ಭಾವ ಕರೆದನೆಂದು ಆತನ ಮನೆಗೆ ಹೋದ ಇಂಜಿನಿಯರ್ ವಿದ್ಯಾರ್ಥಿನಿಗೆ ಕಾದಿತ್ತು ಬಿಗ್ ಶಾಕ್, ಅಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೆಲವು ಕಾರಣಕ್ಕೆ ಕೆಲವು ಅಚಾತುರ್ಯಗಳು ನಡೆದು ಹೋಗುತ್ತೆ. ಅದು ಸಂಬಂಧಗಳನ್ನು ಮುರಿದು ಕೊಳ್ಳುವಂಥದ್ದಿರಬಹುದು, ಅಥವಾ ಮತ್ತ್ಯಾವುದೋ ಕಾರಣಕ್ಕೆ ಮಾಡುವಂಥದ್ದಿರಬಹುದು. ಈ ಘಟನೆಗಳೆಲ್ಲಾ ನಡೆದುದ್ದಕ್ಕೆ ಕಾರಣ ಕೇಳಿದ್ರೆ ಒಮ್ಮೊಮ್ಮೆ ಇಂಥ ಕಾರಣಕ್ಕೂ ಈ ರೀತಿ ನಡೆಯುತ್ತಾ ಅಂತ ಆಶ್ಚರ್ಯವಾಗಬೇಕು.

ಅಂಥದ್ದೊಂದು ಘಟನೆಯನ್ನು ನಾವು ಹೇಳುತ್ತೇವೆ ಕೇಳಿ. ಇದು ಒಬ್ಬ ಇಂಜನಿಯರಿಂಗ್ ವಿದ್ಯಾರ್ಥಿನಿಗೆ ಸಂಬಂಧಪಟ್ಟ ಘಟನೆ. ಹೈದ್ರಾಬಾದ್ ನ ಕುಕುಟಪಳ್ಳಿಯಲ್ಲಿ ಭೂಪತಿ ಎಂಬವನು ವಾಸಿಸುತಿರುತ್ತಾನೆ. ಈತ 19 ವರ್ಷದ ಮಂಜುಳಾ ಎಂಬ ಹುಡುಗಿಗೆ ವರಸೆಯಲ್ಲಿ ಭಾವ. ಒಂದು ದಿನ ಭೂಪತಿ ಏನೋ ಮಾತನಾಡುವುದು ಇದೆ ಎಂದು ಹೇಳಿ ಮಂಜುಳಾ ಅವಳನ್ನು ಮನೆಗೆ ಕರೆಸಿಕೊಳ್ಳುತ್ತಾನೆ. ಆದರೆ ಏನೆನೋ ಮಾತಿನ ನಡುವೆ ಮಂಜುಳಾ ಅವಳ ಪ್ರಾಣ ಪಕ್ಷಿ ಹಾರಿ ಹೋಗುವಂತೆ ಮಾಡುತ್ತಾನೆ ಭೂಪತಿ.

ಈ ಭೂಪತಿ ಮಂಜುಳಾ ಅವಳನ್ನು ಮುಗಿಸಿ ಒಂದು ನೀರಿನ ಸೊಂಪಿನಲ್ಲಿ ಅವಳನ್ನು ಹಾಕಿ ಹೋಗುತ್ತಾನೆ. ನಂತರ ಮಂಜುಳಾ ಅವರ ಮನೆಯಲ್ಲಿ ಮಂಜುಳಾಳನ್ನು ಹುಡುಕಲು ಶುರು ಮಾಡುತ್ತಾರೆ. ಆದರೆ ಮಂಜುಳಾ ಸಿಗದಿದ್ದಾಗ ಪೋಲಿಸ್ ಕಂಪ್ಲೇಂಟ್ ಕೊಡುತ್ತಾರೆ. ನಂತರ ಪೋಲೀಸ್ ತನಿಖೆ ಶುರುವಾಗತ್ತೆ. ಪೋಲಿಸರು ಬಾಡಿ ಯನ್ನು ಪತ್ತೆ ಮಾಡುತ್ತಾರೆ. ಪೋಲಿಸರು ಹುಡುಕುತ್ತಿರುವುದು ಗೊತ್ತಾಗಿ ಭೂಪತಿ ಅಂಜಿ ತಾನೇ ಬಂದು ಶರಣಾಗುತ್ತಾನೆ. ಇನ್ನು ಭೂಪತಿ ಈ ರೀತಿ ಮಾಡಿದ ಕಾರಣ ಕೇಳಿ ಪೋಲೀಸರೂ ಕೂಡ ಆಶ್ಚರ್ಯಪಡುತ್ತಾರೆ. ಏನು ಆ ಕಾರಣ ಮುಂದೆ ಓದಿ.

ಭೂಪತಿ ಹಾಗೂ ಮಂಜುಳಾ ಚಿಕ್ಕ ವಯಸ್ಸಿಂದಲೇ ಪರಿಚಯ. ವರಸೆಯಲ್ಲಿ ಭಾವನಾಗುವ ಭೂಪತಿ ಹಾಗೂ ಮಂಜುಳಾ ಅವರ ಮದುವೆ ಮಾಡಲು ಅವರು ಚಿಕ್ಕ ವಯಸ್ಸಿನಲ್ಲಿರುವಾಗಲೇ ಈ ಎರಡು ಪ್ಯಾಮಿಲಿಯವರು ಒಪ್ಪಂದ ಮಾಡಿ ಕೊಂಡಿರುತ್ತಾರೆ. ಇದನ್ನೇ ನಂಬಿಕೊಂಡು ಮಂಜುಳಾಳನ್ನು ಪ್ರೀತಿಸುತ್ತಾನೆ ಭೂಪತಿ. ಆದರೆ ಮಂಜುಳಾ ಇದಕ್ಕೆಲ್ಲಾ ಯೋಚನೆ ಮಾಡದೇ ಬೇರೊಬ್ಬ ಹುಡುಗನನ್ನು ಪ್ರೀತಿಸುತ್ತಾಳೆ. ಈ ವಿಷಯ ತಿಳಿದ ಭೂಪತಿ ಆಕೆಯನ್ನು ಕರೆಸಿ ಮಂಜುಳಾ ಅವರ ಕತೆ ಮುಗಿಸುತ್ತಾನೆ. ಯಪ್ಪಾ ಈತನದ್ದು ಎಂತಹ ಮನಸ್ಥಿತಿ ಅಲ್ಲವೇ?

Comments are closed.