ಸಿಹಿ ಕಹಿ ಚಂದ್ರು ರವರು ದುಡ್ಡಿಲ್ಲದೆ ಚಿಕಿತ್ಸೆಗೆ ಕಷ್ಟ ಪಡುತ್ತಿರುವ ಕೈ ಹಿಡಿದು ಪ್ರಾಣ ಉಳಿಸಿದ ಮೇರು ನಟ ಯಾರು ಗೊತ್ತೇ?? ಅಷ್ಟಕ್ಕೂ ಅಂದು ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಸರಳ ಹಾಗೂ ಮುಗ್ಧ ವ್ಯಕ್ತಿತ್ವ ಹೊಂದಿರುವ ಸೂಪರ್ಸ್ಟಾರ್ ಎಂದರೆ ಅವರು ಸಾಹಸಸಿಂಹ ವಿಷ್ಣುವರ್ಧನ್ ಅವರು. ಭಾರತೀಯ ಚಿತ್ರರಂಗದಲ್ಲಿ ಪೀನಿಕ್ಸ್ ಎಂದೇ ಖ್ಯಾತರಾಗಿರುವ ಅಂತಹ ಅಪರೂಪದ ಪ್ರತಿಭೆಯ ನಟ. ಪೌರಾಣಿಕ ವಾಗಲಿ ಐತಿಹಾಸಿಕ ವಾಗಲಿ ಅಥವಾ ಮಾಡರ್ನ್ ಪಾತ್ರಗಳಾಗಲೀ ಯಾವುದೇ ಪಾತ್ರವನ್ನು ಕೂಡ ಸುಲಭವಾಗಿ ಹಾಗೂ ಪರಿಪೂರ್ಣವಾಗಿ ನಿರ್ವಹಿಸಬಲ್ಲ ಅಂತಹ ಅದ್ಭುತ ಕಲಾವಿದ.

ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಅವರು ಸೂಪರ್ಸ್ಟಾರ್ ಎಂದರೆ ತಪ್ಪಾಗಲಾರದು. ಯಾರಿಗೆ ಕಷ್ಟ ಇದೆ ಎಂದರೆ ಯಾವುದನ್ನೂ ಅವರು ಹೇಳುವುದಕ್ಕಿಂತ ಮುಂಚೆ ಅವರಿಗೆ ಪರಿಹಾರ ನೀಡಲು ಯೋಚಿಸುವಂತಹ ವ್ಯಕ್ತಿತ್ವ ವಿಷ್ಣುವರ್ಧನ್ ಅವರದು. ಇದಕ್ಕೆ ಒಂದು ನಿದರ್ಶನವೆಂದರೆ ಒಮ್ಮೆ ಸಿಹಿಕಹಿ ಚಂದ್ರು ರವರಿಗೆ ವೈದ್ಯರು ಪ್ರಪಂಚದಲ್ಲಿ ಅತ್ಯಂತ ವಿರಳವಾಗಿ ಕಾಣಿಸಿಕೊಳ್ಳುವ ಕಾಯಿಲೆ ನಿಮಗೆ ಬಂದಿದೆ ಎಂದು ಹೇಳುತ್ತಾರೆ. ಆಗ ಸಿಹಿ-ಕಹಿ ಚಂದ್ರುರವರು ಅದನ್ನು ಗುಣಪಡಿಸಲು ಹಣವನ್ನು ಒಟ್ಟುಗೂಡಿಸಲು ಒದ್ದಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಸಿಹಿ ಕಹಿ ಚಂದ್ರು ರವರನ್ನು ನೋಡಿದ ವಿಷ್ಣುವರ್ಧನ್ ರವರು ತನ್ನ ಬಳಿಗೆ ಕರೆದು ವಿಷಯ ಏನಾಯ್ತು ಎಂದು ಕೇಳುತ್ತಾರೆ. ಆಗ ವಿಷಯವನ್ನು ತಿಳಿದುಕೊಂಡ ವಿಷ್ಣುವರ್ಧನ್ ಅವರು ಅವರನ್ನು ತಮ್ಮ ವೈದ್ಯ ಸ್ನೇಹಿತರ ಬಳಿ ಸಿಹಿಕಹಿ ಚಂದ್ರು ರವರನ್ನು ಕಳಿಸಿಕೊಟ್ಟರು.

ವಿಷ್ಣುವರ್ಧನ್ ರವರ ಕಾರಿನಲ್ಲಿ ವೈದ್ಯರ ಬಳಿ ಬಂದಂತಹ ಸಿಹಿಕಹಿ ಚಂದ್ರು ರವರು ವೈದ್ಯರಿಂದ 15 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡರು. ನಂತರ ಒಂದು ವರ್ಷದ ಮಟ್ಟಿಗೆ ಮಾತ್ರೆ ಹಾಗೂ ಔಷಧಿಗಳನ್ನು ಪಡೆದುಕೊಂಡರು. ಆದರೆ ಅವರ ಬಳಿ ಹಣವಿರಲಿಲ್ಲ ಹೆದರಿಕೊಂಡೇ ವೈದ್ಯರ ಬಳಿ ಬಿಲ್ ಎಷ್ಟಾಯ್ತು ಎಂದು ಕೇಳಿದರು. ಆಗ ವೈದ್ಯರು ನಿಮ್ಮ ಬಿಲ್ಲನ್ನು ಸ್ವತಃ ವಿಷ್ಣುವರ್ಧನ್ ಅವರೇ ಹಣಕೊಟ್ಟು ಪೇಮೆಂಟ್ ಮಾಡಿದ್ದಾರೆ ಎಂದು ಹೇಳಿದರು. ಅಂದು ಸಿಹಿಕಹಿ ಚಂದ್ರು ರವರು ತಮ್ಮ ಪ್ರಾಣವನ್ನು ಉಳಿಸಿದ ಪ್ರಾಣ ದಾತರಾದಂತಹ ವಿಷ್ಣುವರ್ಧನ್ ರವರನ್ನು ಕಾರ್ಯಕ್ರಮದಲ್ಲಿ ನೆನೆಸಿಕೊಂಡು ಈ ವಿಚಾರವನ್ನು ಎಲ್ಲರೊಂದಿಗೆ ಹಂಚಿಕೊಂಡಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಸಾಹಸಸಿಂಹ ವಿಷ್ಣುವರ್ಧನ್ ರವರ ಮನಸ್ಸು ಎಷ್ಟು ವಿಶಾಲವಾದುದು ಎಂದು.

Comments are closed.