ತಾಯಿಯನ್ನು ಕಳೆದುಕೊಂಡ ಎರಡೇ ದಿನಕ್ಕೆ ದುನಿಯಾ ವಿಜಯ್ ಮಾಡಿರುವ ಕೆಲಸ ನೋಡಿ, ಅಸಲಿಗೆ ಏನು ಮಾಡಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅದೆಷ್ಟು ನಟರು ಯಾವುದೇ ಶಿಫಾರಸು ಇಲ್ಲದೆ ತಮ್ಮ ಸ್ವಂತ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಪ್ರತಿಭೆಯ ಮೂಲಕ ಪ್ರೇಕ್ಷಕರ ಮನಗೆದ್ದ ಸ್ಟಾರ್ ಪಟ್ಟವನ್ನು ಸಂಪಾದಿಸಿದ್ದಾರೆ. ಅದರಲ್ಲಿ ಅಗ್ರಗಣ್ಯನಾಗಿ ಮೂಡಿಬರುವುದು ದುನಿಯಾ ಖ್ಯಾತಿಯ ವಿಜಯ್.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಅವರು ನಂತರದ ದಿನಗಳಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕಾಣತೊಡಗಿದರು. ನಂತರ ದುನಿಯಾ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ನಾಯಕನಟನಾಗಿ ಕಾಣಿಸಿಕೊಂಡ ಮೊದಲ ಚಿತ್ರದ ಮೂಲಕವೇ ಅದ್ಭುತ ಯಶಸ್ಸು ಪಡೆದ ದುನಿಯಾ ವಿಜಯ್ ಮತ್ತೆ ಹಿಂದಿರುಗಿ ನೋಡಿದ್ದೇ ಇಲ್ಲ.

ಒಂದಾದಮೇಲೊಂದರಂತೆ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನೀಡುತ್ತಾ ಕನ್ನಡದ ಪ್ರೇಕ್ಷಕರ ಮೆಚ್ಚಿನ ಬ್ಲಾಕ್ ಕೋಬ್ರಾ ಆಗಿ ಖ್ಯಾತಿಯನ್ನು ಪಡೆದರು. ಇನ್ನು ಎಲ್ಲರಿಗಿಂತ ಹೆಚ್ಚಾಗಿ ದುನಿಯಾ ವಿಜಯ್ ಅವರು ತಮ್ಮ ತಾಯಿಯನ್ನು ಕುರಿತಂತೆ ಹೆಚ್ಚಾದ ಕಾಳಜಿ ಹೊಂದಿದ್ದರು. ಹರಡುತ್ತಿದ್ದರು ಸಹ ಮಗನ ವಿರುದ್ಧ ಇಲ್ಲಸಲ್ಲದ ಆರೋಪಗಳು ಕೇಳಿ ಬಂದಿದ್ದರೂ ಕೂಡ ತಮ್ಮ ಮಗನನ್ನು ಬಿಟ್ಟುಕೊಟ್ಟಿರಲಿಲ್ಲ ದುನಿಯಾ ವಿಜಯ ರವರ ತಾಯಿ ನಾರಾಯಣಮ್ಮ. ಮಗನಾದ ದುನಿಯಾ ವಿಜಯ್ ಕೂಡ ತಾಯಿಯನ್ನು ಎರಡನೇ ಮದುವೆ ಆದರೂ ಕೂಡ ತಮ್ಮ ಜೊತೆಗೆ ತಂದೆಯೊಂದಿಗೆ ಇಟ್ಟುಕೊಂಡಿದ್ದರು.

ಪ್ರತಿದಿನ ತಂದೆ-ತಾಯಿ ಆರೋಗ್ಯವನ್ನು ಕಾಯ್ದುಕೊಳ್ಳಲು ಅವರನ್ನು ತನ್ನ ಕಣ್ಣಿನ ನೇರಕ್ಕೆ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗಷ್ಟೇ ಈ ಮಹಾಮಾರಿ ಬಂದ ನಂತರ ದುನಿಯಾ ವಿಜಯ್ ಅವರ ತಂದೆ ತಾಯಿಗೆ ಇಬ್ಬರಿಗೂ ಕೂಡ ಪಾಸಿಟಿವ್ ಬಂದಿತ್ತು. ಆಸ್ಪತ್ರೆಯಲ್ಲಿ ಬೆಡ್ ಗಳ ತೊಂದರೆ ಇದ್ದ ಕಾರಣ ಮನೆಯಲ್ಲೇ ಆಸ್ಪತ್ರೆ ಮಾಡಿ ತಂದೆ-ತಾಯಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಿಂದ ಡಾಕ್ಟರು ಮನೆಗೆ ಬರುವಂತೆ ವ್ಯವಸ್ಥೆ ಮಾಡಿದ್ದರು.

ಇವರ ಪ್ರೀತಿ ಕಾಳಜಿಯಿಂದಾಗಿ ಇಬ್ಬರೂ ಕೂಡ ಗುಣಮುಖರಾಗಿದ್ದರು. ಆದರೆ ಇದೇ ಜುಲೈ 8ರಂದು ದುನಿಯಾ ವಿಜಯ ರವರ ತಾಯಿ ನಾರಾಯಣಮ್ಮ ಬ್ರೈನ್ ಸ್ಟ್ರೋಕ್ ಕಾರಣದಿಂದಾಗಿ ಇಹ ಲೋಕವನ್ನು ತ್ಯಜಿಸಿದರು. ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ದುನಿಯಾ ವಿಜಯ್ ರವರು ಶತಾಯಗತಾಯ ಪ್ರಯತ್ನ ಮಾಡಿದರು ಸಹ ವಿಧಿಯ ಕೈವಾಡ ಬೇರೆಯಾಗಿತ್ತು. ಕೊನೆಗೂ ಕೂಡ ದುನಿಯಾ ವಿಜಯ್ ಅವರು ತಮ್ಮ ತಾಯಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಅದಾದನಂತರ ಜುಲೈ 9ರಂದು ದುನಿಯಾ ವಿಜಯ್ ಅವರು ತಮ್ಮ ತಾಯಿಯ ಕೊನೆಯ ವಿಧಿ-ವಿಧಾನಗಳನ್ನು ತಮ್ಮ ಹುಟ್ಟೂರಿನಲ್ಲಿ ಮಾಡಿದ್ದಾರೆ. ಆದರೆ ದುನಿಯಾ ವಿಜಯ್ ಅವರು ತಾಯಿ ಬಿಟ್ಟುಹೋದ ಎರಡು ದಿನಗಳಲ್ಲಿ ಮಾಡಿದ್ದ ಕಾರ್ಯ ಏನು ಗೊತ್ತಾ. ಹೌದು ಸ್ನೇಹಿತರೆ ಈ ಕಥೆ ಕೇಳಿದರೆ ನಿಮಗೆ ದುನಿಯಾ ವಿಜಯ್ ಅವರ ದುನಿಯಾ ಚಿತ್ರದ ಚಿತ್ರಕಥೆ ನೆನಪಿಗೆ ಬರುವುದು ಖಂಡಿತ. ಹೌದು ಸ್ನೇಹಿತರೆ ತಾಯಿ ಬಿಟ್ಟುಹೋದ ಎರಡು ದಿನಕ್ಕೆ ತಾಯಿಯ ಹೆಸರಿನಲ್ಲಿ ಸ್ಮಾರಕವನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ಕಾರ್ಯ ಚಾಲ್ತಿಯಲ್ಲಿದ್ದು ಇನ್ನೇನು ಐದಾರು ದಿನಗಳಲ್ಲಿ ಸ್ಮಾರಕದ ಕಾರ್ಯ ಪೂರ್ಣಗೊಳ್ಳಲಿದೆ. ಈ ವಿಷಯವನ್ನು ಸಾಕು ದುನಿಯಾವಿಜಯ ಅವರಿಗೆ ಮಾತ್ರ ಪ್ರೇಮ ಎಷ್ಟರಮಟ್ಟಿಗೆ ಇತ್ತು ಎಂದು ಹೇಳಲು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.