ಸರಿಗಮಪ ಬಿಟ್ಟು ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೆ ಜಿಗಿದಿರುವ ರಾಜೇಶ್ ರವರ ಬದಲು ತೀರ್ಪುದಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡಿಗರ ಅದರಲ್ಲೂ ಸಂಗೀತಾಸಕ್ತರ ಮೆಚ್ಚಿನ ಶೋ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ. ಬಹಳ ವರ್ಷಗಳಿಂದ ಪ್ರಸಾರವಾಗುತ್ತಿರುವ ಈ ಶೋ ಹಿಂದಿ ಸರೆಗಮಪ ಸಮ್ಗೀತ ಕಾರ್ಯಕ್ರಮದ ರೀತಿಯಲ್ಲಿಯೇ ನಡೆಸಲಾಗುತ್ತಿದೆ. ಈ ವರೆಗೆ ಸರೆಗಮಪ ಸಂಗೀತ ಕಾರ್ಯಕ್ರಮದ ಮೂಲಕ ಹಲವಾರು ಗಾಯನ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೆದ್ದವರು ಮಾತ್ರವಲ್ಲದೇ ಉತ್ತಮ ಕಂಠವನ್ನು ಹೊಂದಿರುವ ಹಲವಾರು ಗಾಯಕರು ಸಿನಿಮಾಗಳಲ್ಲಿ ಹಾಡಲು ಕೂಡ ಅವಕಾಶ ಪಡೆದುಕೊಂಡಿದ್ದಾರೆ.

ಇನು ಸರೆಗಮಪ ತೀರ್ಪುಗಾರರಲ್ಲಿ ಒಬ್ಬರಾದ ಅರ್ಜುನ್ ಜನ್ಯಾ ಸ್ವತಃ ಸಂಗೀತ ಸಂಯೋಜಕರಾಗಿದ್ದು ಹಲವಾರು ಗಾಯಕರನ್ನು ಸಿನಿಮಾಗಳಲ್ಲಿ ಹಾಡಲು ಅವಕಾಶ ಕೊಡುವುದರ ಮೂಲಕ ಜನತೆಗೆ ಪರಿಚಯಿಸಿದ್ದಾರೆ. ಸರೆಗಮಪ ಫೈನಲ್ ಇತ್ತೀಚಿಗೆ ಕೊನೆಗೊಂಡಿತ್ತು. ಈ ಶೋ ಮುಗಿಯಿತಲ್ಲ ಎಂಬ ಬೇಜಾರು ಪಟ್ಟುಕೊಂಡ ಸಂಗೀತ ಪ್ರಿಯರಿಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದೆ ವಾಹಿನಿ. ಅದೇನೆಂದರೆ ಸರೆಗಮಪ ಚಾಂಪಿಯನ್ ಶಿಪ್ ಶುರುವಾಗಲಿದೆ. ಹೌದು ಸ್ನೇಹಿತರೆ ಈ ವರೆಗೆ ಈ ಶೋ ನಲ್ಲಿ ಹಾಡಿದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಚಾಂಪಿಯನ್ ಶಿಪ್ ನಡೆಸಲಾಗುತ್ತದೆ. ಹಿಂದಿಯಲ್ಲೂ ಕೂಡ ಸರೆಗಮಪ ಚಾಂಪಿಯನ್ ಶಿಪ್ ನಡೆಸಲಾಗಿತ್ತು.

ಇನ್ನು ಜೀ ವಾಹಿನಿಯ ಸರೆಗಮಪ ಶೋ ನಲ್ಲಿ ಎಂದಿನಂತೆ ಅನುಶ್ರೀ ನಿರೂಪಕಿಯಾಗಿ ಕಾಣಿಸಿಕೊಳ್ಳುವುದರಲ್ಲಿ ನೋ ಡೌಟ್. ಹಾಗೆಯೇ ಮಹಾಗುರು ಹಂಸಲೇಖ, ವಿಜಯ ಪ್ರಕಾಶ್ ಹಾಗೂ ಅರ್ಜುನ್ ಜನ್ಯ ತೀರ್ಪುಗಾರರಾಗಿ ಮುಂದುವರೆಯಲಿದ್ದಾರೆ. ಆದರೆ ಈ ಹಿಂದಿನ ಸೀಸನ್ ನಲ್ಲಿದ್ದ ರಾಜೇಶ್ ಕೃಷ್ಣನ್ ಈ ಬಾರಿ ಇಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದು ಸಂಶಯ. ಯಾಕೆಂದರೆ ಈಗಾಗಲೇ ರಾಜೇಶ್ ಕೃಷ್ಣನ್ ಅವರು ಎದೆತುಂಬಿ ಹಾಡುವೆನು ಸ್ವರಾನ್ವೇಷಣೆ ಶೋ ನ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಿ ಇವರ ಬದಲಿಗೆ ಬೇರೆ ಯಾರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಾರೆ ಕಾದು ನೋಡಬೇಕು.

Comments are closed.