ಅಗಲಿದ ತಮ್ಮ ಸ್ನೇಹಿತ ಸಂಚಾರಿ ವಿಜಯ ರವರ ನೆನಪಿನಲ್ಲಿ ಚಕ್ರವರ್ತಿ ಚಂದ್ರಚುಡ್ ಮಾಡಿದ್ದೇನು ಗೊತ್ತಾ?? ನಿಜಕ್ಕೂ ಗ್ರೇಟ್ ಕಣ್ರೀ

ನಮಸ್ಕಾರ ಸ್ನೇಹಿತರೇ ಕಳೆದೆರಡು ವರ್ಷಗಳಿಂದ ಅದರಲ್ಲೂ ಸ್ಯಾಂಡಲ್ವುಡ್ಗೆ ಸಾಕಷ್ಟು ನಷ್ಟಗಳು ಉಂಟಾಗಿವೆ. ಹೌದು ಒಂದು ಮಹಾಮಾರಿ ಯಿಂದ ಆದರೆ ಇನ್ನು ಕೆಲವು ವಯೋಸಹಜ ಅನಾರೋಗ್ಯದಿಂದ ಹಲವಾರು ಮಂದಿ ನಟರು ನಟಿಯರು ನಿರ್ದೇಶಕ ಹಾಗೂ ನಿರ್ಮಾಪಕರನ್ನು ನಾವು ಕಳೆದುಕೊಂಡು ದುಃಖದಲ್ಲಿ ದ್ದೇವೆ. ಈ ಪಟ್ಟಿಗೆ ಇತ್ತೀಚಿಗಷ್ಟೇ ಒಬ್ಬ ನಟ ಸೇರಿ ನಮ್ಮನ್ನು ದುಃಖದ ಮಡುವಿನಲ್ಲಿ ದೂಡಿದ್ದಾರೆ.

ಹೌದು ನಾವು ಮಾತನಾಡುತ್ತಿರುವುದು ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ನಟ ಸಂಚಾರಿ ವಿಜಯ್ ಅವರ ಕುರಿತಂತೆ. ನಿಷ್ಕಲ್ಮಶವಾಗಿ ನಗುತ್ತಿದ್ದ ಮನಸ್ಸು ಈಗ ನಮ್ಮ ಕಣ್ಮುಂದೆ ಇಲ್ಲ. ಹೌದು ಯಾರ ಸಪೋರ್ಟ್ ಇಲ್ಲದೆ ಸ್ಯಾಂಡಲ್ವುಡ್ನಲ್ಲಿ ರಂಗಭೂಮಿ ಕಲಾವಿದರ ಹಿನ್ನೆಲೆಯಿಂದ ಬಂದಂತಹ ಸಂಚಾರಿ ವಿಜಯ ರವರು ತಮ್ಮ ನಟನೆಯ ಮೂಲಕ ಚಿತ್ರದಿಂದ ಚಿತ್ರಕ್ಕೆ ಜನರ ಮನಸ್ಸನ್ನು ಗೆಲ್ಲುತ್ತ ಬಂದರು. ನಾನು ಅವನಲ್ಲ ಅವಳು ಎಂಬ ಚಿತ್ರದಿಂದ ಕೇವಲ ಕನ್ನಡಿಗರ ಮನಸ್ಸನ್ನು ಮಾತ್ರವಲ್ಲದೆ ಅತ್ಯಂತ ಪ್ರತಿಷ್ಠಿತ ಅತ್ಯುತ್ತಮ ನಟ ಎಂಬ ವಿಭಾಗಕ್ಕೆ ರಾಷ್ಟ್ರಪ್ರಶಸ್ತಿಯನ್ನು ಕೂಡ ಗೆದ್ದು ಕನ್ನಡದ ಹೆಮ್ಮೆಯನ್ನು ಹೆಚ್ಚಿಸಿದರು.

ಇತ್ತೀಚಿಗಷ್ಟೇ ಕನ್ನಡ ಬಿಗ್ ಬಾಸ್ ನಿಂದಾಗಿ ಮುಖ್ಯ ನನಗೆ ಬಂದಿರುವ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಕೂಡ ಇವರ ಹತ್ತುವರ್ಷದ ಸ್ನೇಹಿತ. ಚಂದ್ರಚೂಡ ರವರ ಬಗ್ಗೆ ನಿಮಗೆ ಗೊತ್ತಿರುವಂತೆ ಅವರು ನಟಿ ಶ್ರುತಿ ಅವರ ಎರಡನೇ ಮದುವೆ ಆಗಿರುವವರು. ಮೊನ್ನೆ ಮೊನ್ನೆಯಷ್ಟೇ ನಟ ಸಂಚಾರಿ ವಿಜಯ್ ರವರು ಮಳೆ ಬರುತ್ತಿರಬೇಕಾದರೆ ಬೈಕ್ನಲ್ಲಿ ಹೆಲ್ಮೆಟ್ ಇಲ್ಲದೆ ಸಂಚರಿಸುತ್ತಿರುವ ಬೇಕಾದರೆ ಬೈಕ್ ಸ್ಕಿಡ್ ಅಘಾತದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡು ನಮ್ಮನ್ನೆಲ್ಲ ಬಿಟ್ಟು ಇಹಲೋಕ ತ್ಯಜಿಸಿದರು ನಟ ಸಂಚಾರಿ ವಿಜಯ್.

ತಾವು ಇಹಲೋಕ ತ್ಯಜಿಸುವ ಸಂದರ್ಭದಲ್ಲೂ ಕೂಡ ತಮ್ಮ ಅಂಗಾಗಗಳನ್ನು ದಾನ ಮಾಡುವ ಮೂಲಕ ಅರ್ಥಪೂರ್ಣ ವಿದಾಯವನ್ನು ಈ ಜಗತ್ತಿಗೆ ಕೋರಿದರು. ತಮ್ಮ ಕೊನೆಯ ದಿನದಲ್ಲಿ ಸಹ ಬೇರೆಯವರ ಬಾಳಿಗೆ ಬೆಳಕಾಗುವ ಮೂಲಕ ತಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಂಡ ನಟ ಸಂಚಾರಿ ವಿಜಯ್ ರವರಿಗೆ ಕರುನಾಡ ಜನತೆ ಭಾವಪೂರ್ಣ ವಿದಾಯ ವನ್ನು ಕೋರಿದರು. ಸಂಚಾರಿ ವಿಜಯ ರವರ ಅಗಲಿಕೆಗೆ ಇಡೀ ಚಂದನವನದ ಖ್ಯಾತ ನಟರೆಲ್ಲ ಶ್ರದ್ದಾಂಜಲಿ ಕೋರಿದ್ದಾರೆ. ಪತ್ರಕರ್ತ ಚಕ್ರವರ್ತಿ ಚಂದ್ರಚುಡ್ ಕೂಡ ತಮ್ಮ ಗೆಳೆಯನ ಅಗಲಿಕೆಯನ್ನು ನೆನೆದು ಮರುಗಿದ್ದಾರೆ.

ಅಷ್ಟು ವರ್ಷಗಳ ಸ್ನೇಹಿತ ನಮ್ಮನ್ನು ಬಿಟ್ಟು ಹೋಗಿದ್ದಾನೆ ಎಂದರೆ ಎಂಥವರಿಗಾದರೂ ದುಃಖ ಆಗಲೇ ಬೇಕಲ್ಲವೆ ಸ್ನೇಹಿತರೆ. ಆದರೆ ಚಕ್ರವರ್ತಿ ಚಂದ್ರಚೂಡ್ ಅವರು ತಮ್ಮ ಗೆಳೆಯ ಸಂಚಾರ ವಿಜಯ್ ನೆನಪಿನಲ್ಲಿ ಏನು ಮಾಡಿದ್ದಾರೆ ಗೊತ್ತೆ. ಬನ್ನಿ ಸ್ನೇಹಿತರೆ ಕೇಳಿದರೆ ನಿಮ್ಮ ಮನಸ್ಸು ಕೂಡ ಕರಗುತ್ತದೆ. ಹೌದು ಚಂದ್ರಚುಡ್ ರವರು ಅಗಲಿದ ತಮ್ಮ ಸ್ನೇಹಿತ ಸಂಚಾರಿ ವಿಜಯ್ ರವರ ನೆನಪಿನಲ್ಲಿ ಮೃಗಾಲಯದಲ್ಲಿ ಒಂದು ಗಿಳಿಯನ್ನು ಪಡೆದಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಇದರ ಕುರಿತಂತೆ ಬರೆಯುತ್ತ ವಿಜಯ್ ನಿನಗೆ ಗೆಳೆಯ ಎಂದರೆ ಇಷ್ಟ ಅಲ್ವಾ ಅದಕ್ಕೆ ಇನ್ನೊಂದು ಪಡೆದಿದ್ದೇನೆ ಎಂಬ ರೀತಿಯಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಮೃಗಾಲಯದ ಪ್ರಾಣಿ ಸಂರಕ್ಷಣಾ ಅಭಿಯಾನದ ಕುರಿತಂತೆ ಮಾತನಾಡಿದ್ದರು ಈ ಕಾರ್ಯ ಕೂಡ ಅದಕ್ಕೆ ಪೂರಕವಾಗಿ ನಡೆದಂತಿದೆ. ಆದರೆ ನಮ್ಮ ಗೆಳೆಯನಿಗೆ ಅಂತಿಮ ವಿದಾಯವನ್ನು ಅವರ ಇಷ್ಟದ ಗಿಳಿಯನ್ನು ದತ್ತು ಪಡೆದುಕೊಳ್ಳುವ ಮೂಲಕ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ರವರು ಮಾಡಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡಿದೆ ಹಂಚಿಕೊಳ್ಳಿ

Comments are closed.