ಕನ್ನಡದ ಟಾಪ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ರವರ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಹೇಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕರಾವಳಿ ಮೂಲದಿಂದ ಬೆಂಗಳೂರಿಗೆ ಬಂದು ಹಲವಾರು ಕೆಲಸಗಳನ್ನು ಮಾಡಿ ಹಲವಾರು ಕಷ್ಟಗಳನ್ನು ಪಟ್ಟು ನಂತರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಹೊಂದಿರುವವರು ರಿಷಬ್ ಶೆಟ್ಟಿ. ಹೌದು ಸ್ನೇಹಿತರೆ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದ ಎರಡನೆಯ ಉಪೇಂದ್ರ ಎಂದರೂ ಕೂಡ ತಪ್ಪಾಗಲಾರದು. ಏಕೆಂದರೆ ಉಪೇಂದ್ರರವರ ಹಾಗೆಯೇ ಚಾಣಾಕ್ಷತನದಿಂದ ನಟನೆ ಹಾಗೂ ನಿರ್ದೇಶಕನ ಎರಡು ಪಾತ್ರವನ್ನು ಕೂಡ ನಿಭಾಯಿಸಬಲ್ಲ ಅಂತಹ ಜಾಣ್ಮೆ ಅವರಲ್ಲಿದೆ. ಇಷ್ಟು ಮಾತ್ರವಲ್ಲದೆ ಮಕ್ಕಳ ಚಿತ್ರವನ್ನು ಕೂಡ ನಿರ್ದೇಶಿಸಿ ರಾಷ್ಟ್ರಪ್ರಶಸ್ತಿಯನ್ನು ಗೆದ್ದಂತಹ ವೈವಿಧ್ಯಮಯ ನಿರ್ದೇಶಕರಲ್ಲಿ ಅಗ್ರಗಣ್ಯರಾಗಿ ಕಾಣಿಸುತ್ತಾರೆ.

ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ರಿಷಬ್ ಶೆಟ್ಟಿ ಅವರಿಗೆ ಮೊದಲ ಅತ್ಯಂತ ದೊಡ್ಡ ಯಶಸ್ಸನ್ನು ತಂದುಕೊಟ್ಟ ಚಿತ್ರವೆಂದರೆ ಅದು ಕಿರಿಕ್ ಪಾರ್ಟಿ. ಇದಾದನಂತರ ರಿಷಬ್ ಶೆಟ್ಟಿ ಹಿಂದಿರುಗಿ ನೋಡಿದ ಮಾತೇ ಇಲ್ಲ. ಈಗ ಕನ್ನಡ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಸಂಸ್ಥೆ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಕಾಂತಾರ ಚಿತ್ರದಲ್ಲಿ ಕೂಡ ನಿರ್ದೇಶಕ ಹಾಗೂ ನಾಯಕನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಇತ್ತೀಚಿಗಷ್ಟೇ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಸಾಕಷ್ಟು ಸುದ್ದಿಯಾಗಿದ್ದರು. ಹೌದು ಸ್ನೇಹಿತರೆ ಇತ್ತೀಚಿಗಷ್ಟೇ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಾಗಿ ರಿಷಬ್ ಶೆಟ್ಟಿ ಅವರ ಪುತ್ರ ಕೃಷ್ಣನ ವೇಷವನ್ನು ತೊಟ್ಟ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಾಕಷ್ಟು ವೈರಲ್ ಆಗಿತ್ತು. ಜನರು ಕೂಡ ರಣ್ವಿತ್ ಶೆಟ್ಟಿ ಅವರ ಫೋಟೋವನ್ನು ಮೆಚ್ಚಿ ಥೇಟ್ ಕೃಷ್ಣನ ಹಾಗಿದ್ದಿಯಾ ಎಂಬುದಾಗಿ ಹೇಳಿದರು. ನೀವು ಕೂಡ ಫೋಟೋವನ್ನು ಈ ಕೆಳಗಡೆ ನೋಡಬಹುದಾಗಿದೆ.

Comments are closed.