Ramachari: ಪ್ರಾಜೆಕ್ಟ್ ಕದ್ದು ಅತ್ತಿಗೆ ಪ್ರಾಣ ಕಸಿದುಕೊಂಡ ಚಾರು ಅನ್ನು ಮದುವೆಯಾಗುತ್ತಾನೆ ರಾಮಾಚಾರಿ, ರಾಮಾಚಾರಿ ಮುಂದಿನ ಪ್ಲಾನ್ ಏನು ಗೊತ್ತೇ??

Ramachari: ರಾತ್ರಿ 9:00 ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ರಾಮ್ ಜಿ ನಿರ್ದೇಶನದ ರಾಮಾಚಾರಿ ಧಾರಾವಾಹಿ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಸುಸಂಸ್ಕೃತ ಮನೆತನದಿಂದ ಬಂದ, ಅದ್ಭುತವಾಗಿ ನಟಿಸುವ ರಾಮಾಚಾರಿ ಮತ್ತು ಸದಾ ಅಹಂಕಾರವನ್ನೇ ತುಂಬಿಕೊಂಡಿರುವ ಚಾರು ಇಬ್ಬರ ನಡುವಿನ ಕಥೆಯೇ ರಾಮಚಾರಿ. ಇದೀಗ ಈ ಧಾರಾವಾಹಿ ಒಂದು ಪ್ರಮುಖ ಹಂತಕ್ಕೆ ಬಂದು ನಿಂತಿದೆ. ರಾಮಾಚಾರಿಯ ಅತ್ತಿಗೆ ಅಪರ್ಣ ಕ್ಯಾನ್ಸರ್ ಇಂದ ಸಾವನಪ್ಪಿದ್ದಾರೆ. ಇದಕ್ಕೆ ಚಾರುನೆ ಕಾರಣ ಎನ್ನುವುದು ರಾಮಾಚಾರಿಗೆ ಗೊತ್ತಾಗಿದೆ. ಚಾರು ಮೇಲೆ ಕೆಂಡಮಂಡಲನಾಗಿದ್ದು ರಾಕ್ಷಸ ಅವತಾರವನ್ನು ತೋರಿದ್ದಾನೆ. ಇದೀಗ ಚಾರು ಮೇಲೆ ಪ್ರತಿಕಾರ ತೀರಿಸಿಕೊಳ್ಳುವ ಉದ್ದೇಶ ಹೊಂದಿರುವ ರಾಮಾಚಾರಿ ಧಾರವಾಹಿಯ ಮುಂದಿನ ಕಥೆ ಏನು ಎನ್ನುವುದು ಕುತೂಹಲ ಮೂಡಿಸಿದೆ.

ಕ್ಯಾನ್ಸರ್ ಇಂದ ಬಳಲುತ್ತಿದ್ದ ತನ್ನ ಅತ್ತಿಗೆ ಅಪರ್ಣಳನ್ನು ಉಳಿಸಿಕೊಳ್ಳಲು ರಾಮಾಚಾರಿ ಪಡಬಾರದ ಪಾಡು ಪಡುತ್ತಾನೆ. ತನ್ನ ಒಂದು ಕಿಡ್ನಿಯನ್ನೇ ಮಾರಿ ಅತ್ತಿಗೆಯ ಪ್ರಾಣ ಉಳಿಸಲು ಪ್ರಯತ್ನ ಪಡುವ ಅವನು ಸಾಕಷ್ಟು ಪರೀಕ್ಷೆಗಳಿಗೆ ಒಳಗಾಗುತ್ತಾನೆ. ಆದರೆ ಎಲ್ಲ ಪರೀಕ್ಷೆ ಮುಗಿದು ಹಣ ಬರುವ ಹೊತ್ತಿಗೆ ತಡವಾಗಿರುತ್ತದೆ. ಇದರ ಬೆನ್ನಲ್ಲೇ ತಾನು ಕೆಲಸ ಮಾಡುವ ಕಂಪನಿಯಲ್ಲಿ ಒಂದು ದೊಡ್ಡ ಪ್ರಾಜೆಕ್ಟ್ ಗೆ ಕೆಲಸ ಮಾಡುತ್ತಾನೆ. ಆ ಪ್ರಾಜೆಕ್ಟ್ ಯಶಸ್ವಿ ಆದರೆ ಅವನಿಗೆ ಚಿಕಿತ್ಸೆಗೆ ಬೇಕಾದ ಹಣ ಸಿಗುತ್ತಿತ್ತು. ಆದರೆ ಆದರೆ ರಾಮಾಚಾರಿ ತಯಾರಿಸಿದ್ದ ಪ್ರಾಜೆಕ್ಟ್ ಅನ್ನು ಚಾರು ಕದ್ದು, ಅಳಿಸಿಹಾಕಿ ಅದು ತನ್ನದೇ ಎಂದು ಎಲ್ಲರ ಮುಂದೆ ಹೇಳಿ ತಾನು ಹಣ ಗಿಟ್ಟಿಸಿ ಕೊಳ್ಳುತ್ತಾಳೆ. ಆಗ ರಾಮಾಚಾರಿಯ ಕನಸು ನುಚ್ಚು ನೂರಾಗುತ್ತದೆ. ಇತ್ತ ಚಿಕಿತ್ಸೆಗೆ ದುಡ್ಡು ಹೊಂದಿಸಲಾಗದೆ ರಾಮಾಚಾರಿ ಅತ್ತಿಗೆ ಸಾವನ್ನಪ್ಪಿದ್ದಾಳೆ. ತನ್ನ ಪ್ರಾಜೆಕ್ಟ್ ಅನ್ನು ಕದ್ದಿದ್ದು ಚಾರು ಎನ್ನುವ ಸತ್ಯ ಆತನಿಗೆ ತಡವಾಗಿ ತಿಳಿಯುತ್ತದೆ. ಇತ್ತ ರಾಮಾಚಾರಿಗೆ ಪ್ರಪೋಸ್ ಮಾಡಿ ತನ್ನ ಪ್ರೇಮವನ್ನು ಹೇಳಬೇಕೆಂದು ದೊಡ್ಡ ತಯಾರಿ ನಡೆಸಿಕೊಂಡಿದ್ದ ಚಾರುಗೆ ಆಘಾತವಾಗಿದೆ. ಇದನ್ನು ಓದಿ..Kannada Astrology: ವೃಷಭ ರಾಶಿ ಪ್ರವೇಶ ಮಾಡಿ ದೂಳೆಬ್ಬಿಸಿದ ಮಂಗಳ ದೇವ: ಇದರಿಂದ ಯಾವ ರಾಶಿಗಳಿಗೆ ಶುಭ ಗೊತ್ತೇ? ಈ ರಾಶಿಗಳ ಕಷ್ಟವೆಲ್ಲ ಮುಗಿಯಿತು.

ramachari serial | Ramachari: ಪ್ರಾಜೆಕ್ಟ್ ಕದ್ದು ಅತ್ತಿಗೆ ಪ್ರಾಣ ಕಸಿದುಕೊಂಡ ಚಾರು ಅನ್ನು ಮದುವೆಯಾಗುತ್ತಾನೆ ರಾಮಾಚಾರಿ, ರಾಮಾಚಾರಿ ಮುಂದಿನ ಪ್ಲಾನ್ ಏನು ಗೊತ್ತೇ??
Ramachari: ಪ್ರಾಜೆಕ್ಟ್ ಕದ್ದು ಅತ್ತಿಗೆ ಪ್ರಾಣ ಕಸಿದುಕೊಂಡ ಚಾರು ಅನ್ನು ಮದುವೆಯಾಗುತ್ತಾನೆ ರಾಮಾಚಾರಿ, ರಾಮಾಚಾರಿ ಮುಂದಿನ ಪ್ಲಾನ್ ಏನು ಗೊತ್ತೇ?? 2

ತನ್ನ ಅತ್ತಿಗೆ ಸಾಯಲು ಚಾರು ಕಾರಣ ಎನ್ನುವ ಕಾರಣಕ್ಕೆ ಮೊದಲ ಬಾರಿ ರಾಮಾಚಾರಿ ರಾಕ್ಷಸನ ರೂಪ ಪಡೆದುಕೊಳ್ಳುತ್ತಾನೆ. ರಾಮಾಚಾರಿ ಚಾರು ಕಪಾಳಕ್ಕೆ ಥಳಿಸಿದ್ದಾನೆ. ಅವಳು ಮಾಡಿದ್ದ ಡೆಕೋರೇಷನ್ ಎಲ್ಲವನ್ನು ಹಾಳು ಮಾಡಿ ಚೆನ್ನಾಗಿ ಕೂಗಾಡಿತ್ತಾನೆ. ತನ್ನ ಅತ್ತಿಗೆಯ ಸಾವಿಗೆ ನೀನು ಕಾರಣಳಾಗಿ ಈಗ ಅದರಿಂದ ಬಂದ ದುಡ್ಡೆಲ್ಲವನ್ನು ಇಲ್ಲಿ ಶೋಕಿ ಮಾಡುತ್ತಿದ್ದೀಯಾ ಎಂದು ಕೂಗಾಡಿತ್ತಾನೆ. ತನ್ನ ಅತ್ತಿಗೆಯ ಸಾವಿಗೆ ಕಾರಣರಾದ ಅವಳ ಮೇಲೆ ದ್ವೇಷ ತೀರಿಸಿಕೊಳ್ಳುವ ಉದ್ದೇಶ ರಾಮಾಚಾರಿ ಹೊಂದಿದ್ದಾನೆ. ಇನ್ನು ಮುಂದಿನ ಕಥೆಯಲ್ಲಿ ರಾಮಾಚಾರಿ ಚಾರು ಅನ್ನು ಮದುವೆಯಾಗಿ ಅವಳ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾನೆ. ಸಾಕಷ್ಟು ಕಷ್ಟ ಕೊಡುತ್ತಾನೆ. ಅಪ್ಪ, ಮನೆಯವರು ಹೇಳಿದರು ಕೇಳುವುದಿಲ್ಲ. ನಂತರ ಎಷ್ಟೇ ಕಷ್ಟವಿದ್ದರೂ ಚಾರು ಅವರ ಮನೆಯನ್ನು, ಮನೆಯವರನ್ನು ಮೆಚ್ಚಿಸುತ್ತಾಳೆ. ಹೀಗೆ ಮುಂದಿನ ಕಥೆ ಇರಲಿದೆ ಎಂದು ತಿಳಿದು ಬಂದಿದೆ. ರಾಮಾಚಾರಿಯ ಮುಂದಿನ ಕಥೆಯಲ್ಲಿ ಏನೆಲ್ಲ ತಿರುವುಗಳು ತೆಗೆದುಕೊಳ್ಳುತ್ತವೆ ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಡಿ ಬಾಸ್ ರವರ ಬಹು ನಿರೀಕ್ಷಿತ ಚಿತ್ರಕ್ಕೆ ಅಡ್ಡಗಾಲು ಹಾಕಿದ ನಿರ್ಮಾಪಕ ಉಮಾಪತಿ: ಡಿ ಬಾಸ್ ಗೆ ಶಾಕ್. ಉಮಾಪತಿ ಮಾಡಿದ್ದೇನು ಗೊತ್ತೇ??

Comments are closed.