ಬಿಗ್ ಬಾಸ್ ಮನೆಯಿಂದ ಹೊರಬಂದ ನಾಲ್ಕೇ ದಿನಕ್ಕೆ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಹೋಗಿದ್ದೆಲ್ಲಿಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಿಗ್ ಬಾಸ್ ಅನ್ನು ಗೆದ್ದು ಮಂಜು ಪಾವಗಡ ರವರು ಕೋಟ್ಯಾಂತರ ಮಂದಿ ಕನ್ನಡಿಗರ ಮನಗೆದ್ದಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ಸುದ್ದಿ. ಬಡತನದಿಂದ ಬಂದು ತಮ್ಮ ಪರಿಶ್ರಮದಿಂದ ಹಾಗೂ ಪ್ರತಿಭೆಯಿಂದ ಪ್ರೇಕ್ಷಕರ ಮನ ಗೆದ್ದು ಬಿಗ್ಬಾಸ್ ಗೆ ಸ್ಥಾನ ಗಿಟ್ಟಿಸಿಕೊಂಡು ನಂತರ ಈಗ 45 ಲಕ್ಷ ಮತಗಳಿಂದ ಗೆದ್ದು ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದವರು ಮಂಜು ಪಾವಗಡ ರವರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಎಲ್ಲರ ಮುಖದಲ್ಲಿ ನಗು ಮೂಡುವಂತೆ ಮಾಡಿದಂತಹ ಮಂಜು ಪಾವಗಡ ರವರು ಎಲ್ಲರ ನಿರೀಕ್ಷೆಯಂತೆ ಬಿಗ್ಬಾಸ್ ಗೆದ್ದಿದ್ದಾರೆ.

ಇನ್ನು ಮಂಜು ಪಾವಗಡ ಗೆದ್ದಾಗ ಅವರಿಗಿಂತ ಹೆಚ್ಚಾಗಿ ಅಲ್ಲಿ ಸಂತಸವನ್ನು ಆನಂದಿಸಿದ್ದು ಹಾಗೂ ಕುಣಿದು ಕುಪ್ಪಳಿಸಿದ್ದು ದಿವ್ಯ ಸುರೇಶ ರವರು. ಹೌದು ಸ್ನೇಹಿತರೆ ಈ ಕುರಿತಂತೆ ಕಿಚ್ಚ ಸುದೀಪ್ ರವರು ಕೂಡ ಮಂಜು ಪಾವಗಡರಲ್ಲಿ ಹೇಳಿದಾಗ ಇವರಿಬ್ಬರು ಪರಸ್ಪರ ತಮ್ಮ ಬೆಸ್ಟ್ ಫ್ರೆಂಡ್ ಎಂದು ಹೇಳಿಕೊಂಡಿದ್ದರು. ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಿಂದ ಹೊರಬಂದ ನಾಲ್ಕೇ ದಿನದಲ್ಲಿ ದಿವ್ಯ ಸುರೇಶ್ ಅವರನ್ನು ಕರೆದುಕೊಂಡು ಎಲ್ಲಿಗೆ ಹೋಗಿದ್ದಾರೆ ಗೊತ್ತಾ. ಬನ್ನಿ ಸ್ನೇಹಿತರೆ ಈ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ತಾವು ಹರಕೆ ಕಟ್ಟಿಕೊಂಡಿದ್ದ ದೇವಸ್ಥಾನಗಳಿಗೆ ಮಂಜು ಪಾವಗಡ ರವರು ದಿವ್ಯ ಸುರೇಶ್ ಹಾಗೂ ಇನ್ನಿತರ ಸ್ನೇಹಿತರೊಂದಿಗೆ ಹೋಗಿ ಭೇಟಿಕೊಟ್ಟು ಬರುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿದ್ದರೆ ಇವರಿಬ್ಬರು ಮುಂದಿನ ದಿನಗಳಲ್ಲಿ ಮದುವೆಯಾದರೂ ಸಹ ಆಶ್ಚರ್ಯಪಡಬೇಕಾಗಿಲ್ಲ ಎಂದು ಅನಿಸುವುದು ಸತ್ಯ. ಆದರೆ ಇವರಿಬ್ಬರನ್ನು ಕೇಳಿದಾಗ ಹೇಳುವುದು ನಾವಿಬ್ಬರೂ ಬೆಸ್ಟ್ ಫ್ರೆಂಡ್ ಎಂದು ಮಾತ್ರ. ಮುಂದಿನ ದಿನಗಳಲ್ಲಿ ಈ ಕುರಿತಂತೆ ನಮಗೆ ಸರಿಯಾದ ಮಾಹಿತಿ ಸಿಗುವುದು ಖಂಡಿತ.

Comments are closed.