ಆ ಒಬ್ಬ ನಟ ಆದ್ರೆ, ನಾನು ಎಂತಹ ಸೀನ್ ಮಾಡಲು ಸಿದ್ದ ಎಂದ ಕೃತಿ ಶೆಟ್ಟಿ, ಈ ಮಾತು ಕೇಳಿ ಬಾಲಯ್ಯ ಫ್ಯಾನ್ಸ್ ಗರಂ ಆಗಿದ್ದು ಯಾಕೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ರಶ್ಮಿಕ ಮಂದಣ್ಣ ರವರ ನಂತರ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಹಾಗೂ ಬೇಡಿಕೆಯನ್ನು ಸೃಷ್ಟಿಸಿಕೊಂಡಿರುವ ಕರ್ನಾಟಕ ಮೂಲದ ನಟಿ ಎಂದರೆ ಅದು ಕೃತಿ ಶೆಟ್ಟಿ ಎಂದರೆ ತಪ್ಪಾಗಲಾರದು. ಅದು ಕೂಡ ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸಾಧನೆಯನ್ನು ಮಾಡುವುದು ಅಷ್ಟೊಂದು ಸುಲಭವಲ್ಲ ಯಾಕೆಂದರೆ ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಸ್ಟಾರ್ ನಟಿಯರ ನಡುವೆ ಕೂಡ ಕೃತಿ ಶೆಟ್ಟಿ ಮಾಡಿರುವ ಸಾಧನೆ ನಿಜಕ್ಕೂ ಕೂಡ ಪ್ರಶಂಸಾರ್ಹ.
ಇನ್ನು ಈಗಾಗಲೇ ಉಪ್ಪೇನ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ಸಿನಿಮಾದಲ್ಲಿ ಜಾಕ್ಪಾಟ್ ಅದೃಷ್ಟವನ್ನು ಸೃಷ್ಟಿಸಿಕೊಂಡಿರುವ ಕೃತಿ ಶೆಟ್ಟಿ ಅವರು ಈಗಾಗಲೇ ನಾನೇ ನಟನೆಯ ಶಾಮ ಸಿಂಗಾರಾಯ ಹಾಗೂ ಬಂಗಾರ್ ರಾಜು ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಈಗಾಗಲೇ ಎಲ್ಲಾ ಸಿನಿಮಾಗಳಿಂದ ತಮ್ಮ ಜನಪ್ರಿಯ ಹಾಗೂ ಚಿತ್ರರಂಗದಲ್ಲಿ ತಮಗಿರುವ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಕೃತಿ ಶೆಟ್ಟಿ ಈ ಹಿಂದೆ ಲೆಜೆಂಡರಿ ನಟನಾಗಿರುವ ಬಾಲಯ್ಯ ಅವರ ಸಿನಿಮಾದಲ್ಲಿ ನಟಿಸುವುದನ್ನು ತಿರಸ್ಕರಿಸಿದ್ದರು ಎಂಬುದಾಗಿ ಕೇಳಿಬಂದಿತ್ತು. ಆದರೆ ನಟಿ ಕೃತಿ ಶೆಟ್ಟಿ ಅವರು ಈಗ ಜೂನಿಯರ್ ಎನ್ಟಿಆರ್ ಅವರ ಜೊತೆಗೆ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು..
ಅವರ ಜೊತೆಗೆ ಯಾವ ದೃಶ್ಯದಲ್ಲಿ ನಟಿಸಲು ಕೂಡ ಸಿದ್ಧ ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇದು ಈಗ ಬಾಲಯ್ಯ ಅವರ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಇದೇ ಹಿನ್ನೆಲೆಯಲ್ಲಿ ಕೃತಿ ಶೆಟ್ಟಿ ರವರ ಕುರಿತಂತೆ ಬಾಲಯ್ಯ ಅವರ ಅಭಿಮಾನಿಗಳು ಕಾಮೆಂಟ್ನಲ್ಲಿ ಅವರ ವಿರುದ್ಧವಾಗಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಕೃತಿ ಶೆಟ್ಟಿ ಅವರ ವಿರುದ್ಧ ಬಾಲಯ್ಯ ಅವರ ಅಭಿಮಾನಿಗಳು ಮಾಡುತ್ತಿರುವ ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಹಂಚಿಕೊಳ್ಳಿ.
Comments are closed.