ಬಿಗ್ ಬಾಸ್ ಫೈನಲ್ ನಲ್ಲಿ ಸೋತರು, ಸೋತ ತಕ್ಷಣವೇ ಅರವಿಂದ್ ಕೆಪಿ ರವರಿಗೆ ಖುಲಾಯಿಸಿದ ಅದೃಷ್ಟ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಸೀಸನ್ 8 ರಲ್ಲಿ ತುಂಬಾ ಅದ್ಭುತವಾಗಿ ಆಟ ಮುಗಿಸಿದ್ದ ಅರವಿಂದ ಕೆ ಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಬಿಗ್ ಬಾಸ್ ನ ವಿನ್ನರ್ ಆಗಿ ಮಂಜು ಪಾವಗಡ ಆಯ್ಕೆಯಾಗಿದ್ದಾರೆ. ಇದು ಮಂಜು ಪಾವಗಡಅವರ ಅಭಿಮಾನಿಗಳಲ್ಲಿ ಹಾಗೂ ಅವರ ಮನೆಯವರಲ್ಲಿ ಹರ್ಷ ಮೂಡಿಸಿದೆ. ಪ್ರಪ್ರಥಮ ಬಾರಿಗೆ ಬಿಗ್ ಬಾಸ್ ನಲ್ಲಿ ಸ್ಪರ್ಧಿಗಳಿಗೆ ಸಿಕ್ಕ ಮತವನ್ನು ಬಹಿರಂಗ ಪಡಿಸಲಾಗಿದೆ. ಟಾಪ್ 5 ನಲ್ಲಿ ಇದ್ದ ಸ್ಪರ್ಧಿಗಳ ವೋಟ್ ನ್ನು ಕಿಚ್ಚ ಸುದೀಪ್ ವೇದಿಕೆಯಲ್ಲಿ ಬಹಿರಂಗವಾಗಿ ಹೇಳಿದ್ದರು.

5 ಜನರಲ್ಲಿ ಮೊದಲಿಗೆ ಮನೆಯಿಂದ ಹೊರಬಂದ ಪ್ರಶಾಂತ ಸಂಬರಗಿ 6,69,020 ಮತಗಳನ್ನು ಪಡೆದುಕೊಂಡಿದ್ದರೆ, ನಾಲ್ಕನೇ ಸ್ಥಾನ ದಲ್ಲಿದ್ದ ವೈಷ್ಣವಿ 10,21,831 ಮತಗಳನ್ನು ಪಡೆದಿದ್ದಾರೆ. ಇನ್ನು ಟಾಪ್ 3ಯಲ್ಲಿದ್ದ ದಿವ್ಯಾ ಉರುಡುಗ ಹಾಗೂ ವೈಷ್ಣವಿಗೆ ಹೆಚ್ಚಿನ ಅಂತರವಿರಲಿಲ್ಲ. ದಿವ್ಯಾ ಉರುಡುಗ 11,61,205 ಮತ ಪಡೆದು ಟಾಪ್ 3ವರೆಗೂ ಬಂದಿದ್ದರು. ಇನ್ನು ಬಿಗ್ ಬಾಸ್ ಟೈಟಲ್ ಗೆದ್ದ ಮಂಜು ಪಾವಗಡ ಹಾಗೂ ರನ್ನರ್ ಅಪ್ ಆದ ಅರವಿಂದ್ ಕೆ ಪಿ ಅವರ ನಡುವಲ್ಲಿ ಮತಗಳ ಎಣಿಕೆಯಲ್ಲಿ ಹೆಚ್ಚಿನ ಅಂತರವಿರಲಿಲ್ಲ.

ಮಂಜು ಪಾವಗಡ 45,03,495 ಮತಗಳನ್ನು ಪಡೆದಿದ್ದಾರೆ ಹಾಗೂ ಅರವಿಂದ ಕೆ ಪಿ ಅವರಿಗೆ ಸಿಕ್ಕ ಮತ 43,35,957. ಹಾಗಾಗಿ ಇಬ್ಬರ ನಡುವೆ ಪೈಪೋಟಿ ಕೊನೆವರೆಗೂ ಹಾಗೆಯೇ ಇತ್ತು. ಮಂಜು ಪಾವಗಡ ಅವರಿಗೆ ಟ್ರೋಫಿ ಹಾಗೂ 53 ಲಕ್ಷ ಬಹುಮಾನ ದೊರೆತರೆ ಅರವಿಂದ ಕೆ ಪಿ ಅವರಿಗೆ 11 ಲಕ್ಷ ಬಹುಮಾನ ಸಿಕ್ಕಿದೆ. ಆದರೆ ಇದಕ್ಕಿಂತ ದೊಡ್ಡ ಗಿಫ್ಟ್ ಎಂದರೆ ಕಿಚ್ಚ ಸುದೀಪ್ ವೇದಿಕೆಯ ಮೇಲೆ ಅರವಿಂದ ಅವರಿಗೆ ತಮ್ಮ ಕೋಟ್ ನ್ನು ನೀಡಿದರು. ಇದರಿಂದ ಅರವಿಂದ ಕೆ ಪಿ ಬಿಗ್ ಬಾಸ್ ಗೆದ್ದಷ್ಟೇ ಸಂತೋಷ ವ್ಯಕ್ತಪಡಿಸಿದ್ದಾರೆ. ಪ್ರತಿ ಸೀಸನ್ ನಲ್ಲೂ ಕಿಚ್ಚ ಸುದೀಪ್ ಅವರ ಕೈಯಿಂದ ಕೋಟನ್ನು ಪಡೆಯಲು ಬಿಗ್ ಬಾಸ್ ಸ್ಪರ್ಧಿಗಳು ಕಾಯುತ್ತಿರುತ್ತಾರೆ.

Comments are closed.