Biggboss Kannada: ಇನ್ನು 26 ನೇ ವಯಸ್ಸಿಗೆ ಇಡೀ ರಾಜ್ಯದ ಮನಗೆದ್ದಿದ್ದ ಕಾವ್ಯಶ್ರೇ ಬಿಗ್ ಬಾಸ್ ನಿಂದ ಹೊರಹೋಗಲು ಅಸಲಿ ಕಾರಣವೇನು ಗೊತ್ತೇ?? ಮೋಸದಾಟವೇ?

Biggboss Kannada: ಮಂಗಳ ಗೌರಿ ಮದುವೆ ಖ್ಯಾತಿಯ ನಟಿ ಕಾವ್ಯಶ್ರೀ (Kavyshree) ಬಿಗ್ ಬಾಸ್ (Bigg Boss) ಮನೆಯಿಂದ ಹೊರ ನಡೆದಿದ್ದಾರೆ. ಮೊನ್ನೆ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯ ಮನೆಯಿಂದ ಔಟ್ ಆಗಿದ್ದಾರೆ. ಸಾಕಷ್ಟು ವಾರಗಳಿಂದ ಅವರು ನಾಮಿನೇಟ್ ಆಗದೆಯೇ ಉಳಿದುಕೊಂಡು ಬಂದಿದ್ದರು. ಆದರೆ ಕಳೆದ ವಾರ ಅವರು ಎಲಿಮಿನೇಟ್ ಆಗಬಹುದು ಎಂದು ಕೂಡ ಅನುಮಾನ ವ್ಯಕ್ತವಾಗಿತ್ತು. ಆದರೆ ವಿನೋದ್ ಗೊಬ್ಬರಗಾಲ (Vinod Gobbaragala) ಮನೆಯಿಂದ ಆಚೆ ನಡೆದಿದ್ದರು. ಆದರೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯ ಮನೆಯಿಂದ ಹೊರ ನಡೆದಿದ್ದಾರೆ. ಭಾನುವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಕಾವ್ಯ ಅವರನ್ನು ಕಿಚ್ಚ ಸುದೀಪ್ (Kiccha Sudeep) ಎಲಿಮಿನೇಟ್ ಮಾಡಿದ್ದಾರೆ. ಆದರೆ ಕಾವ್ಯ ಅವರು ಇಷ್ಟು ಬೇಗ ಮನೆಯಿಂದ ಹೊರಬರಲು ಕಾರಣಗಳೇನು ಎನ್ನುವ ಚರ್ಚೆಯಾಗುತ್ತಿದೆ.

ನಟಿ ಕಾವ್ಯಶ್ರೀ ಮಂಗಳ ಗೌರಿ ಮದುವೆ ಧಾರವಾಹಿಯ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಕಲರ್ಸ್ ಕನ್ನಡದ ಜನಪ್ರಿಯ ಧಾರವಾಹಿ ಆದ ಈ ಕಥೆಯಲ್ಲಿ ಕಾವ್ಯ ಮಂಗಳ ಗೌರಿ ಪಾತ್ರ ಮಾಡಿ ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದರು. ಅವರಿಗೆ ಬಿಗ್ ಬಾಸ್ ನಲ್ಲಿ ಸ್ಪರ್ಧೆಯಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅದರಂತೆ ಅವರು ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮೊದಲಿನಿಂದಲೂ ತರಲೇ ತಮಾಷೆ ಮಾಡಿಕೊಳ್ಳುತ್ತಾ ಮುದ್ದು ಮುದ್ದಾಗಿ ಮಾತನಾಡುತ್ತಾ ಮನೆಯವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬಿಗ್ ಬಾಸ್ ನಲ್ಲಿ ಇದುವರೆಗೆ ಸ್ಪರ್ಧಿಗಳ ಪೈಕಿ ಎಲ್ಲಾ ಸ್ಪರ್ಧಿಗಳು ಕೂಡ ಅತ್ಯಂತ ಗೌರವ ಪ್ರೀತಿ ತೋರುತ್ತಿದ್ದ ಸ್ಪರ್ಧಿ ಎಂದರೆ ಅದು ಕಾವ್ಯಶ್ರೀ ಅವರ ಮೇಲೆಯೇ. ಹೌದು ಬಿಗ್ ಬಾಸ್ ಮನೆ ಎಂದರೆ ಯಾವಾಗಲೂ ಕಿತ್ತಾಟ, ಗಲಾಟೆ ಸರ್ವೇ ಸಾಮಾನ್ಯ. ಆದರೆ ಈ ಮನೆಯಲ್ಲಿ ಕಾವ್ಯ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡಿದ್ದರು ಎಂದು ಹೇಳಬಹುದು. ಇದೇ ಕಾರಣಕ್ಕೆ ಅವರು ಆರಂಭದ ಕೆಲವು ವಾರಗಳಲ್ಲಿ ನಾಮಿನೇಟ್ ಕೂಡ ಆಗಿರಲಿಲ್ಲ. ಇದನ್ನು ಓದಿ..Biggboss Kannada: ಮನೆಯಲ್ಲಿ ಒಂದಾದ ಪ್ರಶಾಂತ್ – ರೂಪೇಶ್ ರಾಜಣ್ಣ: ಇಷ್ಟು ದಿವಸ ಇದ್ದಂಗೆ ಇವಾಗ ಇಲ್ಲ. ಯಾಕೆ ಗೊತ್ತೇ??

biggboss kannada kavyashree | Biggboss Kannada: ಇನ್ನು 26 ನೇ ವಯಸ್ಸಿಗೆ ಇಡೀ ರಾಜ್ಯದ ಮನಗೆದ್ದಿದ್ದ ಕಾವ್ಯಶ್ರೇ ಬಿಗ್ ಬಾಸ್ ನಿಂದ ಹೊರಹೋಗಲು ಅಸಲಿ ಕಾರಣವೇನು ಗೊತ್ತೇ?? ಮೋಸದಾಟವೇ?
Biggboss Kannada: ಇನ್ನು 26 ನೇ ವಯಸ್ಸಿಗೆ ಇಡೀ ರಾಜ್ಯದ ಮನಗೆದ್ದಿದ್ದ ಕಾವ್ಯಶ್ರೇ ಬಿಗ್ ಬಾಸ್ ನಿಂದ ಹೊರಹೋಗಲು ಅಸಲಿ ಕಾರಣವೇನು ಗೊತ್ತೇ?? ಮೋಸದಾಟವೇ? 2

ಆದರೆ ಕಳೆದ ವಾರ ಸಾಕಷ್ಟು ಟಫ್ ಆಗಿತ್ತು, ಬೇರೆ ಬೇರೆ ಕಾರಣಗಳಿಗೆ ಕಾವ್ಯಶ್ರೀ ಅಷ್ಟಾಗಿ ಕಾಣಿಸಿಕೊಳ್ಳಲಾಗಲಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದರ ಜೊತೆಗೆ ಈ ವಾರ ಇಡೀ ಸಂಚಿಕೆಗಳನ್ನು ಕುಟುಂಬದವರಿಗಾಗಿ ಮೀಸಲಿಡಲಾಗಿತ್ತು. ಅಂದರೆ ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬಂದರು. ಅದರಂತೆ ಕಾವ್ಯಶ್ರೀ ಅವರ ತಾಯಿಯು ಬಂದಿದ್ದರು. ಆದರೆ ಅವರ ತಾಯಿ ಬರುವುದು ಬಹಳ ತಡವಾಗಿತ್ತು. ಅದಕ್ಕಾಗಿ ಅವರು ಸಾಕಷ್ಟು ರಾಧಾಂತವನ್ನೇ ಮಾಡಿದ್ದರು. ಅಲ್ಲದೆ ಈ ವಾರದ ಆಟಗಳಲ್ಲಿ ಅವರು ಅಷ್ಟು ಚುರುಕಾಗಿ ಕಾಣಿಸಿಕೊಂಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗೆ ಸಾಕಷ್ಟು ಕಾರಣಗಳಿಗೆ ಕಾವ್ಯ ಮನೆಯಿಂದ ಹೊರ ನಡೆದಿದ್ದಾರೆ ಎನ್ನಲಾಗುತ್ತಿದೆ. ಆಶ್ಚರ್ಯವೆಂದರೆ ಎಲಿಮಿನೇಷನ್ ಪ್ರಕ್ರಿಯೆ ಕೊನೆ ಹಂತದಲ್ಲೂ ಈ ಮನೆಯಲ್ಲಿ ಯಾರು ಉಳಿದುಕೊಳ್ಳಬೇಕು ಎನ್ನುವ ಕಾರಣಕ್ಕೆ ಬಹುತೇಕ ಎಲ್ಲರೂ ಕಾವ್ಯಶ್ರೀ ಅವರ ಹೆಸರನ್ನೇ ತೆಗೆದುಕೊಂಡಿದ್ದರು. ಅಷ್ಟು ಮನೆಯವರಿಗೆ ಕಾವ್ಯ ಕಂಡರೆ ಅಭಿಮಾನ ಮತ್ತು ಪ್ರೀತಿ ಉಳಿದುಕೊಂಡಿದೆ. ಆದರೆ ಜನರ ಲೆಕ್ಕಾಚಾರ ಬೇರೆಯಾಗಿತ್ತು. ಕಡಿಮೆ ವೋಟ್ ಪಡೆದಿರುವ ಕಾರಣ ಕಾವ್ಯಶ್ರೀ ಮನೆಯಿಂದ ಹೊರ ನಡೆದಿದ್ದಾರೆ. ಇದನ್ನು ಓದಿ.. Kannada News: ಆಗಿನ ಕಾಲದಲ್ಲಿಯೇ ಅಣ್ಣಾವ್ರ ಮದುವೆ ಕಾರ್ಡ್ ನಲ್ಲಿ ಏನೆಲ್ಲಾ ಬರೆದಿದ್ದರು ಎಂದರೆ ಮೈಯೆಲ್ಲಾ ಜುಮ್ ಅನ್ನುತ್ತದೆ. ಏನು ಬರೆದಿದ್ದಾರೆ ಗೊತ್ತೇ??

Comments are closed.