ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ಕಾರಣ ಬಿಚ್ಚಿಟ್ಟ ಅಪ್ಪು ಪತ್ನಿ ಅಶ್ವಿನಿ ಮೇಡಂ ! ಎಲ್ಲರೂ ಶಾಕ್. ಅಸಲಿ ಕಾರಣ ಏನಂತೆ ಗೊತ್ತೆ??

ಕಳೆದ ಶುಕ್ರವಾರ ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಸುಮಾರು 30 ರಿಂದ 40 ಸಾವಿರ ಅಭಿಮಾನಿಗಳು ಹಾಜರಾಗಿದ್ದರು. ಇದರ ಜೊತೆಗೆ ಹೈದರಾಬಾದ್, ಚೆನ್ನೈ ಸೇರಿದಂತೆ ವಿವಿಧ ಕಡೆಯಿಂದ ಸ್ಟಾರ್ ನಟರು ಭಾಗಿಯಾಗಿದ್ದರು. ಪುನೀತಪರ್ವಕ್ಕೆ ಭಾಗಿಯಾಗಿ ಪುನೀತರಾಗಲು ರಾಜ್ಯದ ಮೂಲೆ ಮೂಲೆಗಳಿಂದ ಸ್ವಂತ ಖರ್ಚಿನಲ್ಲಿ ಸಾವಿರಾರು ಅಭಿಮಾನಿಗಳು ಅರಮನೆ ಮೈದಾನಕ್ಕೆ ಬಂದಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಕೆಲಸ ಸಚಿವರು ಕೂಡ ಹಾಜರಿದ್ದರು. ತಮಿಳಿನ ಖ್ಯಾತ ನಟ ಸೂರ್ಯ, ತೆಲುಗಿನ ರಾಣ ದಗ್ಗುಬಾಟಿ, ಬಹುಭಾಷ ನಟ ಪ್ರಕಾಶ್ ರಾಜ್, ಸಾಯಿ ಕುಮಾರ್, ಸಿದ್ದಾರ್ಥ್, ಅಖಿಲ್ ಅಕ್ಕಿನೇನಿ ಹೀಗೆ ಸಾಕಷ್ಟು ಜನರು ಭಾಗಿಯಾಗಿದ್ದರು. ಅರ್ಥಪೂರ್ಣವಾಗಿ ಜರುಗಿದ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಅಮಿತಾ ಬಚ್ಚನ್ ಕಮಲ್ ಹಾಸನ್ ಪುನೀತ್ ಕುರಿತು ವಿಶೇಷ ವಿಡಿಯೋ ಸಂದೇಶ ಕೂಡ ರವಾನಿಸಿದ್ದರು. ಆದರೆ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದೀಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ದರ್ಶನ್ ಕಾರ್ಯಕ್ರಮಕ್ಕೆ ಬಾರದೇ ಇರಲು ಕಾರಣವೇನು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖ ನಟರು ಎಂದೇ ಗುರುತಿಸಿಕೊಳ್ಳುವ ಸುದೀಪ್ ಮತ್ತು ದರ್ಶನ್ ಇಬ್ಬರ ಸುಳಿವೂ ಇರಲಿಲ್ಲ ಎಂದು ನೆಟ್ಟಿಗರು ಕಿಡಿ ಕಾರುತ್ತಿದ್ದಾರೆ. ರಾಜ್ ಕುಟುಂಬಸ್ಥರು ಆಹ್ವಾನ ನೀಡಿದ್ದರೂ ಸಹ ಸುದೀಪ್, ದರ್ಶನ್, ಜಗ್ಗೇಶ್ ಮುಂತಾದವರು ಗೈರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿ ರವಿಚಂದ್ರನ್, ರಮೇಶ್ ಅರವಿಂದ್, ಯಶ್, ಧ್ರುವ ಸರ್ಜಾ, ದುನಿಯಾ ವಿಜಯ್, ಶ್ರೀನಗರ ಕಿಟ್ಟಿ, ಪ್ರಜ್ವಲ್ ದೇವರಾಜ್, ಸಾಧು ಕೋಕಿಲ, ಡಾರ್ಲಿಂಗ್ ಕೃಷ್ಣ ಡಾಲಿ ಧನಂಜಯ, ಸತೀಶ್ ನಿನಾಸಂ, ನೆನಪಿರಲಿ ಪ್ರೇಮ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ರಮ್ಯ, ಸುಮಲತಾ ಅಂಬರೀಶ್, ಸುಧಾರಾಣಿ, ಅಮೃತಾ ಅಯ್ಯಂಗಾ‌ರ್ ಸೇರಿದಂತೆ ಹಲವು ಸ್ಯಾಂಡಲ್‌ವುಡ್ ತಾರೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಕ್ಟೋಬರ್ 18ರಂದು ಸುದೀಪ್ ಅವರ ವಿವಾಹ ವಾರ್ಷಿಕೋತ್ಸವ ಇದ್ದರಿಂದ ಕುಟುಂಬದ ಜೊತೆ ಅವರು ವಿದೇಶ ಪ್ರಯಾಣಕ್ಕೆ ತೆರಳಿದ್ದಾರೆ, ಹೀಗಾಗಿ ಕಾರ್ಯಕ್ರಮಕ್ಕೆ ಬರಲಾಗಿಲ್ಲ ಎಂದು ಅಭಿಮಾನಿಗಳು ಸಮಜಾಯಿಷಿ ನೀಡಿದ್ದಾರೆ.

ashwini abt darshan | ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ಕಾರಣ ಬಿಚ್ಚಿಟ್ಟ ಅಪ್ಪು ಪತ್ನಿ ಅಶ್ವಿನಿ ಮೇಡಂ ! ಎಲ್ಲರೂ ಶಾಕ್. ಅಸಲಿ ಕಾರಣ ಏನಂತೆ ಗೊತ್ತೆ??
ಪುನೀತ ಪರ್ವ ಕಾರ್ಯಕ್ರಮಕ್ಕೆ ದರ್ಶನ್ ಬರದಿರಲು ಕಾರಣ ಬಿಚ್ಚಿಟ್ಟ ಅಪ್ಪು ಪತ್ನಿ ಅಶ್ವಿನಿ ಮೇಡಂ ! ಎಲ್ಲರೂ ಶಾಕ್. ಅಸಲಿ ಕಾರಣ ಏನಂತೆ ಗೊತ್ತೆ?? 2

ಇದೀಗ ದರ್ಶನ್ ಅವರು ಕಾರ್ಯಕ್ರಮಕ್ಕೆ ಯಾಕೆ ಬಂದಿರಲಿಲ್ಲ ಎನ್ನುವುದರ ಕುರಿತು ಅಶ್ವಿನಿ ಪುನೀತ್ ರಾಜಕುಮಾರ್ ತಿಳಿಸಿದ್ದಾರೆ. ಪುನೀತ್ ಪರ್ವ ಕಾರ್ಯಕ್ರಮಕ್ಕೆ ಎಲ್ಲಾ ಅತಿಥಿಗಳನ್ನು ಸ್ವತಃ ಅಶ್ವಿನಿ ಅವರೇ ಖುದ್ದು ಕರೆ ಮಾಡಿ ಆಹ್ವಾನಿಸಿದರು. ಅಲ್ಲದೆ ಮನೆಯವರಿಂದಲೇ ದರ್ಶನ್ ಮನೆಗೆ ಆಹ್ವಾನ ಪತ್ರಿಕೆ ಕಳುಹಿಸಿಕೊಡಲಾಗಿತ್ತು. ಹೀಗಿದ್ದರೂ ದರ್ಶನ್ ಕಾರ್ಯಕ್ರಮಕ್ಕೆ ಬಂದಿರಲಿಲ್ಲ. ಇದರ ಬಗ್ಗೆ ಮಾತನಾಡಿರುವ ಅಶ್ವಿನಿ ತಾವು ಪುನೀತ ಪರ್ವ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ದರ್ಶನ್ ಅವರು ಕಾರ್ಯಕ್ರಮಕ್ಕೆ ಮೊದಲೇ ಕರೆ ಮಾಡಿ ತಿಳಿಸಿದ್ದರು. ಮೊದಲೇ ಶೂಟಿಂಗ್ ಡೇಟ್ ಫಿಕ್ಸ್ ಆಗಿದ್ದರಿಂದ ಶೂಟಿಂಗ್ ಕ್ಯಾನ್ಸಲ್ ಮಾಡಲಾಗಲಿಲ್ಲ, ತಮ್ಮನ್ನೇ ನಂಬಿಕೊಂಡು ನಿರ್ಮಾಪಕರು ಬಂಡವಾಳ ಹಾಕಿರುತ್ತಾರೆ ಎಂದು ದರ್ಶನ್ ಹೇಳಿದ್ದಾರೆ. ಹೀಗಾಗಿ ದರ್ಶನ್ ಪುನೀತ ಪರ್ವಕ್ಕೆ ಬರಲಾಗಿಲ್ಲ ತಿಳಿದುಬಂದಿದೆ.

Comments are closed.