ದುನಿಯಾ ವಿಜಿ ಪತ್ನಿ ಕೀರ್ತಿ ರವರ ಅರಮನೆ ಹೇಗಿದೆ ಗೊತ್ತಾ?? ಐಷಾರಾಮಿ ಮನೆ ಫೋಟೋಗಳ ಸಮೇತ

ನಮಸ್ಕಾರ ಸ್ನೇಹಿತರೇ ಈ ಚಿತ್ರರಂಗವೇ ಹಾಗೆ ಯಾರ ಶಿಫಾರಸ್ಸು ಇಲ್ಲದೆ ಈ ಚಿತ್ರರಂಗದಲ್ಲಿ ಕಾಲಿಟ್ಟು ಮೇಲೆದ್ದು ಬರುವುದು ತುಂಬಾನೇ ಕಷ್ಟ. ಸ್ವಂತ ಪರಿಶ್ರಮದಿಂದ ಪ್ರತಿಭೆಯ ಮೂಲಕ ಚಿತ್ರರಂಗದಲ್ಲಿ ಗೆದ್ದು ಸೂಪರ್ಸ್ಟಾರ್ ಆದವರು ಈಗಿನ ಯುವ ನಟರಿಗೆ ಸ್ಪೂರ್ತಿಯಾಗಿದ್ದಾರೆ ಆದರೆ ಅವರ ಹಾದಿ ಕೂಡ ಸುಲಭದ್ದಾಗಿರಲಿಲ್ಲ ತುಂಬಾ ಕಠಿಣವಾಗಿತ್ತು. ಇಂದಿನ ವಿಷಯದಲ್ಲಿ ನಾವು ಇದೆ ವಿಭಾಗದಲ್ಲಿ ಬರುವ ಒಬ್ಬ ನಟರ ಬಗ್ಗೆ ಹೇಳಲು ಹೊರಟಿದ್ದೇವೆ.

ಹೌದು ಇವರು ಚಿತ್ರರಂಗಕ್ಕೆ ಕಲರ್ ಹಾಗೂ ಚಾರ್ಮ್ ಮುಖ್ಯವಲ್ಲ ಕೇವಲ ಮುಖ್ಯವೆಂದರೆ ನಟನೆ ಹಾಗೂ ಪ್ರತಿಭೆಯನ್ನು ತೋರಿಸಿಕೊಟ್ಟವರು. ಹೌದು ನಾವು ಮಾತನಾಡುತ್ತಿರುವುದು ಬ್ಲಾಕ್ ಕೋಬ್ರಾ ಎಂದು ಹೇಳುತ್ತಿರುವ ದುನಿಯಾ ವಿಜಯ್ ಅವರ ಬಗ್ಗೆ‌. ದುನಿಯಾ ವಿಜಯ್ ಮೊದಲು ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದು ಸೈಡ್ ಆಕ್ಟರ್ ಆಗಿ. ಸಹ ನಟರಾಗಿ ಹಲವಾರು ಚಿತ್ರಗಳಲ್ಲಿ ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದಾರೆ ದುನಿಯಾ ವಿಜಯ್.

ಅದರಲ್ಲಿ ಖ್ಯಾತ ಸಿನಿಮಾಗಳೆಂದರೆ ಕಿಚ್ಚ ಸುದೀಪ್ ನಟನೆಯ ರಂಗ ಎಸೆಸೆಲ್ಸಿ, ಡೆ’ಡ್ಲಿ ಸೋಮ ಚಿತ್ರ. ನಂತರ ಸುಕ್ಕ ಸುರಿ ನಿರ್ದೇಶನದ ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೀರೋ ಆಗಿ ಪಾದಾರ್ಪಣೆ ಮಾಡುತ್ತಾರೆ. ಪಾದರ್ಪಣೆ ಮಾಡಿದ ಮೊದಲ ಚಿತ್ರದಲ್ಲೇ ಸಕ್ಕತ್ ಯಶಸ್ಸನ್ನು ಪಡೆದ ಮಿಂಚುತ್ತಾರೆ. ಇಂದಿಗೂ ದುನಿಯಾ ವಿಜಯ ರವರ ಚಿತ್ರರಂಗದಲ್ಲಿ ಹೇಳಿಕೊಳ್ಳಲು ಇರುವ ಮಹತ್ತರ ಸಾಧನೆ ಎಂದರೆ ದುನಿಯಾ ಚಿತ್ರದ ಅಭೂತಪೂರ್ವ ಯಶಸ್ಸು. ಯಾಕೆಂದರೆ ಏನು ಕಲರ್ ಇಲ್ಲದೆ ಹಾಗೂ ಯಾರ ಶಿಫಾರಸು ಇಲ್ಲದೆ ಚಿತ್ರಕ್ಕೆ ಬಂದವನು ಮೊದಲ ಚಿತ್ರದಲ್ಲಿ ನಾಯಕನಾಗಿ ನಟಿಸಿದ ಮೇಲೆ ಹೀಗೆ ಯಶಸ್ಸು ಪಡೆದಿರುವುದು ಆಶ್ಚರ್ಯವೇ.

ನಂತರದ ದಿನಗಳಲ್ಲಿ ದುನಿಯವಿಜಯ ರವರು ಕನ್ನಡದಲ್ಲಿ ಒಂದರಮೇಲೊಂದರಂತೆ ಚಿತ್ರದಲ್ಲಿ ನಟಿಸುತ್ತಾ ಕನ್ನಡ ಪ್ರೇಕ್ಷಕರ ಮನಕ್ಕೆ ಹತ್ತಿರವಾದರೂ ಈಗ ಕನ್ನಡ ಪ್ರೇಕ್ಷಕರ ಹೃದಯದಲ್ಲಿ ಅವರಿಗೊಂದು ಮಹತ್ತರವಾದ ಸ್ಥಾನವಿದೆ. ಇತ್ತೀಚಿಗಷ್ಟೇ ಕೆಲ ವಿವಾದಗಳಲ್ಲಿ ದುನಿಯಾ ವಿಜಯ್ ರವರು ಸಾಲುಸಾಲಾಗಿ ಸಿಕ್ಕಿಹಾಕಿಕೊಂಡರು. ಅದರಲ್ಲಿ ಪ್ರಮುಖವಾದದ್ದು ಅವರ ಪತ್ನಿ ನಾಗರತ್ನ ರವರ ಕುರಿತಂತೆ. ಹೌದು ಅವರು ವಿಚ್ಛೇದನ ಕೊಡದಿದ್ದರೂ ದುನಿಯಾ ವಿಜಯ್ ದವರು ಕೀರ್ತಿ ಪಟದಿ ಎಂಬ ನಟಿಯನ್ನು ಎರಡನೇ ವಿವಾಹವಾಗಿರುವುದು.

ಕೀರ್ತಿ ಕೂಡ ಕನ್ನಡ ಚಿತ್ರರಂಗದಿಂದಲೇ ಬಂದವರು ಕಿಚ್ಚ ಸುದೀಪ್ ನಟನೆಯ ಮುಸ್ಸಂಜೆಮಾತು ಚಿತ್ರದಲ್ಲಿ ಸಹ ನಟಿಯಾಗಿ ನಟಿಸಿದ್ದಾರೆ. ನಂತರ ದಿನಗಳಲ್ಲಿ ದುನಿಯಾ ವಿಜಯ್ ಹಾಗೂ ಕೀರ್ತಿ ರವರ ನಡುವೆ ಪ್ರೇಮಾಂಕುರವಾಗಿ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಇದು ದುನಿಯಾ ವಿಜಯ ರವರ ಮೊದಲ ಪತ್ನಿಗೆ ಇಷ್ಟವಿಲ್ಲ ಹಾಗಾಗಿ ಇವರು ವಿವಾಹವನ್ನು ಬಲವಾಗಿ ವಿರೋಧಿಸಿದ್ದಾರೆ. ಈಗ ಪರಿಸ್ಥಿತಿ ಶಾಂತವಾಗಿದ್ದರು ಅಸಮಾಧಾನದ ಹೊಗೆ ಇಂದಿಗೂ ಹೊಗೆಯಾಡುತ್ತಿದೆ.

ಇನ್ನು ದುನಿಯಾ ವಿಜಯ್ ಹಾಗೂ ಕೀರ್ತಿ ರವರು ಇರುವ ಮನೆ ಬಗ್ಗೆ ಹೇಳುತ್ತೇವೆ ಬನ್ನಿ. ಎಪಿ ಅವರು ಸ್ವತಹ ಈ ಮನೆಯನ್ನು ಖುದ್ದಾಗಿ ಇಂಟೀರಿಯರ್ ಡಿಸೈನ್ ಮಾಡಿದ್ದಾರೆ. ಮೂರು ಅಂತಸ್ತಿನಲ್ಲಿರುವ ಈ ಮನೆ ಐಷರಾಮಿ ಯಾಗಿ ಮೂಡಿಬಂದಿದೆ. ಪ್ರತಿಯೊಂದು ಡಿಸೈನ್ ಕೂಡ ಕೀರ್ತಿ ಅವರು ತಮ್ಮ ಮನಸ್ಸಿನ ಇಚ್ಚೆಯಂತೆ ತಕ್ಕಂತೆ ಮಾಡಿದವರು. ಮನೆಗೆ ನಂದುಶ್ರೀ ನಿವಾಸ ಎಂದು ಹೆಸರಿಡಲಾಗಿದೆ.

ಈ ಮನೆಯಲ್ಲಿ ಫರ್ನಿಚರ್ ಸೇರಿದಂತೆ ಎಲ್ಲಾ ವಸ್ತುಗಳು ಆಧುನಿಕ ಶೈಲಿಯಲ್ಲಿ ಮೂಡಿಬಂದಿದೆ ಹಾಗೂ ಬಹು ಸುಂದರವಾಗಿದೆ. ಈ ಮನೆಯಲ್ಲಿ ದುನಿಯಾವಿಜಯ ಸೇರಿದಂತೆ ಕೀರ್ತಿ ಹಾಗೂ ಮಕ್ಕಳು ಕೂಡ ಇರುತ್ತಾರೆ. ದುನಿಯಾ ವಿಜಯ್ ರವರು ಹಾಗೂ ಕೀರ್ತಿ ಅವರ ನಂದುಶ್ರೀ ನಿವಾಸ ಮನೆಯ ಬಗ್ಗೆ ಹಾಗೂ ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವುದರ ಮೂಲಕ ತಿಳಿಸಿ.

Comments are closed.