News from ಕನ್ನಡಿಗರು

ನಿಮ್ಮ ಹಣ ದುಪ್ಪಟ್ಟು ಹಾಗಿ, ಸಂಪತ್ತು ವೃದ್ಧಿ ಆಗಬೇಕು ಎಂದ ಗಜ ಲಕ್ಷ್ಮಿಗೆ ಸಂಬಂದಿಸಿದ ಈ ಕೆಲಸ ಮಾಡಿ ಸಾಕು. ಹಣ ಸಾಕು ಸಾಕು ಎನ್ನುವಷ್ಟು ಬರುತ್ತದೆ.

0 22

ನಮಸ್ಕಾರ ಸ್ನೇಹಿತರೆ ಪುರಾಣ ಶಾಸ್ತ್ರಗಳ ಪ್ರಕಾರ ಲಕ್ಷ್ಮಿಯನ್ನು ಅಷ್ಟಲಕ್ಷ್ಮಿಯರ ರೂಪದಲ್ಲಿ ಪೂಜಿಸಲಾಗುತ್ತದೆ. ಅದರಲ್ಲಿಯೂ ರಾಜಯೋಗವನ್ನು ನೀಡುವ ಗಜಲಕ್ಷ್ಮಿಯನ್ನು ರಾಜಲಕ್ಷ್ಮಿ ಎಂಬುದಾಗಿ ಕೂಡ ಕರೆಯಲಾಗುತ್ತದೆ. ಗಜಲಕ್ಷ್ಮಿಯನ್ನು ಪೂಜಿಸಿದರೆ ಖಂಡಿತವಾಗಿ ಆರ್ಥಿಕ ಸಮಸ್ಯೆ, ಕಿಂಚಿತ್ತು ಕೂಡ ಇರುವುದಿಲ್ಲ ಎಂಬುದಾಗಿ ಪುರಾಣ ಶಾಸ್ತ್ರಗಳು ಹೇಳುತ್ತವೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದ ದಿನದಂದು ಗಜಲಕ್ಷ್ಮಿ ವ್ರತ ಪೂಜೆಯನ್ನು ಲಕ್ಷ್ಮೀದೇವಿಗೆ ಅರ್ಪಿಸಲಾಗುತ್ತದೆ.

ಅದೇ ರಾತ್ರಿ ಚಂದ್ರನಿಗೆ ಆರ್ಗ್ಯವನ್ನು ಕೂಡ ಅರ್ಪಿಸಲಾಗುತ್ತದೆ. ಈ ವ್ರತವನ್ನು ಮಾಡುವವರು ಶುಕ್ರವಾರದ ಬೆಳಗೆದ್ದು ಉಪವಾಸವನ್ನು ಪ್ರಾರಂಭಿಸಬೇಕು. ಈ ದಿನ ನೀರು ತುಂಬಿದ ಬೆಳ್ಳಿಯ ಕಲಶದಲ್ಲಿ ಅರಿಶಿನ ಕುಂಕುಮದ ಜೊತೆಗೆ ಅಕ್ಷತೆಯ ನಾಣ್ಯಗಳನ್ನು ಕೂಡ ಹಾಕಲಾಗುತ್ತದೆ. ವೀಳ್ಯದೆಲೆಯನ್ನು ಕಲಶದಲ್ಲಿಟ್ಟು ತೆಂಗಿನ ಕಾಯಿ ಇಟ್ಟು ಲಕ್ಷ್ಮಿ ದೇವಿಯನ್ನು ಆಹ್ವಾನ ಮಾಡಬೇಕಾಗುತ್ತದೆ. ಈ ಶುಭದಿನದಂದು ಉಪವಾಸವನ್ನು ಇಟ್ಟುಕೊಂಡು ಲಕ್ಷ್ಮಿ ದೇವಿಯನ್ನು ಮನಸಾರೆಯಾಗಿ ಭಕ್ತಿಯಿಂದ ಪೂಜಿಸಿದರೆ ಅವಳ ಅನುಗ್ರಹಕ್ಕೆ ಪಾತ್ರರಾಗಬಹುದಾಗಿದೆ. ಈ ಪವಿತ್ರ ಪೂಜೆಯಿಂದ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಿ ಸಂತೋಷ, ಸಮೃದ್ಧಿ ಹಾಗೂ ಸಂಪತ್ತಿನ ಕೃಪೆಗೆ ಪಾತ್ರರಾಗಲಿದ್ದೀರಿ.

ಇನ್ನು ಪುರಾಣ ಶಾಸ್ತ್ರ ಹಾಗೂ ಗ್ರಂಥಗಳ ಪ್ರಕಾರ ಉಲ್ಲೇಖಿತವಾಗಿರುವ ಇನ್ನೊಂದು ವಿಚಾರ ಏನೆಂದರೆ, ಗಜಲಕ್ಷ್ಮಿ ವ್ರತದ ದಿನದಂದು ನೀವು ಚಿನ್ನವನ್ನು ಖರೀದಿಸಿದರೆ ಅದು 8 ಪಟ್ಟು ಹೆಚ್ಚಾಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಇನ್ನು ಈ ಗಜಲಕ್ಷ್ಮಿ ವ್ರತವನ್ನು 9 ವಾರಗಳ ಕಾಲ ಪ್ರತಿ ಶುಕ್ರವಾರದಂದು ಆಚರಿಸಿದರೆ ನಿಮಗೆ ಪೂರ್ಣ ಸಿದ್ಧಿ ಪ್ರಾಪ್ತವಾಗುತ್ತದೆ. ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಕುಂಕುಮ ಹರಿಶಿನವನ್ನು ಹಂಚಬೇಕು. ಶುಕ್ರವಾರದ ದಿನದಂದು ಗಜಲಕ್ಷ್ಮಿ ವ್ರತದ ಆಚರಣೆ ನಿಮ್ಮ ಜೀವನದಲ್ಲಿರುವ ಎಲ್ಲಾ ನಕಾರಾತ್ಮಕತೆಯನ್ನು ಹೊರಹಾಕಿ ಸಕಾರಾತ್ಮಕತೆಯನ್ನು ತುಂಬುತ್ತದೆ.

Leave A Reply

Your email address will not be published.