ಮತ್ತೊಮ್ಮೆ ಮೋಸದಾಟ ಆಡಿದ ದಿವ್ಯಾ ಉರುಡುಗ – ಆಪ್ತ ಅರವಿಂದ್ ರನ್ನ ಟಾಸ್ಕ್ ನಲ್ಲಿ ಗೆಲ್ಲಿಸಲು ನಾಯಕತ್ವ ದುರ್ಬಳಕೆ, ಈ ಬಾರಿ ಶಮಂತ್ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಲಾಕ್ ಡೌನ್ ನಂತರ ಶುರುವಾದ ಬಿಗ್ ಬಾಸ್ ಮನೆ ಈಗ ಗಲಾಟೆ ಮನೆಯಾಗಿ ಪರಿವರ್ತನೆಯಾಗಿದೆ. ಪ್ರತಿ ದಿನ ಒಬ್ಬರಿಗೊಬ್ಬರು ಕಚ್ಚಾಡಿಕೊಳ್ಳುತ್ತಿರುವುದೇ ದೊಡ್ಡ ಟಾಸ್ಕ್ ಆಗಿದೆ. ಅದರಲ್ಲೂ ಈ ಸೀಸನ್ ನ ಮನೆಯ ಮೊದಲ ಮಹಿಳಾ ಕ್ಯಾಪ್ಟನ್ ಆದ ದಿವ್ಯಾ ಉರುಡುಗ ಬಗ್ಗೆ ಮನೆಯ ಸದಸ್ಯರು ಹಲವಾರು ಗುರುತರ ಆರೋಪ ಮಾಡಿದ್ದಾರೆ. ದಿವ್ಯ ತನ್ನ ಆಪ್ತ ಅರವಿಂದ್ ರನ್ನು ಟಾಸ್ಕ್ ನಲ್ಲಿ ಗೆಲ್ಲಿಸಲು ದಿವ್ಯಾ ಉರುಡುಗ ಸ್ವಜನ ಪಕ್ಷಪಾತ ಮಾಡುತ್ತಿದ್ದಾರಾ ಎಂಬ ದೂರು ಯಥೇಚ್ಛವಾಗಿ ಕೇಳಿ ಬರುತ್ತಿದೆ.

ಬಿಗ್ ಬಾಸ್ ಈ ವಾರ ಲಗ್ಜುರಿ ಬಜೆಟ್ ಟಾಸ್ಕ್ ನಲ್ಲಿ ಟಂಕಸಾಲೆ ಎಂಬ ಟಾಸ್ಕ್ ನೀಡಿದ್ದರು. ಬಜರ್ ಕೇಳಿ ಬಂದಾಗ ಮನೆಯ ಐದು ಸದಸ್ಯರು ಓಡಿ ಹೋಗಿ ಎಪ್ರಾನ್ ಧರಿಸಿ ನೋಟು ಮುದ್ರಣ ಮಾಡಬೇಕು. ಬಜರ್ ಆಗುವ ಮುನ್ನವೇ ಮನೆಯ ಸದಸ್ಯರು ಗಾರ್ಡನ್ ಏರಿಯಾದಲ್ಲಿರಬಾರದೆಂಬ ನಿಯಮವನ್ನು ಸಹ ಬಿಗ್ ಬಾಸ್ ನೀಡಿದ್ದರು.

ಇದೇ ರೀತಿ ಮನೆಯ ಸ್ಪರ್ಧಿಗಳು ಬಜರ್ ಗಾಗಿ ಬಾಗಿಲ ಬಳಿ ಕಾಯುತ್ತಿದ್ದರು. ಆದರೇ ದಿವ್ಯಾ ಉರುಡುಗ ಆಪ್ತ ಅರವಿಂದ್ ಗೆ ಮೊದಲ ಐವರಾಗಲು ಅವಕಾಶವಿರಲಿಲ್ಲ. ಆದರೇ ಮತ್ತೊಬ್ಬ ಸ್ಪರ್ಧಿ ಶಮಂತ್ ಬಾಗಿಲ ಬಳಿ ಕಾಲಿಟ್ಟಿದ್ದನ್ನ ದಿವ್ಯಾ ಉರುಡುಗ ಫೌಲ್ ಎಂದು ಪರಿಗಣಿಸಿ ಅವರನ್ನ ಹಿಂದಕ್ಕೆ ಕಳಿಸಿದರು. ಅವರ ಜಾಗದಲ್ಲಿ ತಮ್ಮ ಆಪ್ತ ಕೆ.ಪಿ.ಅರವಿಂದ್ ರಿಗೆ ಅವಕಾಶ ನೀಡಿದರು. ಇದು ಮನೆಯ ಸದಸ್ಯರನ್ನ ಕೆರಳಿಸಿತು.

ಈ ಬಗ್ಗೆ ನೇರವಾಗಿ ಆಪಾದನೆ ಮಾಡಿದ ಶಮಂತ್ ಬ್ರೋ ಗೌಡ , ಅರವಿಂದ್ ಗೆ ಅನುಕೂಲ ಮಾಡಿಕೊಡಲು ದಿವ್ಯಾ ಉರುಡುಗ ಸುಖಾಸುಮ್ಮನೆ ನನಗೆ ಫೌಲ್ ಎಂದು ಹೇಳಿ ಹಿಂದೆ ಕಳಿಸಿದರು. ಇದು ನ್ಯಾಯಸಮ್ಮತವಾದ ಕ್ಯಾಪ್ಟನ್ಸಿಯಲ್ಲ ಎಂದು ಹೇಳಿದರು. ಇದಕ್ಕೆ ಮನೆಯ ಇತರ ಸದಸ್ಯರಾದ ಪ್ರಶಾಂತ್ ಸಂಬರ್ಗಿ ಹಾಗೂ ಚಕ್ರವರ್ತಿ ಚಂದ್ರಚೂಡ್ ದನಿಗೂಡಿಸಿದರು.

ಒಟ್ಟಿನಲ್ಲಿ ತನ್ನ ಆಪ್ತ ಅರವಿಂದ್ ರನ್ನು ಟಾಸ್ಕ್ ನಲ್ಲಿ ಗೆಲ್ಲಿಸಲು ನಾಯಕತ್ವವನ್ನ ದುರ್ಬಳಕೆ ಮಾಡಿಕೊಂಡರಾ ದಿವ್ಯಾ ಉರುಡುಗ ಎಂಬ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿವೆ. ನಿಮ್ಮ ಅಭಿಪ್ರಾಯವನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.