ಐಪಿಎಲ್ ಸ್ಟಾರ್ ಉಮ್ರಾನ್ ಮಲ್ಲಿಕ್ ಅವರ ಕುರಿತಂತೆ ಎಚ್ಚರಿಕೆಯನ್ನು ನೀಡಿದ ಮಾಜಿ ಕ್ರಿಕೆಟಿಗ ಏನದು ಗೊತ್ತಾ?? ಏನು ಮಾಡಬೇಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪ್ರತಿಬಾರಿ ಐಪಿಎಲ್ ಬಂದಾಗಲೂ ಕೂಡ ಒಂದಲ್ಲ ಒಂದು ಪ್ರತಿಭೆ ಬೆಳಕಿಗೆ ಬಂದೇ ಬರುತ್ತದೆ. ಈ ಬಾರಿ ಕಾಶ್ಮೀರ ಮೂಲದ ಬೌಲರ್ ಆಗಿರುವ ಉಮ್ರನ್ ಮಲ್ಲಿಕ್ ರವರು ಈ ಬಾರಿ ಐಪಿಎಲ್ ನಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಉಮ್ರಾನ್ ಮಲ್ಲಿಕ್ ರವರು ಈಬಾರಿಯ ಸನ್ರೈಸರ್ಸ್ ಹೈದರಾಬಾದ್ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಪರ್ಪಲ್ ಕ್ಯಾಪ್ ರೇಸ್ ನಲ್ಲಿ ಕೂಡ ಉಮ್ರಾನ್ ಮಲ್ಲಿಕ್ ರವರು ಇದ್ದಾರೆ ಎಂದು ಹೇಳಬಹುದಾಗಿದೆ. ಅದರಲ್ಲೂ ಈ ಬಾರಿಯ ಐಪಿಎಲ್ ನಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡುವ ಬೌಲರ್ ಗಳಲ್ಲಿ ಉಮ್ರಾನ್ ಮಲ್ಲಿಕ್ ರವರು ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿಜಕ್ಕೂ ಕೂಡ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಆಗಿ ಕಾಣಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಬಹುದಾಗಿದೆ. ಮಾಜಿ ಕ್ರಿಕೆಟಿಗರು ಕೂಡ ಉಮ್ರಾನ್ ಮಲ್ಲಿಕ್ ರವರು ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಬೌಲರ್ ಆಗಿ ಕಾಣಿಸಿಕೊಂಡರೆ ಉತ್ತಮ ಭವಿಷ್ಯವನ್ನು ಹೊಂದಲಿದ್ದಾರೆ ಎಂಬುದಾಗಿ ಈಗಲೇ ಭವಿಷ್ಯನುಡಿದಿದ್ದಾರೆ. ಇನ್ನು ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರರು ಆಗಿರುವ ಮುನಾಫ್ ಪಟೇಲ್ ಕೂಡ ಈ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಉಮ್ರಾನ್ ಮಲ್ಲಿಕ್ ಅವರ ಕುರಿತಂತೆ ಏನು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ಎಂಬುದನ್ನು ಸವಿವರವಾಗಿ ತಿಳಿಯೋಣ ಬನ್ನಿ. ಉಮ್ರಾನ್ ಮಲ್ಲಿಕ್ ರವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡಲು ಇನ್ನಷ್ಟು ಕಾಯಿಸಬಾರದು. ಆದಷ್ಟು ಬೇಗ ಅವರನ್ನು ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ರೀತಿಯಲ್ಲಿ ಆಡಿಸಬೇಕು. ಅವರ ಪ್ರತಿಭೆಯನ್ನು ವೇಸ್ಟ್ ಮಾಡುವುದು ಒಳ್ಳೆಯದಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಆದರೆ ಉಮ್ರಾನ್ ಮಲ್ಲಿಕ್ ರವರನ್ನು ಎಚ್ಚರಿಕೆಯಿಂದ ಆಡಿಸಬೇಕು ಯಾಕೆಂದರೆ ಅವರೊಬ್ಬ ಅತ್ಯಂತ ವೇಗದ ಬೌಲರ್ ಆಗಿರುವುದರಿಂದಾಗಿ ಅವರನ್ನು ಎಚ್ಚರಿಕೆಯಿಂದ ಆಡಿ ಸದಿದ್ದರೆ ಖಂಡಿತವಾಗಿ ಅವರು ಅತ್ಯಂತ ಬೇಗ ಇಂ’ಜುರಿ ಗೆ ಒಳಗಾಗುತ್ತಾರೆ ಎಂಬುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ. ಮುನಾಫ್ ಪಟೇಲ್ ರವರ ಹೇಳಿಕೆ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.