ಅವರು ಬಂದರೆ ದಿನೇಶ್ ಹೊರಗೆ ಹೋಗುವುದು ಖಚಿತ ಎಂದ ಗಂಭೀರ್, ಸುಮ್ಮನೆ ಅವಕಾಶ ಕೊಡಬೇಡಿ ಎಂದದ್ದು ಯಾಕೆ ಗೊತ್ತೇ??

ದಿನೇಶ್ ಕಾರ್ತಿಕ್ ಅವರು ಈ ವರ್ಷ ಆರ್.ಸಿ.ಬಿ ತಂಡದ ಪರಗಾಗಿ ಅದ್ಭುತವಾದ ಪ್ರದರ್ಶನ ನೀಡಿ, ಆರ್.ಸಿ.ಬಿ ತಂಡದ ಆಪತ್ಬಾಂಧವ ಎಂದು ಹೆಸರು ಪಡೆದುಕೊಂಡಿದ್ದರು. ಐಪಿಎಲ್ ಪಂದ್ಯಗಳು ನಡೆಯುವ ಸಮಯದಲ್ಲಿ ದಿನೇಶ್ ಕಾರ್ತಿಕ್ ಅವರು ಆರ್.ಸಿ.ಬಿ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದರು, ಅಲ್ಲದೆ ಐಪಿಎಲ್ ಪಂದ್ಯಗಳು ನಡೆಯುವಾಗ ಟೀಮ್ ಇಂಡಿಯಾಗೆ ಮತ್ತೆ ಬರುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅವಕಾಶ ಸಿಕ್ಕರೆ, ಮತ್ತೆ ಟೀಮ್ ಇಂಡಿಯಾಗೆ ಬರುವ ಆಸೆ ಇದೆ ಎಂದು ಹೇಳಿದ್ದರು.

ದಿನೇಶ್ ಕಾರ್ತಿಕ್ ಅವರಿಗೆ ಇದ್ದ ಇಂಗಿತ ಜೊತೆಗೆ, ಅವರು ಆರ್.ಸಿ.ಬಿ ತಂಡದ ಪರವಾಗಿ ನೀಡಿದ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನದಿಂದ ದಿನೇಶ್ ಕಾರ್ತಿಕ್ ಅವರು ಈಗ ಭಾರತದಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವರ್ಸಸ್ ಭಾರತದ ಸರಣಿ ಪಂದ್ಯಗಳಿಗೆ ಸೆಲೆಕ್ಟ್ ಆಗಿದ್ದು, ಬಹಳ ಸಮಯದ ಬಳಿಕ ಟೀಮ್ ಇಂಡಿಯಾಗೆ ವಾಪಸ್ ಬಂದಿದ್ದಾರೆ. ಇದರಿಂದಾಗಿ ಡಿಕೆ ಅವರಿಗೆ ಬಹಳ ಸಂತೋಷವಾಗಿದೆ. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಆಗಿ ಒಳ್ಳೆಯ ಪ್ರದರ್ಶನ ನೀಡುತ್ತಿದ್ದಾರೆ. ಜೊತೆಗೆ ಸೌತ್ ಆಫ್ರಿಕಾ ವಿರುದ್ಧದ ಎರಡನೇ ಪಂದ್ಯದ ಕೊನೆಯ ಓವರ್ ಗಳಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ ಡಿಕೆ ಅವರು 30 ರನ್ ಗಳನ್ನು ಭಾರಿಸಿ, ಟೀಮ್ ಇಂಡಿಯಾಗೆ ಸಹಾಯಕವಾಗಿತ್ತು.

Cricket | ಅವರು ಬಂದರೆ ದಿನೇಶ್ ಹೊರಗೆ ಹೋಗುವುದು ಖಚಿತ ಎಂದ ಗಂಭೀರ್, ಸುಮ್ಮನೆ ಅವಕಾಶ ಕೊಡಬೇಡಿ ಎಂದದ್ದು ಯಾಕೆ ಗೊತ್ತೇ??
ಅವರು ಬಂದರೆ ದಿನೇಶ್ ಹೊರಗೆ ಹೋಗುವುದು ಖಚಿತ ಎಂದ ಗಂಭೀರ್, ಸುಮ್ಮನೆ ಅವಕಾಶ ಕೊಡಬೇಡಿ ಎಂದದ್ದು ಯಾಕೆ ಗೊತ್ತೇ?? 2

ಹೀಗೆ ದಿನೇಶ್ ಕಾರ್ತಿಕ್ ಅವರು ಭಾರತ ತಂಡದ ಪರವಾಗಿ ಉತ್ತಮವಾದ ಪ್ರದರ್ಶನ ನೀಡಿದ್ದರು ಸಹ, ಇದೀಗ ಗೌತಮ್ ಗಂಭೀರ್ ಅವರು ದಿನೇಶ್ ಕಾರ್ತಿಕ್ ಅವರ ವಿರುದ್ಧವಾಗಿ ಹೇಳಿಕೆಯೊಂದನ್ನು ನೀಡಿದ್ದಾರೆ. ದಿನೇಶ್ ಕಾರ್ತಿಕ್ ಅವರು ಈಗ ತಂಡದ ಪರವಾಗಿ ಉತ್ತಮವಾದ ಪ್ರದರ್ಶನ ನೀಡಿದ್ದಾರೆ, ಆದರೆ ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾರತ ಕ್ರಿಕೆಟ್ ತಂಡಕ್ಕೆ ಟಿ20 ವಿಶ್ವಕಪ್ ಪಂದ್ಯಗಳಿಗೆ ಮರಳಿ ಬಂದರೆ, ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದಿದ್ದಾರೆ. ಈ ನಾಲ್ವರು ಆಟಗಾರರು ಟಿ20 ಪಂದ್ಯಗಳಿಗೆ ಬರುವುದು ಗ್ಯಾರಂಟಿ. ಒಂದು ವೇಳೆ ಇವರೆಲ್ಲ ಬಂದರೆ ದಿನೇಶ್ ಕಾರ್ತಿಕ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗುವುದು ಖಚಿತವಿಲ್ಲ ಎಂದು ಹೇಳಿದ್ದು, ಅವರ ಬದಲಾಗಿ ಯುವ ಆಟಗಾರನನ್ನು ಸೆಲೆಕ್ಟ್ ಮಾಡುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.