ಸದ್ದಿಲ್ಲದೆ ಎಂಗೇಜ್ಮೆಂಟ್ ಆದ್ರಾ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್?? ಅಸಲಿಗೆ ಇದರ ಹಿಂದಿರುವ ಅಸಲಿ ಕಹಾನಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈ ಬಾರಿಯ ಬಿಗ್ ಬಾಸ್ ನಡೆದ ಮೇಲಿಂದ ಅಲ್ಲಿನ ಕೆಲ ಜೋಡಿಗಳ ಕುರಿತಂತೆ ಸಾಕಷ್ಟು ಸುದ್ದಿಗಳು ಇಂದಿಗೂ ಕೂಡ ಹರಿದಾಡುತ್ತಿದೆ. ಇಂದಿಗೂ ಕೂಡ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಕುರಿತಂತೆ ಸುದ್ದಿಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ಹಾಗೂ ಪ್ರೇಕ್ಷಕರ ಚರ್ಚೆ ಜಾರಿಯಲ್ಲಿದೆ.

ಇನ್ನು ಬಿಗ್ ಬಾಸ್ ನಲ್ಲಿ ಇದ್ದಾಗಲೂ ಕೂಡ ಮಂಜು ಪಾವಗಡ ರವರು ಹಾಗೂ ದಿವ್ಯ ಸುರೇಶ ರವರು ಅಗತ್ಯಕ್ಕಿಂತ ಹೆಚ್ಚಾಗಿ ಕ್ಲೋಸ್ ಆಗಿದ್ದರು. ಇನ್ನು ಇವರಿಬ್ಬರ ಜೋಡಿಯ ಸ್ನೇಹಕ್ಕು ಮಿಗಿಲಾದ ಸಂಬಂಧವನ್ನು ಕೆಲವರು ಕೇವಲ ಬಿಗ್ಬಾಸ್ ಗಾಗಿ ಮಾತ್ರ ಈ ಸಂಬಂಧವನ್ನು ಮಾಡಿಕೊಂಡಿದ್ದೀರಾ ಎಂಬುದಾಗಿದೆ ಟೀಕೆ ಕೂಡ ಮಾಡಿದ್ದರು. ಆದರೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ಜೋಡಿ ಯಾವ ಮಾತುಗಳಿಗೂ ಕೂಡ ತಲೆಕೆಡಿಸಿಕೊಳ್ಳದೆ ಇಂದಿಗೂ ಕೂಡ ಸ್ನೇಹ ಸಂಬಂಧದಲ್ಲಿ ಇದ್ದಾರೆ.

ಇನ್ನು ಸ್ನೇಹಿತರೆ ಇತ್ತೀಚಿಗಷ್ಟೇ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಸಾಂಸ್ಕೃತಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರೂ ಕೂಡ ಇವರಿಬ್ಬರ ನಡುವೆ ಎಂಗೇಜ್ಮೆಂಟ್ ಮುಗಿದಿದೆ ಎಂಬುದಾಗಿ ಮಾತನಾಡಿಕೊಂಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ವೈರಲ್ ಆಗಿ ಎಲ್ಲರೂ ಕೂಡ ಗುಸುಗುಸು ಮಾತನಾಡಿಕೊಂಡಿದ್ದರು. ನಂತರ ಇದರ ನಿಜವಾದ ವಿಚಾರ ತಿಳಿದು ಬಂದಿದೆ. ಹೌದು ಸ್ನೇಹಿತರೆ ಇದು ಕಲರ್ಸ್ ಕನ್ನಡ ವಾಹಿನಿಯು ಆಯೋಜಿಸಿದ್ದ ಬಿಗ್ ಬಾಸ್ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಭಾಗವಹಿಸಿದ್ದ ಫೋಟೋ ಆಗಿತ್ತು. ಆದರೂ ಕೂಡ ಇವರಿಬ್ಬರ ಜೋಡಿ ಮುಂದಿನ ದಿನಗಳಲ್ಲಿ ಮದುವೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಪ್ರೇಕ್ಷಕರು ಇನ್ನು ಕೂಡ ಇದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.