಯ ಮಂಡಳಿಯವರು ಕರೆ ಮಾಡಿ ತಮ್ಮ ಹಣವನ್ನು ತೆಗೆದುಕೊಂಡು ಹೋಗಿ ಎಂದು ಹೇಳಿದಾಗ ಇಂದು ಬರಲಾಗುವುದಿಲ್ಲ ನಾಳೆ ಬರುತ್ತೇನೆ ಎಂಬುದಾಗಿ ಹೇಳುತ್ತಾರೆ. ಹಣ ನೋಡಿದರೆ ಅದೇನು ಬಾಯಿ ಬಿಡುತ್ತದೆ ಎಂದು ಹೇಳಿದಂತೆ ವಿಜಯಲಕ್ಷ್ಮಿ ಅವರ ಕಥೆ ಆಯ್ತು, ಒಂದು ಸಲ ಬೇಡ ಎನ್ನುವುದು ಇನ್ನು ಒಂದು ಸಲ ಬರುತ್ತೇನೆ ಎನ್ನುವುದು. ಒಟ್ಟಾರೆಯಾಗಿ ನಟಿ ವಿಜಯಲಕ್ಷ್ಮಿ ಅವರ ಇತ್ತೀಚಿನ ದಿನಗಳ ನಡವಳಿಕೆ ನೋಡಿದರೆ ಖಂಡಿತವಾಗಿ ಅವರು ಮಾಡುತ್ತಿರುವುದು ನಿಜವೋ ಇಲ್ಲ ನಾಟಕವೋ ಎಂಬುದು ತಿಳಿಯದಂತಾಗಿದೆ.

Comments are closed.