ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಕರಿನೆರಳು, ಕೋರ್ಟ್ ಮೆಟ್ಟಿಲೇರುವ ಸಮಯ ಬಂದಿತೇ??

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಟಾಪ್ ಸ್ಥಾನದಲ್ಲಿ ನಿಲ್ಲುವ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಪ್ರೇಕ್ಷರಿಗೆ ಮನರಂಜನೆ ನೀಡುವ ಕೆಲಸವನ್ನು ನಿಲ್ಲಿಸುತ್ತಿದೆ ಎಂದು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ. ಇದು ನಿಜಕ್ಕೂ ಎಲ್ಲರಿಗೂ ಹೆಚ್ಚಿನ ಬೇಸರ ತರಿಸಿದೆ. ಮನೆಯಲ್ಲಿ ಇರುವ ಮನರಂಜನೆ ಬಹಳ ಮುಖ್ಯವಾದ ಕಾರಣ ಹೇಗಾದರೂ ಬಿಗ್ಗ್ ಬಾಸ್ ಮುಂದುವರೆಸಬೇಕು ಎಂಬುದು ಪ್ರೇಕ್ಷಕರ ವಾದ.

ಆದರೆ ಅದು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೀಗ ಕರ್ನಾಟಕದಲ್ಲಿ ನಿರ್ಮಾಣವಾಗಿ ಬಿಟ್ಟಿದೆ. ಇಂತಹ ಸಮಯದಲ್ಲಿ ಕೆಲವರು ಬಿಗ್ ಬಾಸ್ ಕಾರ್ಯಕ್ರಮವನ್ನು ಟ್ರಾಲ್ ಮಾಡುತ್ತಿದ್ದಾರೆ, ಒಳ್ಳೆಯದಾಯಿತು ಎನ್ನುತ್ತಿದ್ದಾರೆ, ಇನ್ನು ಕೆಲವು ಸ್ಪರ್ದಿಗಳ ಅಭಿಮಾನಿಗಳು ಯಾವುದೇ ಕಾರಣಕ್ಕೂ ಬಿಗ್ ಬಾಸ್ ನಿಲ್ಲಿಸಬಾರದು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಇದೇ ಸಮಯದಲ್ಲಿ ಪ್ರಶಾಂತ್ ಸಂಭರ್ಗಿ ರವರು ಗೆಲ್ಲಬಹುದಾದ ಎಲ್ಲ ಸಾಧ್ಯತೆಗಳು ಇರುವುದರಿಂದ ಕನಿಷ್ಠ ಫೈನಲ್ ವರೆಗೂ ಆದರೂ ತಲುಪ ಬಹುದಾದ ಕಾರಣದಿಂದ ಪ್ರಶಾತ್ ರವರ ಅಭಿಮಾನಿಗಳು ಹೊಸದೊಂದು ಬೇಡಿಕೆ ಇಟ್ಟಿದ್ದಾರೆ, ಹೌದು ಸ್ನೇಹಿತರೇ, ಇದೀಗ ಪ್ರಶಾಂತ್ ಸಂಭರ್ಗಿ ರವರ ಅಭಿಮಾನಿಗಳು ನೀವು ಹೊರ ಬಂದ ಮೇಲೆ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಒಂದು ಕೇಸ್ ಅನ್ನು ಹಾಕಿ ಬುದ್ದಿ ಕಳಿಸಿ ಎಂದಿದ್ದಾರೆ. ಹಾಗೂ ಇದೇ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಇಷ್ಟ ಪಡದ ಕೆಲವರು ಶಾಶ್ವತವಾಗಿ ನಿಲ್ಲಿಸಿ ಎಂದು ಟ್ರಾಲ್ ಮಾಡುತ್ತಿದ್ದಾರೆ. ಆದರೆ ಇದು ನಡೆದುವುದು ಬಹುತೇಕ ಅಸಾಧ್ಯದ ಮಾತಾಗಿದೆ.

Comments are closed.