Vastu Tips: ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪೆ ಪಡೆಯಬೇಕು ಎಂದರೆ- ಈ ಚಿಕ್ಕ ವಸ್ತುಗಳನ್ನು ಮನೆಗೆ ತನ್ನಿ, ಅವರೇ ಬರುತ್ತಾರೆ

Vastu Tips: ಮನೆಯಲ್ಲಿ ಅಥವಾ ನಮ್ಮ ಜೀವನದಲ್ಲಿ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಇದ್ದರು ಸಹ ಅದಕ್ಕೆ ವಾಸ್ತುಶಾಸ್ತ್ರದಲ್ಲಿ ಪರಿಹಾರ ಇದೆ. ವಾಸ್ತು ಶಾಸ್ತ್ರದಲ್ಲಿ ಹೇಳುವ ಕೆಲವು ನಿಯಮಗಳನ್ನು ಅನುಸರಿಸಿದರೆ, ಜೀವನದಲ್ಲಿ ಎಂದಿಗೂ ಹಣಕಾಸಿನ ಸಮಸ್ಯೆ ಬರುವುದಿಲ್ಲ ಎಂದು ಹೇಳುತ್ತಾರೆ. ಲಕ್ಷ್ಮೀದೇವಿ ಮತ್ತು ಕುಬೇರ ಇವರಿಬ್ಬರು ಸಂಪತ್ರಿನ ದೇವರುಗಳು, ಇವರ ಕೃಪೆ ಇದ್ದರೆ ಹಣಕಾಸಿನ ಯಾವುದೇ ತೊಂದರೆ ಆಗುವುದಿಲ್ಲ. ಇವರಿಬ್ಬರ ಕೃಪೆ ಪಡೆಯುವುದಕ್ಕೆ ನಿಮ್ಮ ಮನೆಗೆ ಈ ಕೆಲವು ವಸ್ತುಗಳನ್ನು ತನ್ನಿ, ಈ ವಸ್ತುಗಳು ಮನೆಯಲ್ಲಿದ್ದರೆ ಲಕ್ಷ್ಮೀದೇವಿ ಮತ್ತು ಕುಬೇರನ ಆಶೀರ್ವಾದ ಯಾವಾಗಲೂ ನಿಮ್ಮ ಮೇಲಿರುತ್ತದೆ..

kubera lakhsmi kannada horoscope | Vastu Tips: ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪೆ ಪಡೆಯಬೇಕು ಎಂದರೆ- ಈ ಚಿಕ್ಕ ವಸ್ತುಗಳನ್ನು ಮನೆಗೆ ತನ್ನಿ, ಅವರೇ ಬರುತ್ತಾರೆ
Vastu Tips: ಲಕ್ಷ್ಮಿ ದೇವಿ ಹಾಗೂ ಕುಬೇರ ದೇವನ ಕೃಪೆ ಪಡೆಯಬೇಕು ಎಂದರೆ- ಈ ಚಿಕ್ಕ ವಸ್ತುಗಳನ್ನು ಮನೆಗೆ ತನ್ನಿ, ಅವರೇ ಬರುತ್ತಾರೆ 2

ಲಕ್ಷ್ಮೀದೇವಿ ಕುಬೇರನ ವಿಗ್ರಹ :- ನಿಮ್ಮ ಮನೆಗೆ ಬರುವ ಹಣ ಹೆಚ್ಚಾಗಬೇಕು ಎಂದರೆ ದೇವರಮನೆಯಲ್ಲಿ ಲಕ್ಷ್ಮೀದೇವಿ, ಕುಬೇರ ಮತ್ತು ಗಣೇಶನ ಮೂರ್ತಿಯನ್ನು ದೇವರ ಮನೆಯಲ್ಲಿ ಇಡಿ.. ದೇವರ ವಿಗ್ರಹಗಳನ್ನು ಶ್ರದ್ಧಾ ಭಕ್ತಿಯಿಂದ ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿ ಪೂಜೆ ಮಾಡಿದರೆ, ನಿಮ್ಮ ಮನೆಯಲ್ಲಿ ಸಂತೋಷ ಸಮೃದ್ಧಿ ಯಾವಾಗಲೂ ಇರುತ್ತದೆ. ಇದನ್ನು ಓದಿ..Astrology: ಬರೋಬ್ಬರಿ 50 ವರ್ಷಗಳ ನಂತರ, ಶುರುವಾಗುತ್ತಿದೆ ನವ ಪಂಚಮ ರಾಜಯೋಗ- ಕಷ್ಟದಲ್ಲಿದ್ದ ಈ ರಾಶಿಗಳಿಗೆ ಕೊನೆಗೂ ಮುಕ್ತಿ.

ಕಲಶ :- ನಿಮ್ಮ ಮನೆಯಲ್ಲಿ ಯಾವಾಗಲೂ ಸಂತೋಷ ಮತ್ತು ಸಮೃದ್ಧಿ ಇರಬೇಕು ಎಂದರೆ ಕಮಲದ ಮಂಗಲ ಕಲಶವನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಡಿ. ಕಲಶಕ್ಕೆ ನೀರು ತುಂಬಿಸಿ, ತಾಮ್ರದ ನಾಣ್ಯ ಹಾಕಿ, ಹಾಗೆಯೇ ತೆಂಗಿನ ಗರಿಗಳನ್ನು ಹಾಕಿ.. ತೆಂಗಿನ ಕಾಯಿಯನ್ನು ಕೂಡ ಇಡಬೇಕು.

ಕವಡೆ :- ನಿಮಗೆ ಲಕ್ಷ್ಮೀದೇವಿಯ ಆಶೀರ್ವಾದ ಬೇಕು ಎಂದರೆ, ಬಿಳಿ ಕವಡೆಗಳನ್ನು ಅರಿಶಿನ ಮತ್ತು ಕುಂಕುಮದ ಜೊತೆಗೆ ನೆನೆಸಿ, ಅವುಗಳನ್ನು ಒಣಗಿಸಿ.. ಕವಡೆಗಳು ಹಳದಿ ಬಣ್ಣಕ್ಕೆ ತಿರುಗಿದಾಗ ಅವುಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯಲ್ಲಿರುವ ಕಮಾನಿನ ಒಳಗೆ ಇಡಿ. ಹಳದಿ ಕವಡೆಯನ್ನು ಲಕ್ಷ್ಮೀದೇವಿಯ ಸಂಕೇತ ಎನ್ನುತ್ತಾರೆ, ಇದನ್ನು ಮನೆಯಲ್ಲಿ ಇಟ್ಟರೆ ಹಣಕಾಸಿನ ಸಮಸ್ಯೆ ಬರುವುದಿಲ್ಲ. ಇದನ್ನು ಓದಿ..Horoscope: ಅನುಮಾನ ಪಡಬೇಡಿ, ಈ ಮೂರು ರಾಶಿಗಳು ಇರುವ ಕೆಲಸಗಳನ್ನು ಆರಂಭಿಸಿ- ಯಶಸ್ಸು ಖಚಿತ, ಹಣದ ಸುರಿಮಳೆಯಾಗಲಿದೆ.

ನಾಣ್ಯಗಳು :- ನಿಮಗೆ ಲಕ್ಷ್ಮೀದೇವಿಯ ಮತ್ತು ಕುಬೇರನ ಆಶೀರ್ವಾದ ಯಾವಾಗಲೂ ಇರಬೇಕು ಎಂದರೆ, ನಿಮ್ಮ ಮನೆಯ ಲಾಕರ್ ಒಳಗೆ ಅಥವಾ ಪರ್ಸ್ ನಲ್ಲಿ 3 ನಾಣ್ಯಗಳನ್ನು ಇಟ್ಟುಕೊಳ್ಳಬೇಕು. ಅಥವಾ ನಾಣ್ಯಗಳನ್ನು ಒಂದು ಕೆಂಪು ಬಟ್ಟೆಯಲ್ಲಿ ಕಟ್ಟಿ ಅವುಗಳನ್ನು ದೇವರ ಮನೆಯಲ್ಲಿ ನೇತು ಹಾಕಿ, ಹೀಗೆ ಮಾಡುವುದರಿಂದ ಅದೃಷ್ಟ ನಿಮ್ಮದಾಗುತ್ತದೆ ಜೊತೆಗೆ ಯಾವುದೇ ಸಮಸ್ಯೆ ಇದ್ದರು ಬಗೆಹರಿಯುತ್ತದೆ.

ಮೀನಿನ ಪ್ರತಿಮೆ :- ಬೆಳ್ಳಿಯ ಮೀನಿನ ಪ್ರತಿಮೆಯನ್ನು ಮನೆಯಲ್ಲಿ ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವಾಗಲೂ ಸಮೃದ್ಧಿ ಇರುತ್ತದೆ, ಜೊತೆಗೆ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ. ಮೀನಿನ ಪ್ರತಿಮೆ ಅಲ್ಲದೆ ಹೋದರೆ, ಮನೆಯ ಗೋಡೆ ಮೇಲೆ ಮೀನಿನ ಚಿತ್ರ ಹಾಕಬಹುದು. ಇದನ್ನು ಓದಿ..Honda Dio 125: ಭರ್ಜರಿ ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿರುವ ಹೋಂಡಾ ಡಿಯೋ 125- ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Comments are closed.