ಕೊನೆಯ ಒಂದು ನಿಮಿಷದಲ್ಲಿ ಸೂಪರ್ ರೈಡ್ ಮಾಡಿ, 4 ಜನರನ್ನು ಔಟ್ ಮಾಡಿದ ಭರತ್, ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೆ??

ಪ್ರೊ ಕಬಡ್ಡಿ ಸೀಸನ್ ಒಂಬತ್ತರ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಡೆಲ್ಲಿ ದಬಾಂಗ್ ವಿರುದ್ಧ ಭರ್ಜರಿ ಜಯಗಳಿಸಿದೆ. ಶನಿವಾರ ನಡೆದ ಭರ್ಜರಿ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ರೋಚಕ ಜಯಗಳಿಸಿತು. ಪಾಯಿಂಟ್ ಟೇಬಲ್ ನಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ತಂಡದ ವಿರುದ್ಧದ ಈ ಪಂದ್ಯ ರೋಚಕವಾಗಿತ್ತು. ಆರಂಭದಿಂದ ಕೊನೆಯವರೆಗೂ ಆಟ ಅದ್ಭುತ ಹಣಾಹಣಿಯಿಂದ ಕೂಡಿತ್ತು. ಕೊನೆಯಲ್ಲಿ ರೈಡರ್ ಭರತ್ ಅವರ ಆಕ್ರಮಣಕಾರಿ ಪ್ರದರ್ಶನದಿಂದ ಬೆಂಗಳೂರು ಬುಲ್ಸ್ ತಂಡವು 47 – 43 ಅಂಕಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿತು. ಭರತ್ ಮತ್ತು ವಿಕಾಸ್ ಅದ್ಭುತ ಪ್ರದರ್ಶನ ತೋರಿದರು. ಬರೋಬ್ಬರಿ 20 ರೈಡ್ ಗಳನ್ನು ಗಳಿಸಲು ಯಶಸ್ವಿಯಾದರು. ಪಂದ್ಯದ ಗೆಲುವಿನ ನಂತರ ಭರತ್ ಮಾತನಾಡಿದ್ದಾರೆ.

8 ನೇ ನಿಮಿಷದಲ್ಲಿ ಡೆಲ್ಲಿ ತಂಡವನ್ನು ಕೇವಲ ಒಬ್ಬ ಆಟಗಾರನಿಗೆ ಇಳಿಸಿದರು. ಶೀಘ್ರದಲ್ಲೇ ಡೆಲ್ಲಿ ತಂಡವನ್ನು ಮಣಿಸುವ ಮೂಲಕ ಭಾರತ ತಂಡ 12-10 ಅಂಕಗಳ ಮುನ್ನಡೆ ಸಾಧಿಸಿತು. ಶೀಘ್ರದಲ್ಲೇ ಡೆಲ್ಲಿ ತಂಡವನ್ನು ಆಲೌಟ್ ಮಾಡುವ ಮೂಲಕ ಬೆಂಗಳೂರು ಬುಲ್ಸ್ 12-10 ಅಂಕಗಳ ಮುನ್ನಡೆ ಸಾಧಿಸಿತು. ಡಿಫೆಂಡರ್ ಮಯೂರ್ ಕದಂ ಉತ್ತಮ ಆಟ ಪ್ರದರ್ಶಿಸುವುದರ ಜೊತೆಗೆ ತಮ್ಮ ತಂಡದ ಬಲವನ್ನು ಹೆಚ್ಚಿಸಿದರು. ಭರತ್ 12ನೇ ನಿಮಿಷದಲ್ಲಿ ಸೂಪರ್ ರೈಡ್ ಮಾಡುವ ಮೂಲಕ ಅದ್ಭುತವಾಗಿ ತಂಡವು 19-11ರ ಭರ್ಜರಿ ಅಂತರದ ಮುನ್ನಡೆ ಸಾಧಿಸಲು ಸಹಕಾರಿಯದರು. ಬುಲ್ಸ್ ತಂಡವು ಮತ್ತೊಮ್ಮೆ ಡೆಲ್ಲಿ ತಂಡವನ್ನು 24-14 ಅಂಕಗಳ ಅಂತರದಲ್ಲಿ ಮುನ್ನಡೆದ ಗಳಿಸಿದ್ದು ಮೊದಲಾರ್ಧದ ಅಂತ್ಯಕ್ಕೆ ಬುಲ್ಸ್ ತಂಡ 27 – 18 ಅಂಕಗಳ ಮುನ್ನಡೆ ಸಾಧಿಸಿತು.

bharat bengaluru bulls | ಕೊನೆಯ ಒಂದು ನಿಮಿಷದಲ್ಲಿ ಸೂಪರ್ ರೈಡ್ ಮಾಡಿ, 4 ಜನರನ್ನು ಔಟ್ ಮಾಡಿದ ಭರತ್, ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೆ??
ಕೊನೆಯ ಒಂದು ನಿಮಿಷದಲ್ಲಿ ಸೂಪರ್ ರೈಡ್ ಮಾಡಿ, 4 ಜನರನ್ನು ಔಟ್ ಮಾಡಿದ ಭರತ್, ಪಂದ್ಯ ಮುಗಿದ ಬಳಿಕ ಹೇಳಿದ್ದೇನು ಗೊತ್ತೆ?? 2

ಭರತ್ ಪಂದ್ಯದ ಕೊನೆಯ ನಿಮಿಷದಲ್ಲಿ ದಾಳಿ ಮಾಡಿದರು ಮತ್ತು ರೋಮಾಂಚಕ ಜಯ ಸಾಧಿಸಲು ಡೆಲ್ಲಿಯನ್ನು ಆಲ್ ಔಟ್ ಮಾಡಲು ಸಹಾಯ ಮಾಡಿದರು. ಭರ್ಜರಿ ಗೆಲುವು ದಾಖಲಿಸಿದ ನಂತರ ಭರತ್ ಅವರು ಮಾತನಾಡಿದ್ದಾರೆ. “ಈ ಪಂದ್ಯವನ್ನು ನಾವು ಗೆದ್ದಿದ್ದೇವೆ, ಇದು ನಮಗೆ ಗೆಲುವಿನ ಅದ್ಬುತ ಕ್ಷಣ. ಡೆಲ್ಲಿ ತಂಡದ ನಾಯಕ ನವೀನ್ ಅವರನ್ನು ಟ್ಯಾಕಲ್ ಮಾಡುವ ಮೂಲಕ ನಾವು ಗೆಲುವಿಗೆ ಇನ್ನಷ್ಟು ಹತ್ತಿರವಾದವು. ಅವರನ್ನು ಟ್ಯಾಕಲ್ ಮಾಡುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಕೋಚ್ ಸಾಕಷ್ಟು ತಂತ್ರಗಳನ್ನು ಹೇಳಿಕೊಟ್ಟಿದ್ದರು. ಅವರ ಮಾರ್ಗದರ್ಶನದ ಮೇಲೆ ನಾವು ಈ ಪಂದ್ಯವನ್ನು ಗೆದ್ದಿದ್ದೇವೆ. ನವೀನ್ ಅವರು ಅದ್ಭುತ ಆಟಗಾರ ಮತ್ತು ರೈಡರ್ ಆಗಿದ್ದಾರೆ. ನಾವು ಇನ್ನು ಮುಂದೆಯೂ ಹೀಗೆಯೇ ಆಡಲಿದ್ದೇವೆ” ಎಂದು ಭರತ್ ಹೇಳಿದ್ದಾರೆ.

Comments are closed.